
ಶ್ರೀ ಮಹಾತಪಸ್ವಿ ಸೇವಾ ಪ್ರತಿಷ್ಠಾನ ಟ್ರಸ್ಟ್ ( ರಿ ) ಹರಿಹರ ಇವರು ಪ್ರತಿವರ್ಷವೂ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶಿಷ್ಟವಾದ ಅಭಿಯಾನವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ ಅದರಂತೆ ದಿನಾಂಕ : 11-03-2021 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶಿವನಿಗೆ ಅತ್ಯಂತ ಪ್ರಿಯವಾದ ರುದ್ರಾಕ್ಷಿಯನ್ನು ನೀಡುವ ಮೂಲಕ “ ರುದ್ರಾಕ್ಷಿ ಧಾರಣ ಸಂಸ್ಕಾರ ಪಾಲನ ” ಎಂಬ ವಿನೂತನವಾದ ಅಭಿಯಾನವನ್ನು ಪರಮಪೂಜ್ಯ ಅವಧೂತ ಶ್ರೀ ಶ್ರೀ ಕವಿ ಗುರುರಾಜ್ ಗುರೂಜಿಯವರ ಆಶೀರ್ವಾದದೊಂದಿಗೆ ನಡೆಸಲಾಗುತ್ತಿದೆ .

ಬೆಂಗಳೂರಿನಲ್ಲಿ ಕೆಳಕಂಡ ದೇವಸ್ಥಾನಗಳಲ್ಲಿ ಬರುವ ಎಲ್ಲಾ ಭಕ್ತಾದಿಗಳಿಗೆ ಉಚಿತವಾಗಿ ರುದ್ರಾಕ್ಷಿಯನ್ನು ನೀಡಲಾಗುತ್ತದೆ .
1. ಮುಕ್ತಿನಾಥೇಶ್ವರ ದೇವಸ್ಥಾನ ನೆಲಮಂಗಲ -562110
2. ಶ್ರೀ ಕಣಿವೆ ಮಹಾದೇಶ್ವರ ಸ್ವಾಮಿ ತಟ್ಟಿಕೇರಿ -562121
3.ಸೋಮೇಶ್ವರ ದೇವಸ್ಥಾನ ಹುಳಿಮಾವು -560076
4. ಮಂಜುನಾಥ ದೇವಸ್ಥಾನ ಲಗ್ಗೆರೆ ಮೆನ್ ರೋಡ್ -560058
ಈ ಕಾರ್ಯಕ್ರಮವು ಏಕಕಾಲದಲ್ಲಿ ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ ನಡೆಸಲಾಗುತ್ತದೆ , ಭಕ್ತಾದಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ .
ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ : ಶ್ರೀಮತಿ ರಾಜೇಶ್ವರಿ.ಕೆ.ಎಲ್ ಮೊ : 9972657183
City Today News
9341997936