ಗುಲಬರ್ಗಾ ವಿಶ್ವ ವಿದ್ಯಾಲಯ ಕಲಬುರಗಿಯ ಕುಲಪತಿಗಳು ಹಾಗೂ ಕುಲಸಚಿವರನ್ನು ಅಮಾನತ್ತು ಮಾಡಬೇಕು ಮತ್ತು ಕಲಬುರಗಿ ಜಿಲ್ಲೆಯ ಜನರ ಸಮಸ್ಯೆಗೆ ಸ್ಪಂದಿಸದೇ ಭ್ರಷ್ಟ ಅಧಿಕಾರಿಗಳ ರಕ್ಷಣೆಯಲ್ಲಿ ನಿಂತಿರುವ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಬೇಕು

ಕರ್ನಾಟಕ ರಾಜ್ಯದಲ್ಲಿ ಹೈದ್ರಾಬಾದ ಕರ್ನಾಟಕವು ಹಿಂದುಳಿದ ಆರ್ಥಿಕವಾಗಿ ಪ್ರದೇಶವಾಗಿದ್ದು ಭಾಗದ ಜನರು ಶೈಕ್ಷಣಿಕವಾಗಿ ಹಾಗೂ ಹಿಂದುಳಿದಿರುತ್ತಾರೆ . ಅಲ್ಲದೇ ಸರ್ಕಾರವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಕಷ್ಟು ಪ್ರಯತ್ನಿಸುತ್ತಿದ್ದು , ಆದರೇ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲ ಸಚಿವರ ವಿಶ್ವವಿದ್ಯಾಲಯವನ್ನು ಅಕ್ರಮಗಳ ಹೋರಟಿದ್ದು ವಿಷಾದಕರ ತಾಣ ಮಾಡಲು ಸಂಗತಿಯಗಿದೆ .

ಗುಲಬರ್ಗಾ ವಿಶ್ವವಿದ್ಯಾಲಯವು ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ವಿಫಲವಾಗಿರುವುದಂತು ನೈಜ ಸಂಗತಿಯಾಗಿದೆ . ವಿಶ್ವವಿದ್ಯಾಲಯದ ಆಡಳಿತ ಹದಗೆಟ್ಟು ಹೋಗಿದ್ದು ಪರೀಕ್ಷಾ ಕೋಠಡಿ ನೀಡಲು ಲಂಚ ಪಡೆದುಕೊಳ್ಳುತ್ತಿದ್ದು , ಪಾಸ್ | ತೇರ್ಗಡೆ ಮಾಡಲು ಹಣ ನೀಡುವುದು ಹೀಗೆ ಹಲವಾರು ಕೃತ್ಯಗಳು ನಡೆಸುತ್ತಿದ್ದಾರೆ . ಉದಾ : 27 ಡಿಸೆಂಬರ್ -2021 ದಿಂದ 05 – ಜನೇವರಿ -2022 ರ ಬಿಎಡ್ ಪರೀಕ್ಷೆಯಲ್ಲಿ ಕುಲಪತಿಗಳು ಮತ್ತು ಕುಲಸಚಿವರು ಲಕ್ಷ್ಮೀಬಾಯಿ ಕಮಠಾಣೆ , ಶಿಕ್ಷಣ ಮಹಾವಿದ್ಯಾಲಯ ಬೀದರೆ , ಇವರಿಗೆ ಪರೀಕ್ಷೆ ನಡೆಸಲು ಅನುಮತಿ ನೀಡಲು ರೂ . 25,000 / – ಗಳನ್ನು ಮತ್ತು ಸಾರಾಯಿ ಬಾಟಲಿಯನ್ನು ಕೇಳಿರುವುದಾಗಿ ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ / ಪ್ರಾಂಶುಪಾಲರು ಸ್ವತಃ ಹೇಳಿಕೆ ನೀಡಿದ್ದು ಮತ್ತು ಪರೀಕ್ಷಾ ಮೇಲ್ವಿಚಾರಕಿಯಾದ ಡಾ || ವಿದ್ಯಾ ವಾಡೇಕರ ಅವರು ಸಾಮೂಹಿಕ ನಕಲು ಮಾಡಿರುವ ವಿಡಿಯೋ | ಚಿತ್ರೀಕರಣ ದಿನಾಂಕ : 04.01.2022 ಕ್ಕೆ ಕುಲಪತಿಗಳು , ಗುಲಬರ್ಗಾ ವಿಶ್ವವಿದ್ಯಾಲಯ , ಇವರಿಗೆ ಸಲ್ಲಿಸಿದ್ದರು . ಸಹ ಅವರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಆದರೆ ನಾವು ಪ್ರತಿ ಭಟನೆ ಮೂಲಕ ರಾಜ್ಯ ಪಾಲರ ಗಮನಕ್ಕೆ ತಂದ ನಂತರ ಅಂದರೆ , ದಿನಾಂಕ18.01.2022 ಕ್ಕೆ ವರದಿ ಕೇಳಿ ಪತ್ರ ಬರೆದಿರುತ್ತಾರೆ . ಮೇಲ್ನೋಟಕ್ಕೆ ಇವರುಗಳು ಶಾಮಿಲಾಗಿ ಪ್ರಕರಣವನ್ನು ಮುಚ್ಚು ಹಾಕುವ ಪ್ರಯತ್ನದಲ್ಲಿದ್ದರು ಅದಕ್ಕಾಗಿ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ , ರಾಜ್ಯದ ಗಮನಕ್ಕೆ ತಂದು ಇಂತಹ ಭ್ರಷ್ಟ ಅಧಿಕಾರಿಗಳನ್ನು ವಜಾ ಮಾಡುವಂತೆ ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಗೌರವಾನ್ವಿತ ರಾಜ್ಯ ಪಾಲರಿಗೆ ಮನವಿ ಮಾಡುತ್ತೇವೆ . ಮಾನ್ಯರೇ , ಕಲಬುರಗಿ ಜಿಲ್ಲೆಯಲ್ಲಿ ಹಲವಾರು ಇಲಾಖೆಗಳಲ್ಲಿ ಬ್ರಷ್ಟಾಚಾರ ತಾಂಡವ ಆಡುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ದೂರು ನೀಡಿದರು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಅಧಿಕಾರಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿಯನ್ನು ಈ ಕೂಡಲೆ ಕಲಬುರಗಿ ಜಿಲ್ಲೆಯಿಂದ ಕೈ ಬಿಡಬೇಕು ಎಂದು ಈ ಮೂಲಕ ಆಗ್ರಹಿಸುತ್ತವೆ .

ನಮ್ಮ ಬೇಡಿಕೆಗಳು : 1. ಕಲಬುರಗಿ ವಿಭಾಗದಲ್ಲಿ ಜಿ.ಎನ್.ಎಮ್ ಮತ್ತು ನರ್ಸಿಂಗ್ ಪರಿಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲಾಗಿದ್ದು ಈ ಕೂಡಲೇ ಮರು ಪರೀಕ್ಷೆ ಮಾಡಬೇಕು . 2. ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಧವಾ ಪುನರ್ ವಿವಾಹ ಯೋಜನೆಯಲ್ಲಿ ಅಕ್ರಮ ಮಾಡಿರುವ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು . 3. ಕಲಬುರಗಿ ಜಿಲ್ಲಾಡಳಿತ ಸಾರ್ವಜನಿಕರ ಕುಂದು ಕೋರತೆಗಳಿಗೆ ಸ್ಪಂದಿಸುತ್ತಿಲ್ಲ .. ಈ ಜಿಲ್ಲೆಯ ಆಡಳಿತ ಯಂತ್ರ ಕುಸಿದು ಬಿದ್ದಿದೆ ಈ ಕೂಡಲೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಬೇಕು . 4. ಕಲಬುರಗಿ ಮಹಾನಗರ ಪಾಲಿಕೆ ಮತ್ತು ಕೋಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಗಳು ರಾಜೀವ್ ಆವಾಜ್ ಯೋಜನೆ ಮನೆಗಳ ಹಂಚಿಕೆಯಲ್ಲಿ ಅಕ್ರಮ ಮಾಡಿದ್ದು ಅವರುಗಳನ್ನು ವಜಾ ಮಾಡಿ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಬೇಕು . ಮತ್ತು ಕಲಬುರಗಿ ನಗರದಲ್ಲಿ ಅಕ್ರಮವಾಗಿ ಉದ್ಯಾನ ವನದ ಜಾಗದಲ್ಲಿ ಪೆಟ್ರೊಲ್ ಬಂಕ್ ಮನೆಗಳು ನಿರ್ಮಿಸಿದ್ದು ಅವುಗಳನ್ನು ತೇರೆವುಗೋಳಿಸಬೇಕು .

ಈ ಮೇಲಿನ ನಮ್ಮ ಎಲ್ಲಾ ಬೇಡಿಕೆಗಳನ್ನು ಸರಕಾರ ಈ ಕೂಡಲೆ ಇಡೆರಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತವೆ . ಇಲ್ಲವಾದರೆ ರಾಜ್ಯ ಸರಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತವೆ .

– ಸೈಬಣ್ಣಾ ಜಮಾದಾರ

ಶಿವರಾಜ ಶಖಾಪೂರ

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.