ಬಿಬಿಎಂಪಿ ಕೇಂದ್ರ ಕಛೇರಿಯ ಆವರಣದಲ್ಲಿ ಬೃಹತ್‌ ಧರಣಿ

10.03.2022 ರ ಗುರುವಾರ ಬೆಳಗ್ಗೆ 10.00 ಗಂಟೆಗೆ ಬಿಬಿಎಂಪಿ ಕೇಂದ್ರ ಕಛೇರಿಯ ಆವರಣದಲ್ಲಿ ಬೃಹತ್‌ ಧರಣಿ .

ನೇರವೇತನ ಪೌರಕಾರ್ಮಿಕರು , ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿ ಈ ಮೇಲ್ಕಂಡ ದಿನಾಂಕದಂದು ಬೃಹತ್ ಧರಣಿಯನ್ನು ಶ್ರೀ ನಾರಾಯಣ ( ಮೈಸೂರು ) , ರಾಜ್ಯಾಧ್ಯಕ್ಷರು , ಮಾಜಿ ಅಧ್ಯಕ್ಷರು , ಸಫಾಯಿ ಕರ್ಮಚಾರಿ ಆಯೋಗ ಮಾಜಿ ಮಹಾಪೌರರು , ಮೈಸೂರು ಮಹಾನಗರ ಪಾಲಿಕೆ ರವರ ನೇತ್ರುತ್ವದಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ . ನೇರವೇತನ ಪೌರಕಾರ್ಮಿಕರ ಹಲವಾರು ಬೇಡಿಕೆಗಳನ್ನು ಈಡೇರಿಸದೇ ಇರುವ ಕಾರಣದಿಂದಾಗಿ ಈ ಬೃಹತ್ ಧರಣಿಯಲ್ಲಿ ಸುಮಾರು ಪೌರಕಾರ್ಮಿಕರು ಸಾವಿರಾರು ಸಹಸ್ರಾರು ಜನರು ಪಾಲ್ಗೊಳ್ಳಲಿದ್ದಾರೆ . ಈ ನೇರವೇತನ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವವರೆಗೂ ಈ ಹೋರಾಟವು ಮುಂದುವರೆಯುತ್ತದೆ .

ಇವರುಗಳು ಕೋವಿಡ್ -19 , ವೈರಾಣು ಸಾಂಕ್ರಾಮಿಕ ರೋಗ ಬಂದಾಗಿನಿಂದ ಪೊಲೀಸ್ ಸಿಬ್ಬಂದಿಗಳು ಹಾಗೂ ಡಾಕ್ಟರ್‌ಗಳು ತಮ್ಮ ಪ್ರಾಣವನ್ನು ಹೊತ್ತೆ ಇಟ್ಟು ಕೆಲಸ ನಿರ್ವಹಿಸಿರುತ್ತೀರಿ . ಅದೇ ರೀತಿಯಾಗಿ ನಮ್ಮ ಪೌರಕಾರ್ಮಿಕರು ಸಹ ತಮ್ಮ ತಮ್ಮ ಪ್ರಾಣಗಳನ್ನು ಹೊತ್ತೆ ಇಟ್ಟು ಕೋವಿಡ್ -19 ರ 3 ಹಂತದಲ್ಲಿ ಕೆಲಸ ಮಾಡಿರುತ್ತಾರೆ . ಆದರೆ ಬಿಬಿಎಂಪಿ ಅಧಿಕಾರಿಗಳಿಂದ ಮತ್ತು ನಮ್ಮ ಸರ್ಕಾರದಿಂದ ಯಾವುದೇ ನಮ್ಮ ಬೇಡಿಕೆಗಳು ಈಡೇರಿಸಿರುವುದಿಲ್ಲ . ಆದ್ದುದರಿಂದ ಈ ಮೇಲ್ಕಂಡ ದಿನಾಂಕದಂದು ಅಧಿಕಾರಿಗಳಿಗೆ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಬೃಹತ್ ಧರಣಿಯಲ್ಲಿ ಸುಮಾರು ಪೌರಕಾರ್ಮಿಕರು ಸಾವಿರಾರು ಸಹಸ್ರಾರು ಜನರು ಸೇರುವ ಅವಕಾಶವಿರುತ್ತದೆ ಎಂದು ಮುನಿರಾಜು, ಅಧ್ಯಕ್ಷರು , ಬೆಂಗಳೂರು ನಗರ ಮಾಧ್ಯಮ ಗೋಷ್ಥಿಯಲ್ಲಿ ತಿಳಿಸಿದರು.

ಮಾಧ್ಯಮ ಗೋಷ್ಥಿಯಲ್ಲಿ ಬಿ.ಎಂ.ಸುರೇಶ್ ಬಾಬು ರಾಜ್ಯ ಉಪಾಧ್ಯಕ್ಷರು, ಎಂ.ಜಿ.ಶ್ರೀನಿವಾಸ್ ಉಪಾಧ್ಯಕ್ಷರು , ಬೆಂ.ನಗರ, ಎಂ.ನಾಗರಾಜು ( ಹೆಬ್ಬಾಳ ) ರಾಜ್ಯ ಕಾರ್ಯಾಧ್ಯಕ್ಷರು, ಎಂ.ನರಸಿಂಹ ನಾಯ್ಡು ಮಹಾ ಸಂ . ಕಾರ್ಯದರ್ಶಿ , ಬೆಂ.ನಗರ & ಗ್ರಾಮಾಂತರ ಮತ್ತು ಎನ್.ಅಂಜನೇಯಲು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತ ಸಂಯೋಜಕರು ಹಾಜರಿದ್ದರು.

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.