
ಜೀವನ ಪರಿವರ್ತನೆಗೆ ವಿಜ್ಞಾನ ಮತ್ತು ಆಧ್ಯಾತ್ಮದ ಸಮ್ಮಿಳನ
ರಷ್ಮಿ ಅಯ್ಯಪ್ಪ
ಮಾನವನ ಆತ್ಮಪರಿವರ್ತನೆಗೆ ನೆರವಾಗುವ ಆಶ್ವಾಸನ ವಿಜ್ಞಾನದ ಸೃಷ್ಟಿಕರ್ತರು

ಆಶ್ವಾಸನ್ನ 17 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗುರುವಾರ, 2 ನೇ ಜೂನ್, ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮವನ್ನು ತರುವ ನಿಟ್ಟಿನಲ್ಲಿ ಆಶ್ವಾಸನ ಕಾರ್ಯದ ಪ್ರಸ್ತುತಿ. ಜನರ ಜೀವನವನ್ನು ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿವರ್ತಿಸಲು ಆಶ್ವಾಸನ್ ಸೈನ್ಸ್ ™ ನ ಅನನ್ಯ ಸೇವೆಗಳನ್ನು ಒದಗಿಸುವ ಆಶ್ವಾಸನ್.

ಆಶ್ವಾಸನ್ ತನ್ನ 17 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದೆ ಎಂದು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಆಶ್ವಾಸನ್ ಸೈನ್ಸ್ TM ನ ನವೀನ ವಿಧಾನದ ಮೂಲಕ ತಲುಪುವ ಮೂಲಕ, ಇದು ಸಾವಿರಾರು ಜನರನ್ನು ತಲುಪಿದೆ, ಕ್ಷೀಣಗೊಳ್ಳುವ ಪರಿಸ್ಥಿತಿಗಳು, ಜೀವನಶೈಲಿ ಸಮಸ್ಯೆಗಳು, ಬೆಳವಣಿಗೆಯ ಅಸ್ವಸ್ಥತೆಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ಕೋವಿಡ್ 19 ಸಂಬಂಧಿತ ದೈಹಿಕ ಮತ್ತು ಮಾನಸಿಕ ಸ್ಥಿತಿಗಳು ಮತ್ತು ಇನ್ನೂ ಹೆಚ್ಚಿನವು ಸೇರಿದಂತೆ ಅಸಂಖ್ಯಾತ ಪರಿಸ್ಥಿತಿಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ತಂದಿದೆ. ಜೀವನದ ಎಲ್ಲಾ ಹಂತಗಳ ಜನರು ಆಶ್ವಾಸನ್ ಸೇವೆಗಳಿಂದ ಪ್ರಯೋಜನ ಪಡೆದಿದ್ದಾರೆ ಎಂದು ಮೈಥಿಲಿ.ಬಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
1 ಇದೇ ಕೆಲಸವನ್ನು ಮಾಡಬೇಕು ಎಂದು ನಿಮಗೆ ಅನಿಸಿದ್ದಾದರೂ ಏಕೆ ಮತ್ತು ಹೇಗೆ?
ನಾನು ಜೀವನವನ್ನು ತುಂಬ ವಿಭಿನ್ನವಾಗಿ ಅನುಭವಿಸಿದ್ದೇನೆ. ಜೀವನ ಅಂತರ್ಗತವಾಗಿ ವಿವಿಧ ಸೆಳಹುಗಳ ಸಮಾಗಮ ಹಾಗೂ ಮನಸ್ಸು-ದೇಹ-ಆತ್ಮ ಏಕತೆಗೆ ಸ್ಪಷ್ಟತೆ ನೀಡುವ ಸಂಕೀರ್ಣ ಜಾಲ ಎಂದು ನಾನು ಪ್ರಬಲವಾಗಿ ನಂಬಿದ್ದೇನೆ. ಜನರು ಜೀವನವನ್ನು ಅವರು ಅನುಭವಿಸುವ ರೀತಿಯಲ್ಲಿ ನಾನು ಅನುಭವಿಸುತ್ತೇನೆ.
ಇದನ್ನು ಈಗ ಆಶ್ವಾಸನ್ನಲ್ಲಿ ಲೈಫ್ಫೋರ್ಸ್ ಮೆಕ್ಯಾನಿಸಂ ಎಂದು ಕರೆಯಲಾಗುತ್ತದೆ. ನನಗೆ, ಅಸ್ತಿತ್ವದ ಅನುಭವವು ಬಹು ಆಯಾಮದ ಒಂದು ದಟ್ಟ ವಾಸ್ತವವಾಗಿದೆ, ಅದು ಪ್ರಕೃತಿಯ ಕಾರಣ ಮತ್ತು ಪರಿಣಾಮದ ಚಕ್ರವನ್ನು ತೋರಿಸುತ್ತದೆ ಮತ್ತು ಒಬ್ಬರ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳ ಹಿಂದಿನ ಮೂಲ ಕಾರಣಕ್ಕೆ ಸ್ಪಷ್ಟತೆಯನ್ನು ತರುತ್ತದೆ. ನಾವು, ಆಶ್ವಾಸನ್ನಲ್ಲಿ ಈ ವಿದ್ಯಮಾನವನ್ನು ಟೈಮ್ಲೆಸ್ ಫಿನಾಮಿನನ್ ಎಂದು ಕರೆಯುತ್ತೇವೆ.
ನನ್ನ ಜೀವನದ ಅನುಭವಗಳಿಂದ ನನ್ನ ಅರಿವಿಗೆ ಬಂದಿರುವ ವಿಷಯವೇನೆಂದರೇ ಜನರಿಗೆ ತಮ್ಮ ನಿಜವಾದ ಅಸ್ತಿತ್ವದ ವಾಸ್ತವತೆಯ ಬಗ್ಗೆ ಆಳವಾದ ಅರಿವಿಲ್ಲ. ಇದರಿಂದ ದೇಹ ಮತ್ತು ಮನಸ್ಸಿನ ಮೇಲೆ ಉಂಟಾಗುವ ಪರಿಣಾಮಗಳು ಮತ್ತು ಅದರಿಂದ ಬರಬಹುದಾದ ಅಪಕ್ರಿಯೆ ಹಾಗೂ ರೋಗ ರುಜಿನಗಳಿಗೆ ತುತ್ತಾಗುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.
ಅಪಸಾಮಾನ್ಯ ಪ್ರಕ್ರಿಯೆಗಳು ಮತ್ತು ರೋಗಗಳ ರೂಪದಲ್ಲಿ ಇದರ ಪ್ರಭಾವಕ್ಕೆ ನಾನು ಸಹ ಸಾಕ್ಷಿಯಾಗಿದ್ದೇನೆ. ವ್ಯಕ್ತಿಗಳನ್ನು ಅವರ ಅನಂತ ಸ್ವಯಂಗೆ ಸಂಪರ್ಕಿಸುವ ಮೂಲಕ ಅವರನ್ನು ರೋಗಗಳಿಂದ ಮುಕ್ತಗೊಳಿಸಲು ಸಾಧ್ಯ ಎಂಬ ದಿವ್ಯ ಅನುಭವ ನನಗಾಯಿತು.
ನನ್ನ ತಂದೆ-ತಾಯಿ ತೋರಿದ ಅಪರಿಮಿತ ಪ್ರೀತಿ ಮತ್ತು ನನ್ನನ್ನು ಅವರ ತಮ್ಮಲ್ಲಿ ಒಬ್ಬನೆಂದು ಸ್ವೀಕರಿಸಿದ ರೀತಿ ನನ್ನ ಜೀವನ ಪಯಣವನ್ನು ರೂಪಿಸಿದೆ. ನಾನಿರುವ ವಾಸ್ತವದ ಅರಿವು ಸಮಯ ಬಂದಾಗ ಅನಂತ ಜಗತ್ತಿನೊಂದಿಗಿನ ಸಂಪರ್ಕಕ್ಕೆ ಬರಲು ಅನುಕೂಲ ಕಲ್ಪಿಸುತ್ತದೆ ಎಂಬುದು ನನಗೆ ತಿಳಿದಿತ್ತು. ನಾವು ಅವಕಾಶ ನೀಡಿದರೆ ಪ್ರಕೃತಿಯು ಜೀವನದಲ್ಲಿ ಅನೇಕ ಅದ್ಭುತಗಳನ್ನು ನೀಡುತ್ತದೆ ಮತ್ತು ನಾನು ಅದಕ್ಕೆ ತೆರೆದುಕೊಂಡೆ. ನನ್ನ 30ನೇ ವಯಸ್ಸಿನಲ್ಲಿ ಅದು ನನಗೆ ಆಶ್ವಾಸನ್ ಅನ್ನು ತಂದುಕೊಟ್ಟಿತು.
ಲೈಫ್ಫೋರ್ಸ್ ಮೆಕ್ಯಾನಿಸಂ ಮತ್ತು ಟೈಮ್ಲೆಸ್ ಫಿನಾಮಿನನ್ ನಲ್ಲಿ ಸಂಶೋಧನೆಯ ಆಧಾರದ ಮೇಲೆ ಆಶ್ವಾಸನ್ ವಿಜ್ಞಾನವನ್ನು ಸ್ಥಾಪಿಸಿದೆ. ಈ ಮಾರ್ಗವು ಜಗತ್ತನ್ನು ಮಾನವೀಯತೆಯ ಮೂಲ ಸೃಷ್ಟಿಯತ್ತ ಸಾಗಲು ನೆರವಾಗುತ್ತದೆ ಮತ್ತು ಪ್ರಕೃತಿ ಸಂರಕ್ಷಣೆಯ ಕರ್ತವ್ಯದತ್ತ ಸಾಗಲು ನೆರವಾಗಲಿದೆ.
2 ಆಶ್ವಾಸನ್ ಅಸ್ತಿತ್ವಕ್ಕೆ ಬಂದಿದ್ದು ಹೇಗೆ?
ಆಶ್ವಾಸನ್ ವಿಜ್ಞಾನವನ್ನು ಜಗತ್ತಿಗೆ ಪ್ರಸರಿಸುವ ಉದ್ದೇಶದಿಂದ ನಾನು ೨೦೦೫ರ ಮೇ ೨೩ರಂದು ಆಶ್ವಾಸನ್ ಅನ್ನು ಸ್ಥಾಪಿಸಿದೆ. ಆಶ್ವಾನಸ್ ವಿಜ್ಞಾನವು ಜೀವರಾಶಿ ಮತ್ತು ಪ್ರಕೃತಿಯ ನಡುವೆ ಇರುವ ಸಂಬಂಧವನ್ನು ಮರುಸ್ಥಾಪಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಜನ ತಮ್ಮ ಮೂಲ ಇರುವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ.
ಆಶ್ವಾಸನ್ ವಿಜ್ಞಾನವು ಮೂಲದಲ್ಲಿ ಆಧ್ಯಾತ್ಮಿಕ, ವಿಧಾನದಲ್ಲಿ ವೈಜ್ಞಾನಿಕ ಹಾಗೂ ಅನುಭವವೇದ್ಯವಾದ ತಂತ್ರವಾಗಿದೆ.
ಆಶ್ವಾಸನ್ ಎಂಬುದು ಕನಸೊಂದರ ಸಾಕಾರ ಎಂದೇ ನಾನು ಭಾವಿಸುತ್ತೇನೆ. ಜೀವನದ ಮೇಲೆ ಭರವಸೆಯನ್ನೇ ಕಳೆದುಕೊಂಡ ಎಷ್ಟೊ ಜನರು ಇಲ್ಲಿ ಬಂದು ಮತ್ತೆ ಜೀವನವನ್ನು ಅನುಭವಿಸುವ, ಸಂಭ್ರಮಿಸುವ, ಜಾತಿ-ಮತ-ಧರ್ಮದ ಹಂಗಿಲ್ಲದೇ ಕಲೆತು ಬೆರೆತು ಬಾಳುವಂತೆ ಮಾಡುವ ವೇದಿಕೆ ಇದಾಗಿದೆ. ಆಶ್ವಾಸನ್ನಲ್ಲಿ ಜನ ತಮ್ಮತನವನ್ನು ಅನ್ವೇಷಿಸುವುದೇ ಅಲ್ಲದೇ ಕನಸು ಕಾಣಲು, ಸುಖದ ಬದುಕು ಕಟ್ಟಿಕೊಳ್ಳಲು ಇರುವ ಅವಕಾಶಗಳ ಬಗ್ಗೆ ತಿಳಿವು ಪಡೆಯುತ್ತಾರೆ. ಭರವಸೆ ಕಳೆದುಕೊಂಡವರಿಗೆ ಹೊಸ ಕನಸು ಚಿಗುರಿಸುವ ಸಾಧನವಾಗಿ ಆಶ್ವಾಸನ್ ಜನ್ಮ ತಾಳಿದ್ದು, ಅದೇ ಉನ್ನತ ಪಥದಲ್ಲಿ ಮುನ್ನಡೆಯಲಿದೆ.
3 ಆಶ್ವಾಸನ್ ವಿಜ್ಞಾನ ಹೇಗೆ ಕೆಲಸ ಮಾಡುತ್ತದೆ? ಆಶ್ವಾಸನ್ನಲ್ಲಿ ಉಪಶಮನದ ಮಹತ್ವ ಏನು?
ಆತ್ಮದ ಅನಂತತೆಯೆಡೆಗೆ ಅನುಭವಾಧಾರಿತ ಪಯಣವೇ ಆಶ್ವಾಸನ್ನ ಮೂಲಾಧಾರವಾಗಿದ್ದು, ಇದನ್ನು ನಾವು ’ಶೂನ್ಯ ತರಂಗ’ ಎಂದು ಕರೆಯುತ್ತೇವೆ.
ಅದು ದೇಹ, ಮನಸ್ಸು ಮತ್ತು ಚೇತನದ ಜಾಗೃತಿಯನ್ನು ಮರುಸ್ಥಾಪಿಸುತ್ತದೆ. ಈ ವಿಧಾನದ ಮೂಲಕ (ದೇಹ-ಮನಸ್ಸು-ಆತ್ಮ ಜಾಗೃತಿ) ಮೂಲಕ ಮನುಷ್ಯ ತನ್ನ ಮೂಲವನ್ನು ಕಂಡುಕೊಳ್ಳಲು ನೆರವಾಗುವುದಲ್ಲದೇ ತನ್ನಿಂತಾನೆ ಪರಿಹಾರ ಕಂಡುಕೊಂಡು ಪರಿಪೂರ್ಣ ಜೀವನ ಸಾಗಿಸಲು ಸಹಾಯ ಮಾಡುತ್ತದೆ.
ಆಶ್ವಾಸನ್ನಲ್ಲಿ ಉಪಶಮನ ಎಂದರೆ ದೇಹ-ಮನಸ್ಸು-ಆತ್ಮದ ಕಾರ್ಯವಿಧಾನವನ್ನು ಸಮಗ್ರವಾಗಿ ಮರುಸ್ಥಾಪಿಸುವುದೇ ಆಗಿದೆ.
ಇದು ಸುಪ್ತಾವಸ್ಥೆಯಲ್ಲಿ ನಡೆಯುವ ವಿಧಾನವಾಗಿದ್ದು, ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ನೆಲೆಗಟ್ಟಿನಲ್ಲಿ ಜೀವನಸ ಅರ್ಥವನ್ನು ಕಂಡುಕೊಳ್ಳಲು ನೆರವಾಗಲಿದೆ. ಈ ಕಳೆದ ೧೭ ವರ್ಷಗಳಲ್ಲಿ ಆಶ್ವಾಸನ್ ನೂರಾರು ಜನರ ಬಾಳಿನಲ್ಲಿ ಕವಿದಿದ್ದ ಅಂಧಕಾರವನ್ನು ನಿವಾರಿಸಿದೆ. ರೋಗಗಳನ್ನು ತಡೆಯುವ, ಗುಣಮುಖಗೊಳಿಸುವ ಹಿಮ್ಮುಖಗೊಳಿಸುವ, ಉಪಶಮನ ಮಾಡುವ ಮೂಲಕ ಆಶ್ವಾಸನ್ ಈ ಗುರಿಯನ್ನು ಸಾಧಿಸಿದೆ. ಇಲ್ಲಿ ಕ್ಯಾನ್ಸರ್, ಸ್ವಲೀನತೆ, ಬಹು ಸ್ಲೆರೋಸಿಸ್, ವ್ಯಸನ, ಖಿನ್ನತೆ ಮತ್ತು ಇಚ್ಚಿತ್ತತೆಯಂತಹ (ಸ್ಕಿಜೋಫ್ರೇನಿಯಾ) ಕಾಯಿಲೆಗಳಿಂದ ಬಳಲುತ್ತಿದ್ದವರಿಗೆ ಆಶ್ವಾಸನ್ ಹೊಸ ಚೈತನ್ಯ ತುಂಬಿದೆ.
- ರೇಕಿ, ಪ್ರಾಣಿಕ್ ಹೀಲಿಂಗ್ಗಿಂತ ಆಶ್ವಾಸನ್ ಹೇಗೆ ಭಿನ್ನ?
ಹಲವಾರು ತಂತ್ರಗಳ ಆಧಾರದ ಮೇಲೆ ದತ್ತವಾದ ಅನುಭವದಿಂದ ನನ್ನ ಬದುಕು ರೂಪಿತವಾಗಿದೆ. ಯಾರಾದರೊಬ್ಬರು ನನ್ನ ಸಂಪರ್ಕಕ್ಕೆ ಬಂದಾಗ ವಿವಿಧ ತಂತ್ರಗಳು ಸಂವಹನದ ತರಂಗಗಳಂತೆ ಕೆಲಸ ಮಾಡುತ್ತವೆ. ನನ್ನ ಸಂಪರ್ಕದಲ್ಲಿರುವ ವ್ಯಕ್ತಿಯ ಜೀವನ ಪಯಣದ ಪ್ರತಿ ಪಟಲವೂ ನನಗೆ ಗೋಚರವಾಗುತ್ತದೆ ಮತ್ತು ಅದನ್ನು ಆತನಿಗೆ ಪ್ರತಿಫಲಿಸುವ ಮೂಲಕ ಆತ ತನ್ನ ಆತ್ಮಶೋಧ ಮಾಡಿಕೊಳ್ಳಲು ನೆರವಾಗುತ್ತದೆ. ಹೀಗಾಗಿ ಆತನಿಗೆ ಇದು ತನ್ನ ಜೀವನದ ಅನುಭೂತಿಯಂತೆಯೇ ಭಾಸವಾಗುತ್ತದೆ. ಇವೆಲ್ಲವೂ ಆಶ್ವಾಸನ ವಿಜ್ಞಾನದ ಆಧಾರದ ಮೇಲಷ್ಟೇ ನಡೆಯುತ್ತದೆಯೇ ಹೊರತು ಇತರ ಯಾವುದೇ ತಂತ್ರಗಳ ಆಧಾರದ ಮೇಲಲ್ಲ. - ಈ ಪ್ರಕಾರದ ಹೀಲಿಂಗ್ನ ಕಾರ್ಯವಿಧಾನ ಹೇಗೆ?
ಈ ಜಗತ್ತಿನಲ್ಲಿರುವುದೆಲ್ಲವೂ ಯಾವುದಾದರೊಂದು ತರಂಗದಲ್ಲಿ ಪರಸ್ಪರ ಸಂಪರ್ಕದಲ್ಲಿ ಇದ್ದೇ ಇರುತ್ತವೆ. ಅದನ್ನೇ ನಾವು ಶೂನ್ಯ ತರಂಗ ಎಂದು ಹೆಸರಿಸಿದ್ದೇವೆ. ನನ್ನೊಳಗಿನ ಜನ್ಮಜಾತ ಜ್ಞಾನ ಜಗತ್ತಿನ ಭಾಷೆಯಲ್ಲಿ ಸಂವಹನ ಮಾಡಲು ನನಗೆ ಅನುವು ಮಾಡಿಕೊಡುತ್ತದೆ. ಈ ಜ್ಞಾನ ಅನುಭವದ ರೀತಿಯಲ್ಲಿ ಗೋಚರಿಸುವುದರಿಂದ ಅದನ್ನು ಹಾಗೆಯೇ ಇತರರಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಜಗತ್ತಿನೊಂದಿಗೆ ನಿರಂತರ ಸಂಪರ್ಕದ ದೃಷ್ಟಿಯಿಂದ ಆಶ್ವಾಸನ ವಿಜ್ಞಾನ ಯೋಗಿಗಳನ್ನು ರೂಪಿಸಿದ್ದೇವೆ. ಇವರು ಬಾಧಿತ ವ್ಯಕ್ತಿಗಳ ಆತ್ಮ ನನ್ನ ಜೊತೆ ಸಂವಹನ ಮಾಡಲು ಅನುಕೂಲ ಕಲ್ಪಿಸುತ್ತಾರೆ. ನನ್ನ ಆತ್ಮ ಮತ್ತು ಅವರ ನಡುವೆ ಸಂವಹನದ ಶಕ್ತಿಯ ಮಾರ್ಗವನ್ನು ಸ್ಥಾಪಿಸಿದಾಗ ತರಂಗಗಳು ರಚಿಸಲ್ಪಡುತ್ತವೆ.
ಆಶ್ವಾಸನ ವಿಜ್ಞಾನ ಅನುಸರಣೆಗೆ ಅವರು ಹಕ್ಕುದಾರರಾಗಿರುತ್ತಾರೆ. ವ್ಯಕ್ತಿಯ ಅಗತ್ಯತೆ, ದೈಹಿಕ, ಮಾನಿಸಿಕ ಮತ್ತು ಆತ್ಮದ ಕ್ರಿಯಾ ಸ್ಥಿತಿ ಆಧರಿಸಿ ಯಾವ ರೀತಿಯ ಪರಿವರ್ತನೆ ತರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಹೀಗಾಗಿ ಆಶ್ವಾಸನದ ಹೀಲಿಂಗ್ ಪ್ರಕ್ರಿಯೆಯು ಒಂದು ಸಮಗ್ರ ಅನುಭವವಾಗಿದ್ದು, ವ್ಯಕ್ತಿ ಮತ್ತು ಆಶ್ವಾಸನದ ನಡುವಿನ ಆಂತರಿಕ ಅನುಬಂಧದ ರೀತಿಯಲ್ಲಿ ಸಾಗುತ್ತದೆ. - ವ್ಯಕ್ತಿಗಳು ಉತ್ತಮ ಜೀವನವನ್ನು ನಡೆಸಲು ಸಹಾಯ ಮಾಡಲು ಈ ವಿಧಾನವನ್ನು ನೀವು ಹೇಗೆ ಬಳಸಿಕೊಳ್ಳುತ್ತೀರಿ?
ಆಶ್ವಾಸನ ವಿಜ್ಞಾನವನ್ನು ನಾವು ವಿವಿಧ ಹಂತಗಳಲ್ಲಿ ಅಳವಡಿಸುತ್ತೇವೆ. ೧. ಆರೋಗ್ಯ ಮತ್ತು ಯೋಗಕ್ಷೇಮ- ಮೂಲ ಕಾರಣವನ್ನು ತಿಳಿದುಕೊಂಡು ಪರಿಹಾರ ನೀಡುವುದು ೨. ಮಾನವೀಯ ಕಲಿಕೆ- ಕಲಿಕೆಯ ಉತ್ಕೃಷ್ಟತೆಯನ್ನು ಪರಿಚಯಿಸುವ ಮೂಲಕ ಅದರ ಒಟ್ಟರ್ಥ ಮತ್ತು ಅನನ್ಯತೆಯನ್ನು ತಿಳಿಸುವುದು ೩. ಔದ್ಯೋಗಿಕ ಯೋಗಕ್ಷೇಮ- ಮಾನವ ಸಾಧ್ಯತೆಗಳ ಅರಿವು ಮೂಡಿಸುವ ಬಗ್ಗೆ ಉದ್ಯೋಗಿಗಳು ಮತ್ತು ಉದ್ಯೋಗದಾತ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸುವುದು. ೪. ಸಾಮಾಜಿಕ ವಿಷಯಗಳು- ವ್ಯಸನ, ಖಿನ್ನತೆ ಮತ್ತು ಆತ್ಮಹತ್ಯೆ ಸೆಳೆತಗಳಿಂದ ಜನರನ್ನು ವಿಮುಖಗೊಳಿಸುವುದು. ೫. ಸಂಶೋಧನೆ- ರೋಗನಿರ್ಣಯ, ಚಿಕಿತ್ಸೆ ಮತ್ತು ಸಬಲೀಕರಣ ಪ್ರಕ್ರಿಯೆಯಲ್ಲಿ ಆಶ್ವಾಸನ ತಂತ್ರಜ್ಞಾನದ ಉನ್ನತಿಗೆ ನಿರಂತರ ಸಂಶೋಧನೆ. ೬. ಮಾನವ ಸಾಮರ್ಥ್ಯದ ಅರಿವು ಮೂಡಿಸುವುದು ೭. ಹಿಂದುಳಿದ ಮತ್ತು ವಿಕಲಚೇತನರ ಸಬಲೀಕರಣ.
ಆಶ್ವಾಸನದ ಮೂಲಕ ಸಂಸ್ಥೆಗಳು ವಿಶಿಷ್ಟ ಅನುಭವ ಮತ್ತು ಪರಿಹಾರಗಳಿಗೆ ಸಾಕ್ಷಿಯಾಗಿವೆ. ಯಾವುದೇ ಒಂದು ಸಂಸ್ಥೆಯ ಸುಸ್ಥಿರ ಬೆಳವಣಿಗೆಗೆ ಇರುವ ಅಡೆ-ತಡೆಗಳನ್ನು ಆಶ್ವಾಸನ ವೈಜ್ಞಾನಿಕ ವಿಧಾನದ ಮೂಲಕ ನಿವಾರಿಸಬಹುದಾಗಿದೆ.
ಹಲವಾರು ಸಂಸ್ಥೆಗಳಲ್ಲಿ ಬದಲಾವಣೆ ತರಲು, ಅವು ತಮ್ಮನ್ನು ತಾವು ಮರು ರೂಪಿಸಿಕೊಳ್ಳಲು ಹಾಗೂ ಅವುಗಳ ಮೂಲ ಉದ್ಧೇಶದ ಈಡೇರಿಕೆಗೆ ಆಶ್ವಾಸನ ನೆರವು ನೀಡುತ್ತಿದೆ. ಆ ಮೂಲಕ ವ್ಯಕ್ತಿಗತವಾಗಿ ಮತ್ತು ಸಾಮೂಹಿಕ ಯೋಗಕ್ಷೇಮದ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗಿದೆ. - ಓದುಗರೊಂದಿಗೆ ಏನನ್ನು ಹಂಚಿಕೊಳ್ಳಲು ಬಯಸುತ್ತೀರಿ?
ನಾನು ಮಾನವತೆಯನ್ನು ಗೌರವಿಸುತ್ತೇನೆ. ಪ್ರತಿಯೊಬ್ಬರೂ ಜೀವನವನ್ನು ತಮಗನ್ನಿಸಿದ ರೀತಿಯಲ್ಲಿ ಜೀವಿಸಬೇಕು ಎಂದು ಆಶಿಸುತ್ತೇನೆ. ಜನ ಸ್ವತಂತ್ರ, ಸ್ವಚ್ಛಂದ, ಹಾಗೂ ಅಪರಿಮಿತವಾಗಿ ಜೀವಿಸಬೇಕು ಎಂಬುದು ನನ್ನ ನಂಬಿಕೆ. ತಮ್ಮ ಬಲಾಬಲಗಳನ್ನು ಅರಿತುಕೊಳ್ಳಲು ಮತ್ತು ಜೀವನವನ್ನು ವಿಶಿಷ್ಟ ಅನುಭವವಾಗಿಸಲು ಜನರು ತಮ್ಮ ಹೃದಯದ ಮಾತು ಕೇಳಬೇಕು ಮತ್ತು ಜನ್ಮಜಾತ ಬುದ್ಧಿವಂತಿಕೆಯನ್ನು ಬಳಸಿಕೊಳ್ಳಬೇಕು. ನಮ್ಮ ಬಲ ಮತ್ತು ದೌರ್ಬಲ್ಯಗಳು ಜೀವನದ ಎರಡು ಮುಖಗಳು ಎಂಬುದನ್ನು ನಾವು ಅರಿಯಬೇಕು. ಹೀಗೆ ಮಾಡುವುದರಿಂದ ತಮ್ಮನ್ನು ತಾವು ಸಂಪೂರ್ಣವಾಗಿ ಅರಿತುಕೊಳ್ಳಲು ಸಹಕಾರಿಯಾಗುತ್ತದೆ.
ಬೇಷರತ್ತಿನ ಸ್ವೀಕೃತಿಗೆ ಪ್ರೀತಿಯೇ ಮೊದಲ ಹೆಜ್ಜೆ ಏಕೆಂದರೇ ಅಲ್ಲಿಂದಲೇ ಎಲ್ಲವೂ ಪ್ರಾರಂಭ..
– ರಷ್ಮಿ ಅಯ್ಯಪ್ಪ
ಮಾನವನ ಆತ್ಮಪರಿವರ್ತನೆಗೆ ನೆರವಾಗುವ ಆಶ್ವಾಸನ ವಿಜ್ಞಾನದ ಸೃಷ್ಟಿಕರ್ತರು
City Today News
9341997936