
ಐ.ಎಂ.ಎ. ಸಂಸ್ಥೆಯು ರಾಜ್ಯದ ಅನೇಕ ಜನರಿಗೆ ಅದರಲ್ಲೂ ಸುಮಾರು 90 % ರಷ್ಟು ಅಲ್ಪಸಂಖ್ಯಾತರಿಗೆ ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದ ವಿಷಯವಾಗಿರುತ್ತದೆ . . ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೇಮಿಸಿದ್ದ ಐ.ಎ.ಎಸ್.ಆಫೀಸರ್ ಆಗಿರುವ ಶ್ರೀ ಹರ್ಷಗುಪ್ತರವರು ವಿಚಾರಣೆಯನ್ನು ನಡೆಸಿ , ಸುಮಾರು 5 ಸಾವಿರ ಕುಟುಂಬಗಳಿಗೆ ಪ್ರತಿ ಒಂದು ಕುಟುಂಬಕ್ಕೆ ರೂ . 50,000 / – ಗಳನ್ನು ಅವರವರ ಖಾತೆಗೆ ಜಮಾ ಮಾಡಿರುತ್ತಾರೆ . ಇದರಲ್ಲಿ ಸುಮಾರು 14 ಸಾವಿರ ಕುಟುಂಬಗಳು ಮೋಸ ಹೋಗಿದ್ದು , ಮೋಸ ಹೋಗಿರುವ ಕುಟುಂಬಗಳಲ್ಲಿ ಈಗಾಗಲೇ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದು , ಇನ್ನು ಹಲವರು ತಮ್ಮ ಪ್ರಾಣವನ್ನು ಕಳೆದುಕೊಂಡು , ಕೂಲಿ ಕೆಲಸ ಮಾಡಿ ತಮ್ಮ ಜೀವನ ನಡೆಸುತ್ತಿದ್ದಾರೆ . ಮನ್ಸೂರ್ ಅಲಿ ಖಾನ್ ಈಗಾಗಲೇ ಮೊಕದ್ದಮೆಯನ್ನು ನ್ಯಾಯಾಲದಲ್ಲಿ ಹೂಡಿದ್ದು , ಈ ಮೊದಲು ನೇಮಕ ಮಾಡಿದಂತಹ ಐ.ಎ.ಎಸ್.ಅಧಿಕಾರಿಗಳಾದ ಹರ್ಷಗುಪ್ತರವನ್ನು ಬೇರೆ ಕಡೆ ವರ್ಗಾಯಿಸಿದ್ದು , ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಇನ್ಚಾರ್ಜ್ ಮಾಡಿರುತ್ತಾರೆ . ದಯಮಾಡಿ ತಾವುಗಳು ಇದಕ್ಕಾಗಿ ಪ್ರತ್ಯೇಕ ಒಬ್ಬ ಐ.ಎ.ಎಸ್.ಆಫೀಸರ್ನ್ನು ನೇಮಿಸಿ , ಮನ್ಸೂರ್ ಅಲಿ ಖಾನ್ ನ್ಯಾಯಾಲದಲ್ಲಿ ಹೂಡಿರುವ ಮೊಕದ್ದಮೆಯನ್ನು ವಜಾ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ . ಇನ್ನೂ ಉಳಿದಿರುವ ಬಾಕಿ ಮೊತ್ತವನ್ನು ಹೂಡಿಕೆದಾರರಿಗೆ ಮರಳಿ ನೀಡಬೇಕೆಂದರೆ , ಮನ್ಸೂರ್ ಆಲಿಖಾನ್ ಮಾವನಾದ ಅಬ್ಬಾಸ್ ಖಾನ್ ಇವನು ದುಬೈನಲ್ಲಿದ್ದು , ಅವನನ್ನು ಕರೆದುಕೊಂಡು ತನಿಖೆ ಕೈಗೊಂಡರೆ , ಉಳಿದ ಹಣ ವಾಪಸ್ ಬಂದು ಎಲ್ಲರಿಗೂ ನ್ಯಾಯದೊರಕಿಸಿಕೊಟ್ಟಂತೆ ಆಗುತ್ತದೆ . ಇದು ಎಲ್ಲಾ ಅಲ್ಪಸಂಖ್ಯಾತ ಹೂಡಿಕೆದಾರರಿಗೆ ಬಿ.ಜೆ.ಪಿ. ಸರ್ಕಾರ ದೊರಕಿಸಿಕೊಟ್ಟ ನ್ಯಾಯವಾಗಿರುತ್ತದೆ . ಈ ಕಾರ್ಯ ತ್ವರಿತವಾಗಿ ಕಾರ್ಯರೂಪಕ್ಕೆ ಬರಲು ಭಾರತೀಯ ಜನತಾ ಪಾರ್ಟಿಯೇ ಕಾರಣವಾಗಿರುತ್ತದೆ . ಕೇಂದ್ರ ಸರ್ಕಾರಕ್ಕೆ ನಾನು ದಿನಾಂಕ : 10-06-2019ರಲ್ಲಿ ಪ್ರಧಾನಮಂತ್ರಿಯವರಿಗೆ ಪತ್ರ ಬರೆದಾಗ , ಕೇವಲ 10 ದಿನಗಳಲ್ಲಿಯೇ ಪ್ರಧಾನಮಂತ್ರಿ ಕಾರ್ಯಾಲಯದಿಂದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು , ತನಿಖೆಗೊಳಪಡಿಸಿ ನ್ಯಾಯ ದೊರಕಿಸಿಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದಾಗಿರುತ್ತದೆ ಆಬ್ದುಲ್ ಮುಜೀಬ್ ರವರು ಎಂದು ತಿಳಿಸಿದರು.
City Today News
9341997936