
ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೊದಿಯವರು , ಪ್ರಪಂಚದಲ್ಲೇ ಮೊದಲಿಗರಾಗಿ ನಮ್ಮ ದೇಶವನ್ನು 2025 ಕ್ಕೆ ಕ್ಷಯಮುಕ್ತ ( ಟಿಬಿ ) ಭಾರತವನ್ನಾಗಿ ಮಾಡಲು ಘೋಷಣೆ ಮಾಡಿರುತ್ತಾರೆ . ಸುಮಾರು 6000 ವರ್ಷಗಳ ಇತಿಹಾಸವಿರುವ ಈ ಕಾಯಿಲೆ ನಿರ್ಮೂಲನೆಗೆ ಹೆಜ್ಜೆ ಇಟ್ಟಿರುವುದು ಮಹತ್ತರವಾದ ಘೋಷಣೆಯಾಗಿದ್ದು ಕರ್ತವ್ಯ ನಿರ್ವಹಿಸಲು ಎಲ್ಲರ ಪ್ರೇರಣೆಯಾಗಿರುತ್ತದೆ . ಇದರ ಅಂಗವಾಗಿ ದಿನಾಂಕ 15-09-2022ರಂದು ಬೆಂಗಳೂರಿನ ಟೌನ್ ಹಾಲ್ನಲ್ಲಿ ರಾಜ್ಯಮಟ್ಟದ ಸಮ್ಮೇಳನ ನಡೆಸಲಾಯಿತು. ಸಮ್ಮೇಳನವನ್ನು ಮಾನ್ಯ ಪ್ರಧಾನಮಂತ್ರಿಗಳ ಆಶಯದಂತೆ , “ಕ್ಷಯಮುಕ್ತ ಕರ್ನಾಟಕಕ್ಕೆ ಚಾಲನೆ ” ಎಂಬ ಹೆಸರಿನಡಿಯಲ್ಲಿ ಹಮ್ಮಿಕೊಳ್ಳಲಾಯಿತು. ಸಮ್ಮೇಳನದ ಉದ್ಘಾಟನೆಯನ್ನು ಶ್ರೀ ಸಿ.ಎಸ್.ಷಡಾಕ್ಷರಿ ಅಧ್ಯಕ್ಷರು,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉದ್ಘಾಟಿಸಿದರು. ಈ ಸಮ್ಮೇಳನದಲ್ಲಿ ಶ್ರೀ ಕುಮಾರ್ ಎಸ್ -ಗೌರವ ಸಲಹೆಗಾರರು,ಶಾವುರಾಜ್ , ಮಂಜೇಶ್ , ರಾಜ್ಯಮಟ್ಟದ ಅಧಿಕಾರಿಗಳು ಹಾಗೂ ಉಪನಿರ್ದೇಶಕರುಗಳು , ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳು ಉಪಸ್ತಿತರಿದ್ದರು .
City Today News – 9341997936