
ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ಒಕ್ಕೂಟದ ಅಧ್ಯಕ್ಷ ನಾನು ಶ್ರೀ ರಾಜು ರೇವಣಕರ ಬಾಗಲಕೋಟ ಡೈರೆಕ್ಟರ ಓಯಲ್ ಇಂಡಿಯಾ ದೆಹಲಿ ವಿನಂತಿಸಿಕೊಳ್ಳುವುದೇನೆಂದರೆ, ದೈವಜ್ಞನ ಬ್ರಾಹ್ಮಣರು ತಮ್ಮ ಸಾಧನೆಯ ಮೂಲಕ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ, ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಜಮಾದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡು ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಬೆಂಗಳೂರು ಹಾಗೂ ದಕ್ಷಿಣ ಕರ್ನಾಟಕದಲ್ಲಿ ನೆಲೆಸಿರುತ್ತಾರೆ ದೈವಜ್ಞ ಬ್ರಾಹ್ಮಣ ಸಮಾಜದವರು ಕೇಂದ್ರದ ಒಬಿಸಿ ಮತ್ತು ರಾಜ್ಯದ 2ಎ ಪಂಗಡದಲ್ಲಿ ಸೇರಿದ್ದರು ಇಲ್ಲಿಯವರೇಗೆ ಹಿಂದಿನ ಹಾಗೂ ಇಂದಿನ ರಾಜಕೀಯ ದೈವಜ್ಜನಿಗೆ ಹೇಳಿಕೊಳ್ಳುವ ಯಾವುದ ಪ್ರಮುಖ ರಾಜಕೀಯ ಸ್ಥಾನಮಾನಗಳನ್ನು ಕೊಟ್ಟಿರುವದಿಲ್ಲ. ದೈವಜ್ಞ ಬ್ರಾಹ್ಮಣರು ಭಾಜಪಗಿಂತ ಮೂಲ ಜನ ಸಂಘ ಕಾಲದಿಂದಲೂ ಯಾರ ಒತ್ತಡಕ್ಕೆ ಸಿಲುಕದೆ ಆಮಿಷಗಳಿಗೆ ಒಳಗಾಗದೆ ನೇರವಾಗಿ ಭಾರತಿಯ ಜನತಾ ಪಕ್ಷಕ್ಕೆ (ಬಿಜೆಪಿ) ಸಮರ್ಧಿಸುವದು ಹಳೆ ಕಾಲದಿಂದಲೂ ನಡೆದು ಬಂದಿದ್ದು ಸರ್ವವಿಧಿತ ದೈವಜ್ಞ ಬ್ರಾಹ್ಮಣರು ಕಾರಣಿಭೂತರಾಗಿರುವವರು ರಾಜಕೀಯ ಪಕ್ಷಗಳಿಗೆ ಗೊತ್ತಿರುವ ವಿಷಯವ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಹಾಗೂ ಬೆಂಗಳೂರು, ಅನೇಕ ಮತ ಕ್ಷೇತ್ರಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ದೈವಜ್ಞರ ಪ್ರಭಾವವಿದ್ದು ಅದರ ಲಾಭವನ್ನು ಪಡೆಯಲು ಕರ್ನಾಟಕ ರಾಜ್ಯ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಒಕ್ಕೂಟದ ಭಾಂದವರೆಲ್ಲರೂ ಉತ್ಸುಕರಾಗಿದ್ದಾರೆ. ಆದ್ದರಿಂದ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ದೈವಜ್ಞ ಬ್ರಾಹ್ಮಣ ಸಮುದಾಯದವರಾದ ಶ್ರೀ ಗಂಗಾಧರ ಭಟ್ಟ ಇವರನ್ನು ಉತ್ತರ ಕನ್ನಡ ಭಾಗದ ಕಾರವಾರ ಅಂಕೋಲಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಲು ಒಕ್ಕೂಟ ತನು, ಮನ, ಧನ, ಗಳಿಂದ ಸರ್ವ ಪ್ರಯತ್ನಗಳನ್ನು ಮಾಡುವ ನಿರ್ಧಾರ ತೆಗೆದುಕೊಂಡಿದ್ದು ಅದಕ್ಕೆ ತಮ್ಮ ಪೂರ್ಣ ಸಹಕಾರ ಬೆಂಬಲಕ್ಕಾಗಿ ಕರ್ನಾಟಕ ರಾಜ್ಯದ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಒಕ್ಕೂಟವು ತಮ್ಮನ್ನು ಕಳ ದೈವಜ್ಞ-ಬ್ರಾಹ್ಮಣ ವಿನಂತಿಸಿಕೊಳ್ಳುತ್ತೇವೆ. ಹಾಗೆಯೇ ಸಂಕ್ಷಿಪ್ತವಾಗಿ ಶ್ರೀ ಗಂಗಾಧರ ಭಟ್ಟ ಇವರ ಬಗ್ಗೆ ಹೇಳುವದಾದರೆ:- ಕಳಿಯಿಂದ
ಮೂಲತಃ ಶ್ರೀ ಗಂಗಾಧರ ಭಟ್ಟ ಇವರು ಕಾರವಾರ ಜಿಲ್ಲೆಯ ಸದಾಶಿವಗಡ ಗ್ರಾಮದವರು ಇವರ ತಂದೆಯವರಾದ ದಿವಂಗತ ಶ್ರೀ ನಾಗೇಶ ಭಟ್ಟ ಪ್ರಸಿದ್ಧ ಜ್ಯೋತಿಷ ಹಾಗೂ ಪುರೋಹಿತರು ದೈವಜ್ಞ ಬ್ರಾಹ್ಮಣ ಸಮಾಜದ ಶ್ರೇಷ್ಠ ಪುತ್ರ ಎಂದೆನೆಸಿಕೊಂಡ ಮುಂಬೈ ನಗರದ ಶಿಲ್ಪಿಕಾರ ದೈವಜ್ಞ ಬ್ರಾಹ್ಮಣ ಸಮಾಜದ ದಿವಂಗತ ಶ್ರೀ ಜಗನ್ನಾಥ ಶಂಕರ ಶೇಠ ಇವರು ರಾಜಕೀಯ ಶೈಕ್ಷಣಿಕ ಹಾಗೂ ಸಾಮಾಜಕಿಕ ಕಾರ್ಯಗಳಲ್ಲಿ ಜನಸೇವೆಯೇ ಜರ್ನಾಧನ ಸೇವೆ ಎಂಬ ತತ್ವವನ್ನು ಪಾಲಿಸಿ ಕರ್ನಾಟಕ ರಾಜ್ಯಗಳ ಜನರ ಮನಗಳಲ್ಲಿ ಮಾನವತವಾದಿ ನಾಯಕ ಯೆನಿಸಿಕೊಂಡಿದ್ದು ನಮಗೆಲ್ಲರಿಗೂ ಮಾದರಿ ಪುರುಷರು ಇವರೊಂದಿಗೆ ಶ್ರೀ ನಾಗೇಶ ಭಟ್ಟ ಇವರ ಸಾಮಾಜಿಕ ಕಾರ್ಯಗಳಲ್ಲಿ ತುಂಬಾ ಒಡನಾಟವಿತ್ತು.
ಇಂತಹ ಹಿನ್ನಡೆ ಹೊಂದಿರುವ ಶ್ರೀ ಗಂಗಾಧರ ಭಟ್ ಇವರು ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸುಮಾರು 35 ವರ್ಷದಿಂದ ಕಾರವಾರ-ಜೊಯಡಾ-ಅಂಕೋಲಾ ಪ್ರದೇಶಗಳಲ್ಲಿ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿ-ಜನಪರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಿಜೆಪಿ ಪಕ್ಷದ ಕಾರ್ಯಕರ್ತರೊಂದಿಗೆ ಒಳ್ಳೆ ಬಾಂಧವ್ಯ ಹೊಂದಿರುತ್ತಾರೆ.
ತಮಗೆ ಗೊತ್ತಿರುವಂತೆ 2004-2007 ಜೆಡಿಎಸ್-ಬಿಜೆಪಿ ಆಡಳಿತಾವಧಿಯಲ್ಲಿ ಕಾರವಾರ ಜೊಯಡಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಎಂ ಎಲ್ ಎ ಆಗಿ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಕೊಂಕಣ ಮರಾಠ, ಗೌಡಾ, ಗೌಡ ಸಾರಸ್ವತ ಬ್ರಾಹ್ಮಣ, ಭಂಡಾರಿ, ವೈಶ್ಯವಾಣಿ, ಕೊಮಾರಪಂಥ, ಹಾಗೂ ಇನ್ನಿತರ ಅನೇಕ ಸಮುದಾಯದವರೊಂದಿಗೆ ಜೊತೆಗೂಡಿ ಅನೇಕ ಸಮಾಜದ ಜನಪರ ನೋವು ನಲವುಗಳಿಗೆ ಸ್ಪಂದಿಸುವ ಸಹೃದಯ ಗುಣವುಳ್ಳವರು ನಮ್ಮ ಶ್ರೀ ಗಂಗಾಧರ ಭಟ್ಟ,
ಶ್ರೀ ಗಂಗಾಧರ ಭಟ್ಟ ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಅಧ್ಯಕ್ಷರಾಗಿ ದೈವಜ್ಞ ಬ್ರಾಹ್ಮಣ ಕರ್ಕಿ ಮಠದ ಟ್ರಸ್ಟಿಯಾಗಿ ಗೋವರ ಕ್ಲಬ ಅಧ್ಯಕ್ಷರಾಗಿ ಮಾತಾ ಅಮೃತಾನಂಧಮಹಿ ಹೈಸ್ಕೂಲಿನ ಸದಸ್ಯರಾಗಿ ಕಾರವಾರ ಸಾಯಿ ಸಮೀತಿಯ ಸದಸ್ಯರಾಗಿ ಸದಾಶಿವಗಡ ಏಜ್ಯೂಕೇಶನ ಟ್ರಸ್ಟಿನ ಅಧ್ಯಕ್ಷರಾಗಿ ಹೀಗೆ ಇನ್ನಿತರ ಅನೇಕ ಸಂಘ ಸಂಸ್ಥೆಗಳಿಗೆ ಸಮಾಜನ್ನೊತಿಯ ಕಾರ್ಯಗಳಲ್ಲಿ ತಮ್ಮನ್ನು ಸರ್ಮಧಿಸಿಕೊಂಡು ಎಲ್ಲ ಸಮಾಜ ಬಂಧುಗಳಿಗೆ ಮೆಚ್ಚುಗೆಗೆ ಪ್ರಶಂಸೆಗೆ ಪಾತ್ರರಾಗಿರುವ ಶ್ರೀ ಗಂಗಾಧರ ಭಟ್ಟ ಇವರಿಗೆ ವಿಧಾನ ಸಭಾ ಚುನಾವಣೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಪರಿಗಣಿಸಲು ಒಕ್ಕೂಟದ ವತಿಯಿಂದ ತಮಗೆ ವಿನಂತಿಸಿಕೊಳ್ಳುತ್ತೇನೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News – 9341997936