
ದಿನಾಂಕ: 11/12/2022 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಲಕ್ಷಾಂತರ ಜನ ಸಾಮಾಜಿಕ ನ್ಯಾಯಕ್ಕಾಗಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿ ಹೋರಾಟ ಮಾಡಲಾಯಿತು. ಸರ್ಕಾರ ಈ ಹೋರಾಟಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಕಾರಣಕ್ಕೆ, ದಿನಾಂಕ: 12/12/2022 ರಂದು ಅನಿರ್ಧಿಷ್ಟ ಅವಧಿಯ ಧರಣಿ ಸತ್ಯಾಗ್ರಹವನ್ನು ಫ್ರೀಡಂ ಪಾರ್ಕ್ನ ಮುಂದುವರಿಸಿದ್ದು ಇಲ್ಲಯವರೆವಿಗೂ 61 ದಿನ ಮುಗಿದಿದ್ದು, ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಂತಹ ಕೆಲಸವನ್ನು ಮಾಡದ ಪರಿಶಿಷ್ಟ ಜಾತಿಗಳನ್ನು ನಿರ್ಲಕ್ಷಿಸಿದೆ.
ಆದ್ದರಿಂದ ಸರ್ಕಾರದ ವಿರುದ್ಧ ದಿನಾಂಕ: 14/02/2023 ರಂದು ಬೃಹತ್ ಸಮಾವೇಶವನ್ನು ಮಾದಿಗ, ಛಲವಾದಿ, ತ್ರಿಮತಸ್ಥ ಚರ್ಮಕಾರರು, ಅಲೆಮಾರಿ ಸಮುದಾಯಗಳು ಆಯೋಜಿಸಿದ್ದು ನಮ್ಮ ಹಕ್ಕೊತ್ತಾಯಗಳಾದ
* ನ್ಯಾ – ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೂಡಲೇ ಕೇಂದ್ರ ಸರ್ಕಾರಕ್ಕೆ ಫಾರಸ್ಸು ಮಾಡಬೇಕು ಮತ್ತು ಕೇಂದ್ರ ಸರ್ಕಾರವು ಅನುಚ್ಛೇದ 341(3) ಕೈ ಕೂಡಲೇ ತಿದ್ದುಪಡಿ ಮಾಡಬೇಕು.
* ತ್ರಿಮತಸ್ಥರಿಗೆ (ಮೋಚಿ, ಡೋಹಾರ, ಸಮಗಾರ) ಅಭಿವೃದ್ಧಿ ನಿಗಮವನ್ನು ಕೂಡಲೇ ಸ್ಥಾಪಿಸಬೇಕು.
* ಹಿಂದುಳಿದ ವರ್ಗಗಳ ಕಾಂತರಾಜ ವರದಿಯನ್ನು ಬಹಿರಂಗ ಮಾಡಿ ಯತಾವತ್ತಾಗಿ ಜಾರಿ ಮಾಡಬೇಕು.
* ಎಲ್ಲಾ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಗಳಲ್ಲಿ ಬಹು ಸಂಖ್ಯಾತರಾಗಿರುವ ಮಾದಿಗ ಮತ್ತು ಛಲವಾದಿಗಳ ಜನಸಂಖ್ಯೆಗೆ ತಕ್ಕಂತೆ ತಲಾ 15 ರಾಜಕೀಯ ಪ್ರಾತಿನಿಧ್ಯ ಕಟ್ಟಸಬೇಕು. ಕರ್ನಾಟಕ ರಾಜ್ಯದಲ್ಲಿರುವ 43 ಸಾವಿರ ಪೌರ ಕಾರ್ಮಿಕರು ಮತ್ತು ವಾಹನ ಚಾಲಕರನ್ನು ಖಾಯಂಗೊಳಿಸಬೇಕು.
* ನ್ಯಾ. ಎ.ಜೆ.ಸದಾಶಿವ ಆಯೋಗದ ಪರ ಹೋರಾಟಗಾರರ ಮೇಲೆ ಹೂಡಿದ ರೌಡಿಶೀಟ್ ಪ್ರಕರಣಗಳನ್ನು ರದ್ದುಪಡಿಸಬೇಕು ಮತ್ತು ದಲತ ಸಂಘಟನೆಯ ಮುಖಂಡತರ ಮೇಲೆ ದಾಖಲಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸಬೇಕು.
* ಪರಿಶಿಷ್ಟ 6+5+3+1 ಜಾತಿಗಳು ಹಂಚಿಕೆ (SCSA) ಅನುದಾನವನ್ನು ಒಳಮೀಸಲಾತಿ ಸೂತ್ರದಂತೆ ಹಂಚಿಕೆ – ಮಾಡಬೇಕು. ಮತ್ತು (SCSA) : ಅನುದಾನ ದುರುಪಯೋಗಕ್ಕೆ ಕಾರಣವಾದ 7(B), 7(C) & 7(D) ಯನ್ನು ತೆಗೆದು ಹಾಕಬೇಕು ಎಂದು ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ವತಿಯಿಂದ ಒತ್ತಾಯಿಸಲಾಗುವುದು.
ಫ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಆರ್.ಮೋಹನ್ ಋಆಜ್, ಎಸ್.ಮಾರಪ್ಪ ಮತ್ತು ಗುರುರಾಜ್ ಬೇಡಿಕರ್ ಹಾಜರಿದ್ದರು
City Today News – 9341997936