ನಮ್ಮ ನಮ್ಮಲ್ಲಿ ಒಡಕು ಮೂಡಿಸಿ ನೇಕಾರರಿಗೆ ಶಕ್ತಿಯಾಗಿರುವ ಉಮಾಶ್ರೀಯವರಿಗೆ ಕಾಂಗ್ರೆಸ್‌ ಟಿಕೆಟ್ ತಪ್ಪಿಸಲು ಕುತಂತ್ರ

ಈಗಾಗಲೇ 2023 .ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತೇರದಾಳ -20 ವಿಧಾನಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಅನೇಕರು ಅರ್ಜಿ ಸಲ್ಲಿಸಿರುತ್ತಾರೆ. ಮಾಜಿ ಸಚಿವರಾದ ಉಮಾಶ್ರೀಯವರು ಮತ್ತೊಂದು ಬಾರಿ ಚುನಾವಣೆಯಲ್ಲಿ ತೇರದಾಳದಿಂದ ಸ್ಪರ್ಧಿಸಲು ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಭಿನ್ನವಹಿಸಿಕೊಂಡಿರುತ್ತೇವೆ. ಇವರು ನೇಕಾರ ಮನೆತನದಲ್ಲಿ ಹುಟ್ಟಿ ಬೆಳೆದು ಕಲಾವಿದೆಯಾಗಿ ನಾಡಿನಲ್ಲಿ ಹೆಸರು ಮಾಡಿರುತ್ತಾರೆ. ಹಾಗೆ ರಾಜಕೀಯ ಕ್ಷೇತ್ರದಲ್ಲಿ ಕಾಂಗ್ರಸ್ ಪಕ್ಷದಲ್ಲಿ ಮಹಿಳಾ ನಾಯಕಿಯರಲ್ಲಿ ಓರ್ವರಾಗಿರುತ್ತಾರೆ. ಇವರು ತೇರದಾಳ ವಿಧಾನಸಭಾ ಕ್ಷೇತ್ರದಿಂದ 2008ರಲ್ಲಿ ಸ್ಪರ್ಧಿಸಿ ಸೋತರು, ಸೋತರೂ ಅಲ್ಲಿಯೇ ವಾಸವಿದ್ದು ಪಕ್ಷ ಸಂಘಟಿಸಿ ನಿರಂತರ ಶ್ರಮವಹಿಸಿದರು. 2013ರಲ್ಲಿ ಗೆದ್ದು ಸಚಿವರಾದರು. ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸವನ್ನು ಮಾಡಿರುತ್ತಾರೆ. ಮುಂದೆ 2018ರಲ್ಲಿ ಮತ್ತೆ ಸೋಲನ್ನು ಅನುಭವಿಸಿದರು.

ಈಗ ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ವರಿಷ್ಠರು ಉಮಾಶ್ರೀಯವರಿಗೆ ಟಿಕೆಟ್‌ ನೀಡಬೇಕೆಂದು ಒತ್ತಾಯಿಸುತೇವೆ.

ನೇಕಾರ ಸಮುದಾಯದ ಉಮಾಶ್ರೀಯವರು 2001 ವಿಧಾನಪರಿಷತ್‌ ಸದಸ್ಯರಾದಾಗಿನಿಂದ ಇಲ್ಲಿಯವರೆಗೂ ಅಂದರೆ ಸುಮಾರು 2 ದಶಕಗಳ ಕಾಲ ರಾಜ್ಯ ನೇಕಾರರ ಸಮಸ್ಯೆಗಳ ಬಗ್ಗೆ ಸ್ಪಂದಿಸಿರುತ್ತಾರೆ, ವಿದ್ಯುತ್‌ ಸಬ್ಸಿಡಿ, ನೇಕಾಲಕ, ಸಾಲದ ಅಸಲು ಮತ್ತು ಬಡ್ಡಿ ಮನ್ನಾ, ವಸತಿ ಸಾಲ ಮತ್ತು ಬಡ್ಡಿ ಮನ್ನಾ ಕ್ಷೇತ್ರದಲ್ಲಿ ನೇಕಾರ ಭವನ, ಶ್ರೀ ದೇವರ ದಾಸಿಮಯ್ಯ ಭವನ, ಬನಹಟ್ಟಿ ನೊಲಿನ ಗಿರಣಿ ಅಭಿವೃದ್ಧಿಗೆ ಸಹಾಯ, ಕೈಮಗ್ಗ ನೇಕಾರರಿಗೆ ಹಕ್ಕುಪತ್ರ ಮತ್ತು ಆಸ್ತಿ ಮಾಲಿಕತ್ವದಲ್ಲಿ ಸಹಾಯ, ಸಮುದಾಯ ಭವನಗಳು. ಈಗ ಹಲವಾರು ಕೆಲಸಗಳನ್ನು ಮಾಡಿರುವುದು ನೇಕಾರ ಸಮುದಾಯಕ್ಕೆ ಇವರ ನಾಯಕತ್ವ ವರದಾನವಾಗಿರುತ್ತದೆ.

ಕೆಲವು ಜನರು ನೇಕಾರರ ಒಗ್ಗಟ್ಟು ಒಡೆಯಲು ಹುನ್ನಾರ ನಡೆಸಿದ್ದಾರೆ. ನೇಕಾರರಲ್ಲಿ ಹಟಗಾರ, ಕುರುವಿವರಟ್ಟಿ, ದೇವಾಂಗ ಸ್ವಕುಳಸಾಲಿ, ಪಟ್ಟಸಾಲಿ, ಪದ್ಮಸಾಲಿ, ಸಾಲಿ, ತೊಗಟವೀರ ಹೀಗೆ ಅನೇಕ ಜಾತಿಯ ಹೆಸರಿನಲ್ಲಿದರೂ ಇವರೆಲ್ಲರೂ ಆನುವಂಶಿಯವಾಗಿ ನೇಕಾರರೇ ಆಗಿರುತ್ತಾರೆ. ಇವಲ್ಲ ಜಾತಿ ಜನಾಂಗ ಮಾಡುವ ನೇಕಾರಿಕೆ ವೃತ್ತಿ ಸಮಸ್ಯೆಗಳಿಗೆ ಸರ್ಕಾರದಿಂದ ಕೆಲವೊಂದು ಪರಿಹಾರಗಳನ್ನು, ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಿಸಿರುತ್ತಾರೆ. ಇವರಲ್ಲದೇ ನೇಕಾರಿಕೆಯನ್ನು ಆಶ್ರಯಿಸಿ ಇತರೆ ಜಾತಿ ಜನಾಂಗದವರೂ ಪ್ರೀತಿಯಿಂದ ಕಾಣುವ ವ್ಯಕ್ತಿ ಮತ್ತು ಶಕ್ತಿಯಾಗಿದ್ದಾರೆ ಉಮಾಶ್ರೀ.

ಕಾಣದ ಕೈಗಳು ತೇರದಾಳ ಕ್ಷೇತ್ರದಲ್ಲಿ ನಮ್ಮ ನಮ್ಮಲ್ಲಿ ಒಡಕು ಮೂಡಿಸಿ ನೇಕಾರರಿಗೆ ಶಕ್ತಿಯಾಗಿರುವ ಉಮಾಶ್ರೀಯವರಿಗೆ ಕಾಂಗ್ರೆಸ್‌ ಟಿಕೆಟ್ ತಪ್ಪಿಸಲು ಕುತಂತ್ರ ನಡೆಸಿದ್ದಾರೆ. ನಮ್ಮ ಸಹೋದರರಂತೆ ಇರುವ ನೇಕಾರ ಜಾತಿಗೆ ಕುಮ್ಮಕ್ಕು ನೀಡಿ ಒಡೆದು ಆಳುವ ನೀತಿ ಆನುಸರಿಸುತ್ತಿದ್ದಾರೆ.

ತೇರದಾಳ ಮತಕ್ಷೇತ್ರದ ಪಟಗಾರ ಮತ್ತು ಕುರುವಿನಶೆಟ್ಟಿ ಸಮುದಾಯ ನೇಕಾರರಾದ ನಾವು ಇವರ ನಾಯಕತ್ವವನ್ನು ಮೆಚ್ಚಿ ಅನುಸರಿಸಿರುತ್ತೇವೆ. ಇವರನ್ನು ಕೇವಲ ನೇಕಾರ ಸಮುದಾಯ ಅಷ್ಟೇ ಅಲ್ಲದೇ ಸರ್ವ ಸಮಾಜಗಳು ಗೌರವದಿಂದ ಇವರನ್ನು ಕಾಣುತ್ತದೆ.

ಆ ಕಾರಣದಿಂದ ಈ ಕ್ಷೇತ್ರದಲ್ಲಿ ಉಮಾಶ್ರೀಯವರಿಗೆ ಟಿಕೆಟ್ ನೀಡಬೇಕು ಹಟಗಾರ, ಕುರುವಿನಶೆಟ್ಟಿ, ದೇವಾಂಗ ಎಂಬ ಬೇದವಿಲ್ಲದೆ ದುಡಿಯಬೇಕಾದ ಕ್ಷಣದಲ್ಲಿ ಭೇದ ಸೃಷ್ಟಿಸಿ ಮಾತನಾಡುವುದು ಸರಿಯಾದುದಲ್ಲ ಎಂದು ಸ್ಪಷ್ಟ ಪಡಿಸಲಿಚ್ಚಿಸುತ್ತೇವೆ.

ನೇಕಾರ ಸಮಾಜದ ಮುಖಂಡರು ಶ್ರೀ ಚನ್ನವಿರಪ್ಪ ಹಾದಿಮನಿ, ಶ್ರೀ ರಾಜೇಂದ್ರ ಬದನ್ನನವರ, ಶ್ರೀ ಬಸವರಾಜ ಗುದೊಡಗಿ, ಶ್ರೀ ದಾನಪ್ಪ ಹುಲಜತ್ತಿ, ಶ್ರೀ ರಾಜು ಭಾವಿಕಟ್ಟಿ, ಶ್ರೀ ಈಶ್ವರ ಚಮಕೇರಿ, ಶ್ರೀ ಶೇಖರ ಹಕ್ಕಲದಡ್ಡಿ, ಶ್ರೀ ಈರಣ ಸೊನ್ನದ, ಶ್ರೀ ಕಿರಣ್ ಕರಲಟ್ಟೆ ಶ್ರೀ ಮಹಾನಿಂಗ ಕಂದಗಳ, ಪಕ್ಷದ ಮುಖಂಡರಾದ ಶ್ರೀ ನೀಲಕಂಠ ಮುತ್ತೂರ, ಶ್ರೀ ಚಿದಾನಂದ ಗಾಳಿ, ಶ್ರೀ ಸಂಗವ ಉಪ್ಪಲದಿನ್ನಿ, ಬ್ಲಾಕ್‌ ಅಧ್ಯಕರಾದ ಶ್ರೀ ಲಕ್ಷಣ್ಣ ದೇಸಾರ ಮತ್ತು ಶ್ರೀ ಮಲ್ಲಪ್ಪ ಸಿಂಗಾಡಿ, ಶ್ರೀ ಸಂಜೀವ ಜೋತಾವರವರು, ಶ್ರೀ ರಾಜು ಮೆಟ್ಟಿಕಲಿ, ಶ್ರೀ ಗುರುನಾಥ ಬಕರೆ, ಶ್ರೀ ಹನುಮಂತ ಬರಗಾಲ, ಶ್ರೀ ಬಸವರಾಜ ಶಿಂಧೆ, ಸಾದಾಶಿವ ಗೋಂದಕ‌, ಮಹಾನಿಂಗ ಮಾಯನ್ನವರ, ಶ್ರೀ ರಮೇಶ ಸವದಿ, ಶ್ರೀ ಶಂಕರ್ ಉಗಾರ, ಶ್ರೀ ಪೀಯಸ್ ಒಸ್ವಾಲ್, ಶ್ರೀ ವಿಠಲ ಹೊಸಮಾ ಶ್ರೀ ತಮ್ಮಣಿ ಜೋಂಗನವರ, ಶ್ರೀ ರೆಡ್ಡಿ, ಶ್ರೀ ಕಾಶಿರಾಯ ನಾಯಕ, ಇತರರು ಹಾಜರಿದ್ದರು,

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.