“ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್” ಪ್ರಶಸ್ತಿ ಪ್ರದಾನ ಸಮಾರಂಭ ಮೇ 19ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ

ಬೆಂಗಳೂರು: ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ (ರಿ) ಅವರಿಂದ ಆಯೋಜಿತ “ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್” ಪ್ರಶಸ್ತಿ ಪ್ರದಾನ ಸಮಾರಂಭವು 2025ರ ಮೇ 19, ಸೋಮವಾರ, ಬೆಂಗಳೂರು ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿದೆ.

ವಿಶ್ವಕರ್ಮ ಸಮುದಾಯದ ಐತಿಹಾಸಿಕ ಪಂಚ ಶಿಲ್ಪ ವೃತ್ತಿಗಳಾದ ಕಾಷ್ಟ ಶಿಲ್ಪ (ಮರ), ಲೋಹ ಶಿಲ್ಪ (ಕಬ್ಬಿಣ), ಶಿಲಾ ಶಿಲ್ಪ (ಕಲ್ಲಿನ ಕೆತ್ತನೆ), ಎರಕ ಶಿಲ್ಪ (ಕಂಚು), ಸ್ವರ್ಣ ಶಿಲ್ಪ (ಚಿನ್ನ–ಬೆಳ್ಳಿ)ಗಳಲ್ಲಿ ವಿಶಿಷ್ಟ ಸಾಧನೆಗೈದ ಐದು ಪುರುಷ ಸಾಧಕರಿಗೆ ಮತ್ತು ಕಲೆ, ಸಾಹಿತ್ಯ, ಶಿಕ್ಷಣ, ಸಂಗೀತ, ಕಾನೂನು, ಕ್ರೀಡೆ, ಚಿತ್ರರಂಗ, ರಂಗಭೂಮಿ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐದು ಮಹಿಳಾ ಸಾಧಕರಿಗೆ “ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಪ್ರತಿ ಪುರಸ್ಕಾರವು ನಗದು ಬಹುಮಾನ, ಸ್ಮರಣಿಕೆ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪುರಸ್ಕೃತರಿಗೆ ‘ವಿಶ್ವಕರ್ಮ ಕಲಾಸಿಂಧು’, ‘ವಿಶ್ವಕರ್ಮ ಶಿಲ್ಪಶ್ರೀ’, ‘ವಿಶ್ವಕರ್ಮ ಕಲಾ ಕೌಸ್ತುಭ’, ‘ವಿಶ್ವಕರ್ಮ ಕಲಾ ಸೌರಭ’, ‘ವಿಶ್ವಕರ್ಮ ಕಲಾಶ್ರೀ’ ಹೀಗೆ ವಿಭಿನ್ನ ಪದಕಗಳು ನೀಡಿ ಗೌರವಿಸಲಾಗುವುದು.

ಈ ಬಗ್ಗೆ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಎಂ. ಸೋಮಶೇಖರ್ ರವರು ಸರ್ವಾಧ್ಯಕ್ಷರಾದ ಡಾ|| ವಸಂತ ಮುರುಳಿ ಆಚಾರ್ ರ ಸಮ್ಮುಖದಲ್ಲಿ ಮತ್ತು ಸಂಘದ ಪ್ರಮುಖರ ಉಪಸ್ಥಿತಿಯಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರುದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

City Today News 9341997936

ಶ್ರೀ ಗುರು ರಾಯರ ಸನ್ನಿಧಿಯಲ್ಲಿ ಚಿಕ್ಕ ಮಕ್ಕಳಿಂದ ಶ್ರೀ ಹರಿ ಭಜನೆ  ಮತ್ತು “ನರ್ತನ ಸೇವೆ” “ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ಸಂಸ್ಕಾರವೇ ಮುಖ್ಯ”

ಬೆಂಗಳೂರು : ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಪ್ರತಿ ಶುಕ್ರವಾರ ಶನಿವಾರ ಭಾನುವಾರ ಶ್ರೀಹರಿ ಭಜನೆ ಕಾರ್ಯಕ್ರಮವು ನೆರವೇರುತ್ತಿದೆ,ಈ ಭಾನುವಾರ ದಂದು ನಡೆದ ಶ್ರೀಹರಿ ಭಜನೆ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಾದ ಕುಮಾರಿ- ಧೃತಿ ಆತ್ರೇಯಸ್, ಕುಮಾರಿ- ಧನ್ವಿ ಆತ್ರೇಯಸ್ ಎಂಬ ಮಕ್ಕಳು ವಿಶೇಷವಾಗಿ ಶ್ರೀ ಗುರು ರಾಯರ ಸನ್ನಿಧಿಯಲ್ಲಿ “ನರ್ತನ ಸೇವೆ”ಯನ್ನು ಸಲ್ಲಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು, ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು, ಇದೇ ಸಂದರ್ಭದಲ್ಲಿ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್,  ಕೆ ವಾದಿಂದ್ರಾಚಾರ್ಯರು ಮಾತನಾಡುತ್ತಾ ಇಂದಿನ ಮಕ್ಕಳಿಗೆ ಸಂಸ್ಕಾರವೇ ಮುಖ್ಯ ಆ ಸಂಸ್ಕಾರ ದಿಂದಲೇ ಮಕ್ಕಳಿಗೆ ಶ್ರೇಯೋಭಿ ವೃದ್ಧಿ  ಆಗಲಿದೇ ಎಂದು ತಿಳಿಸಿ ಆಶೀರ್ವದಿಸುತ್ತ ಫಲ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸಿದರು ಹಾಗೂ ಭಕ್ತರು ಸಹ ಮಕ್ಕಳ ನರ್ತನ ಸೇವೆಯನ್ನು ವೀಕ್ಷಿಸಿ ಸಂತೋಷವನ್ನು ವ್ಯಕ್ತ ಪಡಿಸುತ್ತಾ ಮಕ್ಕಳನ್ನು ಪ್ರೋತ್ಸಾಹಿಸಿ ಹಾರೈಸಿದರು,

City Today News 9341997936

Easter Greetings from Gs. Gopal Raaj, Editor, City Today News

Bengaluru, April 20, 2025:
On the joyous occasion of Easter, Gs. Gopal Raaj, the Editor of City Today News, extended his warm wishes to all readers, well-wishers, and citizens across the city.

In his Easter message, he said:
“Easter is a celebration of hope, renewal, and faith. It reminds us that light always triumphs over darkness. May this Easter bring joy, peace, and new beginnings to all. Let us embrace the spirit of compassion, unity, and service in our communities.”

He further added that City Today News remains dedicated to bringing truthful, impactful, and people-centered journalism that uplifts society and encourages positive change.

City Today News 9341997936

ಶಿರಡಿ ಸಾಯಿಬಾಬಾ ಮೂಲ ಪಾದುಕೆ ದರ್ಶನ ಉತ್ಸವ ಎ.17 ಮತ್ತು 18 ರಂದು ಮಲ್ಲೇಶ್ವರಂನಲ್ಲಿ

ಬೆಂಗಳೂರು, ಏಪ್ರಿಲ್ 15: ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಸಾಯಿ ಮಂಡಳಿಯು ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಸಹಯೋಗದೊಂದಿಗೆ ಎರಡು ದಿನಗಳ “ಶ್ರೀ ಶಿರಡಿ ಸಾಯಿಬಾಬಾ ಮೂಲ ಪಾದುಕೆ ದರ್ಶನ ಉತ್ಸವ”ವನ್ನು ಏಪ್ರಿಲ್ 17 (ಗುರುವಾರ) ಮತ್ತು ಏಪ್ರಿಲ್ 18 (ಶುಕ್ರವಾರ)ರಂದು ಆಯೋಜಿಸಿದೆ.

ಈ ಉತ್ಸವದ ಭಾಗವಾಗಿ, ಸಾಯಿಬಾಬಾರವರ ಮೂಲ ಪಾದುಕೆಗಳನ್ನು ಮಲ್ಲೇಶ್ವರಂ ಸಂಪಿಗೆ ರಸ್ತೆ 14ನೇ ಅಡ್ಡರಸ್ತೆಯಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಭಕ್ತರ ದರ್ಶನಕ್ಕಾಗಿ ಇಡಲಾಗುತ್ತದೆ. ಭಕ್ತರು ಬಂದು ಪಾದುಕೆಯ ದರ್ಶನ ಪಡೆದು ಶ್ರೀ ಸಾಯಿಬಾಬಾರವರ ಆಶೀರ್ವಾದ ಪಡೆಯಲು ಅವಕಾಶವಿದೆ.

ಈ ಕುರಿತು ಇಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಾಯಿ ಮಂಡಳಿಯ ಅಧ್ಯಕ್ಷ ಡಾ. ಕೆ. ನಾಗೇಶ್ ಮಾತನಾಡಿ, “ಈ ದರ್ಶನ ಉತ್ಸವವು ಬೆಂಗಳೂರಿನ ಭಕ್ತರಿಗೆ ಅಪರೂಪದ ಧಾರ್ಮಿಕ ಅನುಭವ ನೀಡಲಿದೆ. ಸಾಯಿ ಮಂಡಳಿಯು ಈ ಮೂಲಕ ಧಾರ್ಮಿಕ ಸೇವೆಯ ಜೊತೆಗೆ ಸಾಮಾಜಿಕ ಸೇವೆಗೂ ಒತ್ತು ನೀಡುತ್ತಿದೆ,” ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ಪ್ರಕಾಶ್ ರಾವ್, ಶ್ರೀ ಶೆಣೈ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗೋರಕ್ಷ ಗಡಿಲ್ಕರ್ ಅವರು ಸಹ ಕಾರ್ಯಕ್ರಮದ ಯಶಸ್ಸಿಗಾಗಿ ಸಹಕಾರ ನೀಡುತ್ತಿದ್ದಾರೆ.

ಸಾಯಿ ಮಂಡಳಿ ಹಾಗೂ ಶಿರಡಿ ಸಂಸ್ಥಾನವು ಎಲ್ಲ ಭಕ್ತರನ್ನು ಈ ಪವಿತ್ರ ಸಂದರ್ಭದಲ್ಲಿ ಭಾಗವಹಿಸಿ ಪಾದುಕೆಯ ದರ್ಶನ ಪಡೆದು ಶ್ರೀ ಸಾಯಿಬಾಬಾರವರ ಕೃಪೆಗೆ ಪಾತ್ರರಾಗುವಂತೆ ಆಹ್ವಾನಿಸಿದ್ದಾರೆ.

City Today News 9341997936

ಜಯನಗರ ರಾಯರ ಮಠದಲ್ಲಿ ಹನುಮ ಜಯಂತಿ ಪ್ರಯುಕ್ತ ಶ್ರೀ ಮುಖ್ಯಪ್ರಾಣ ದೇವರಿಗೆ ವಜ್ರಕವಚಧಾರಣೆ ಹಾಗೂ ಹುಣ್ಣಿಮೆಯ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಬೆಂಗಳೂರು : ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಹನುಮ ಜಯಂತಿ ಪ್ರಯುಕ್ತ  ಶ್ರೀ ಮುಖ್ಯ ಪ್ರಾಣದೇವರಿಗೆ ವಜ್ರಕವಚ ಧಾರಣೆ ಹಾಗೂ  ಹುಣ್ಣಿಮೆ ಹಾಗೂ ಹನುಮ ಜಯಂತಿಯ ಪ್ರಯುಕ್ತ ವೇದ ಪಾರಾಯಣದೊಂದಿಗೆ ಶ್ರೀ ಸತ್ಯನಾರಾಯಣ ಸ್ವಾಮಿವ್ರತ ಪೂಜೆಯು ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು ಹಾಗೂ ಕಟ್ಟಿ ರಾಘವೇಂದ್ರ ಆಚಾರ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ರಥೋತ್ಸವ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು. ಈ ಪೂಜಾ ಸೇವೆಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936