
ಮಾತೃ ಅಂಧರ ಮತ್ತು ಇತರೆ ಅಂಗವಿಕಲ ಮಕ್ಕಳ ಶಿಕ್ಷಣ ಸಂಸ್ಥೆ ಯಲಹಂಕ , ಬೆಂಗಳೂರು .
ಮಾತೃ ಅಂಧರ ಮತ್ತು ಇತರ ಅಂಗವಿಕಲ ಮಕ್ಕಳ ಶಿಕ್ಷಣ ಸಂಸ್ಥೆಯು ಸೆನ್ಸ್ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 8 ವರ್ಷಗಳಿಂದ ಶ್ರವಣಅಂಧತ್ವ ಜೊತೆಗೆ ವಿವಿಧ ನೂನ್ಯತೆಯುಳ್ಳ ಅಂಗವಿಕಲ ಮಕ್ಕಳ ಏಳಿಗೆಗೆ ಯಲಹಂಕ ಉಪನಗರ ಮತ್ತು ಡಿ.ಜೆ.ಹಳ್ಳಿ , ಬೆಂಗಳೂರಿನಲ್ಲಿ ಶ್ರಮಿಸುತ್ತಿದೆ . ಸೆನ್ಸ್ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯ ಸರ್ವೆಯ ಪ್ರಕಾರ ಭಾರತ ದೇಶದಲ್ಲಿ ಸುಮಾರು 5 ಲಕ್ಷ ಶ್ರವಣಅಂಧತ್ವ ಜನರಿರುವುದು ಕಂಡುಬಂದಿದೆ ಹಾಗೆಯೇ ಕರ್ನಾಟಕದಲ್ಲಿ 5 ಸಾವಿರ ಜನರಿರುವುದು ತಿಳಿದು ಬಂದಿದೆ . 2016 ರ RPWD Act ನಲ್ಲಿ ಈ ಅಂಗವಿಕಲತೆಯನ್ನು ವಿವಿಧ ಅಂಗವಿಕಲತೆಯ ಜೊತೆಗೆ ಶ್ರವಣಅಂಧತ್ವ ಎಂದು ಸೇರಿಸಿದ್ದಾರೆ ಆದರೆ ಈ Act ಬಂದು 6 ವರ್ಷ ಕಳೆಯುತ್ತಾ ಬಂದರೂ ಇಲ್ಲಿಯವರೆಗೆ ಈ ಅಂಗವಿಕಲತೆಯನ್ನು ಗುರುತಿಸುವುದಾಗಲಿ , ಅವರಿಗೆ ಬೇಕಾಗಿರುವ ಸೌಲಭ್ಯವನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತುರುವಂತಹ ಕೆಲಸವನ್ನು ಯಾರೂ ಮಾಡುತ್ತಿಲ್ಲ . ಶ್ರವಣ ಅಂದತ್ವ ಎಂದರೆ ಯಾವುದೇ ಒಬ್ಬ ವ್ಯಕ್ತಿಗೆ / ಮಗುವಿಗೆ ಸಂಪೂರ್ಣವಾಗಿ ಅಥವಾ ಸ್ವಲ್ಪ ಮಟ್ಟಿಗೆ ಕಣ್ಣು ಕಾಣಿಸದೆ ಇರುವುದು ಜೊತೆಗೆ ಕಿವಿ ಕೇಳಿಸದೆ ಇರುವುದಕ್ಕೆ ಶ್ರವಣ ಅಂಧತ್ವ ಎಂದು ಕರೆಯುತ್ತಾರೆ . ಹಾಗೂ ಈ ಮಕ್ಕಳಲ್ಲಿ ಸಂವಹನ , ಬೆಳವಣಿಗೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ತೀವ್ರವಾದ ಸಮಸ್ಯೆಗಳು ಉಂಟಾಗುತ್ತದೆ . ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿ ಶ್ರವಣಅಂಧತ್ವದ ಜೊತೆಗೆ ವಿವಿಧ ನೂನ್ಯತೆಯುಳ್ಳ ಅಂಗವಿಕಲ ಮಕ್ಕಳ ಬಗ್ಗೆ ಕೆಲಸ ಮಾಡುತ್ತಿರುವ ಏಕೈಕ ಸಂಸ್ಥೆ ಎಂದರೆ ಅದುವೆ ಮಾತೃ ಅಂಧರ ಮತ್ತು ಇತರೆ ಅಂಗವಿಕಲ ಮಕ್ಕಳ ಶಿಕ್ಷಣ ಸಂಸ್ಥೆಯಾಗಿದೆ .
ಸಂಸ್ಥೆಯು ಈ ಅಂಗವಿಕಲ ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ಹಾಗೂ ಅವರಿಗೆ ಅತಿ ಅವಶ್ಯಕವಾಗಿ ಬೇಕಾಗಿರುವ ತರಬೇತಿಯನ್ನು ಕೇಂದ್ರ ಆಧಾರಿತವಾಗಿ , ಗೃಹ ಆಧಾರಿತವಾಗಿ ಮತ್ತು ಸಹಾಯ ಆಧಾರಿತವಾಗಿ ನೀಡುತ್ತಿದೆ . ಹಾಗೆಯೇ 18 ವರ್ಷ ಮೇಲ್ಪಟ್ಟ ಯುವಕ / ಯುವತಿಯರಿಗೆ ವೃತ್ತಿಪರ ಕೌಶಲ್ಯ ತರಬೇತಿಯನ್ನು ನೀಡುವುದರ ಜೊತೆಗೆ 25000 ರೂಗಳನ್ನು ನೀಡಿ ಮುಂದಿನ ಭವಿಷ್ಯಕ್ಕೆ ಅನುವುಮಾಡಿಕೊಡುತ್ತಿದೆ .
ಕೋವಿಡ್ -19 ಸಮಯದಲ್ಲಿ ಶ್ರವಣಅಂಧತ್ವ ಜೊತೆಗೆ ವಿವಿಧ ನೂನ್ಯತೆಯುಳ್ಳ ಮಕ್ಕಳಿಗೆ ಮತ್ತು ಅವರ ಪೋಷಕರಿಗಾದ ಸಮಸ್ಯೆಗಳು.
1. ಔಷಧಿಯ ಸಮಸ್ಯೆ 2. ಪಿಂಚಣಿ ಸಮಸ್ಯೆ 3. ಶಾಲೆಗೆ ರಜೆ ನೀಡಿರುವುದರಿಂದ ನಮ್ಮ ಮಕ್ಕಳ ನಡತೆಯಲ್ಲಿ ಬದಲಾವಣೆ ಹಾಗೂ ಕಲಿಕೆಯಲ್ಲಿ ಹಿಂದುಳಿದಿರುವಿಕೆ , 4. ಆರ್ಥಿಕ ಸಮಸ್ಯೆ 5. ಸರ್ಕಾರಿ ಯೋಜನೆಗಳು ಜಾರಿಗೆ ಬರದ ಕೋವಿಡ್ -19 ಸಮಯದಲ್ಲಿ ರದ್ದಾಗಿ ಬದಲಾಗಿರುವುದು . 6. ಲಾಕ್ ಡೌನ್ ಸಮಯದಲ್ಲಿ ಸರ್ಕಾರದ ಸಹಾಯ ಸಿಗದೆ ಇರುವುದು , 7. ತುರ್ತು ಸಮಯದಲ್ಲಿ ಹೊರಗೆ ಹೋಗಲು ವಾಹನಗಳ ಸಮಸ್ಯೆ . 8. ಸುಮಾರು ದಿನಗಳವರೆಗೆ ಮಕ್ಕಳನ್ನು ಮನೆಯಲ್ಲಿಯೇ ಇರಿಸಿಕೊಳ್ಳುವಂತೆ ಆಗಿತ್ತು . 9. ಕೋವಿಡ್ -19 ಸಮಯದಲ್ಲಿ ಬೆಲೆ ಏರಿಕೆಯ ಸಮಸ್ಯೆ . 10 , ಕೋವಿಡ್ -19 ಲಸಿಕೆ ಪಡೆಯುವಲ್ಲಿ ಸಮಸ್ಯೆ . II . ಒಂದು ವೇಳೆ ಭವಿಷ್ಯದಲ್ಲಿ ಮತ್ತೆ ಲಾಕ್ ಡೌನ್ ಆದರೆ ಆ ಸಮಯದಲ್ಲಿ ಸರ್ಕಾರದ ಸಹಾಯವೇನು ?.
ಶ್ರವಣಅಂಧತ್ವ ಯುವಕನ ಸಮಸ್ಯೆಗಳು .
1. ಕೋವಿಡ್ -19 ಸಮಯದಲ್ಲಿ ಶಾಲೆ ಇರಲಿಲ್ಲ . 2. ಫೇಡ್ಸ್ ಜೊತೆಗೆ ಇರಲಿಲ್ಲ . 3. ಹೊಸ – ಹೊಸ ಕಲಿಕೆ ಇರಲಿಲ್ಲ . 4. ಏಲ್ಲಿಯೂ ಹೊರಗಡೆ ಹೊಗುವಹಾಗಿಲ್ಲ ಮತ್ತು ಒಂದೇ ಕಡೆ ಇದ್ದು ಬೇಜಾರು . 5. ಪ್ರತಿಯೋಬ್ಬರನ್ನು ಮುಟ್ಟದೆ ನಾವು ಮಾತನಾಡಿಸುವುದಿಲ್ಲ ಹಾಗಾಗಿ ಇನ್ನೊಬ್ಬರನ್ನು ಮಾತನಾಡಿಸಲು ಭಯವಾಗಿತ್ತು . 6. ಪ್ರತಿಬಾರಿಯೋ ಸ್ಯಾನಿಟೈಜರ್ ಮತ್ತು ಮಾಸ್ಕ್ ಹಾಕಿಕೊಂಡು ಇರಬೇಕು . 7. ಅತಿ ಅವಶ್ಯಕ ವಸ್ತುಗಳ ಜೋಪಾನ ಮಾಡುವುದು ಕಟ್ಟಕರ ಎಂದು ಮಾತೃ ಅಂಧರ ಮತ್ತು ಇತರ ಅಂಗವಿಕಲ ಮಕ್ಕಳ ಶಿಕ್ಷಣ ಸಂಸ್ಥೆಯು ಸೆನ್ಸ್ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯ ನಾರಾಯಣ, ಬಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು
City Today News
9341997936
You must be logged in to post a comment.