ಕರ್ನಾಟಕ ವಿಧಾನಸಭಾ ಚುನಾವಣೆ 2022-023 ರಲ್ಲಿ ಕುಂಚಿಟಿಗ ಸಮುದಾಯದಿಂದ ಆಯ್ಕೆಯಾಗಿರುವ ಏಕೈಕ ಸದಸ್ಯರಾದ ಮಾನ್ಯ ಶ್ರೀ ಟಿ.ಬಿ.ಜಯಚಂದ್ರ ರವರಿಗೆ ಅಖಿಲ ಕುಂಚಿಟಿಗರ ಮಹಾಮಂಡಲ, ರಾಜ್ಯದ ಎಲ್ಲಾ ಸಂಘಟನೆಗಳ ಹಾಗೂ ಕುಂಚಿಟಿಗ ಸಮುದಾಯದ ಪರವಾಗಿ ಅಭಿನಂದನೆಗಳು.

ಕುಂಚಿಟಿಗ ಜನಾಂಗವು ರಾಜ್ಯದ 18 ಜಿಲ್ಲೆಗಳಲ್ಲಿ ಕ್ಷೇತ್ರಗಳಲ್ಲಿ 45 ನಿರ್ಣಾಯಕರಾಗಿರುವ ಸುಮಾರು 25 ಲಕ್ಷ ಜನಸಂಖ್ಯೆ ಹೊಂದಿರುವ ಹಾಗೂ ಸ್ವಂತ ಬಲದ ಮೇಲೆ 10-15 ಕ್ಷೇತ್ರಗಳಲ್ಲಿ ವಿಜಯಶಾಲಿಗಳಾಗಲು ಅವಕಾಶವಿರುವ ನಮ್ಮ ಕುಂಚಿಟಿಗ ಜನಾಂಗದ ಅಭಿವೃದ್ಧಿಗಾಗಿ ಆಯ್ಕೆಯಾಗಿರುವ ಹಿರಿಯ ಹಾಲಿ ಮುಖಂಡರಾಗಿರುವ ಸನ್ಮಾನ್ಯ ಶ್ರೀ.ಟಿ.ಬಿ.ಜಯಚಂದ್ರ ರವರನ್ನು ಮುಂಬರುವ ಸಂಪುಟದಲ್ಲಿ ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಪ್ರಮುಖ ಖಾತೆಯನ್ನು ನೀಡಲು ಈ ಮೂಲಕ ಅಖಿಲ ಕುಂಚಿಟಿಗರ ಮಹಾಮಂಡಲವು ಕುಂಚಿಟಿಗ ಸಮುದಾಯದ ಪರವಾಗಿ ಹೆಚ್. ರಂಗಹನುಮಯ್ಯ, ಅಧ್ಯಕ್ಷರು ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ವಿನಂತಿಸಿದರು.
City Today News 9341997936
You must be logged in to post a comment.