A Grand Milestone: VIDYA South Zone Marks 15 Years of Transforming Lives

VIDYA South Zone Celebrates 15 Years with Grand Anniversary Event Massive participation, distinguished guests, and inspiring performances mark a memorable celebration

Bengaluru: VIDYA South Zone concluded its 15th Anniversary Celebration with remarkable enthusiasm and overwhelming participation, making it one of the most memorable milestones in its journey of empowering communities through education.

The event witnessed the gracious presence of several distinguished guests who elevated the occasion with their support and encouragement. VIDYA’s Founder President, Mrs. Rashmi Misra, and Prof. Ashok Misra led the celebrations with inspiring reflections on VIDYA’s impactful 15-year journey.

The ceremony was further honoured by the attendance of esteemed Chief Guest Mr. Sanjeev Kumar Gupta, along with Dr. Nayan Dabholkar, Vice Chair – Mumbai, VIDYA’s COO Ms. Rekha Sriivasan, and Zonal Director Dr. Deepa Srivastava, who collectively graced the stage for the traditional lamp-lighting ceremony, symbolising knowledge, hope, and new beginnings.

Adding charm and warmth to the moment, the stage was joined by VIDYA’s own little stars — Himani Thapa, Tarun Das, Dhanush Kumar, Bakkayya, Angel Sara, and Shushank, who lit the lamp alongside the dignitaries, representing the bright future that VIDYA strives to nurture.

The evening featured heartwarming performances, personal stories of transformation, and powerful narratives that showcased VIDYA South Zone’s commitment to holistic development. With a packed audience and enthusiastic participation from alumni, parents, volunteers, and supporters, the event concluded as a grand success, reaffirming VIDYA’s mission to continue creating meaningful educational opportunities for underserved communities.

City Today News 9341997936

Heartfelt Tribute to Shri P.K. Ranganathan on His 43rd Death Anniversary-“P.K. Ranganathan Was the Voice of the Voiceless” — G.S. Gopal Raaj

Shri P.K. Ranganathan, former MLA of Shanthinagar

Bengaluru, July 22, 2025:
Heartfelt tributes poured in today as the city remembered Shri P.K. Ranganathan, former MLA of Shanthinagar, on his 43rd death anniversary. Known for his simplicity, integrity, and inclusive approach, Ranganathan was widely respected for his commitment to social justice and is often referred to as the ‘Kamarajar of Shanthinagar’.

Throughout his political career, he worked tirelessly for the welfare of the underprivileged, transcending barriers of caste and religion. One of his most notable contributions was his bold intervention to halt the demolition of the Mayabazaar slum by military authorities. His courageous stand protected countless families, and in recognition of his efforts, the area was later renamed P.K. Ranganatha Nagar.

“On this solemn occasion, I offer my deepest respects and salute the legacy of this remarkable leader,” said G.S. Gopal Raaj, Editor of City Today News and Tj Vision Media.

City Today News 9341997936

ಅಕ್ಷಯ ಬ್ರಾಹ್ಮಣ ಮಹಾಸಂಘದ ವತಿಯಿಂದ ಸಂಘದ 6ನೇ ವಾರ್ಷಿಕೋತ್ಸವ ಹಾಗೂ ಸೀತಾರಾಮ ಕಲ್ಯಾಣ ಆಚರಣೆ

ಅಕ್ಷಯ ಬ್ರಾಹ್ಮಣ ಮಹಾಸಂಘದ ವತಿಯಿಂದ ಸಂಘದ 6ನೇ ವಾರ್ಷಿಕೋತ್ಸವ ಹಾಗೂ ಸೀತಾರಾಮ ಕಲ್ಯಾಣವನ್ನು ನಗರದ ಯಶವಂತಪುರ ವೃತ್ತದಲ್ಲಿರುವ ಮೇವರ್ ಭವನದಲ್ಲಿ ದಿನಾಂಕ 25/12/2024 ರಂದು ಬೆಳಗ್ಗೆ 7:00 ರಿಂದ ಮಧ್ಯಾಹ್ನ 1:30 ಗಂಟೆವರೆಗೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ರವರು, ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಸಿಎನ್ ಅಶ್ವಥ್ ನಾರಾಯಣ ರವರು, ಸಮಾಜ ಸೇವಕರಾದ ಸುರೇಶ್ ಗೌಡ್ರು ರವರು, ಮಾಜಿ ಬಿಬಿಎಂಪಿ ಸದಸ್ಯರಾದ ಜಯಪಾಲ್ ರವರು  ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅಕ್ಷಯ ಬ್ರಾಹ್ಮಣ ಮಹಾಸಂಘದ ಅಧ್ಯಕ್ಷರಾದ ಡಾ. ಅಂಬರೀಶ್ ರವರು ತಿಳಿಸಿದರು.

City Today News 9341997936

“24ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅಪ್ಪು ನಮನ” – ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘ (ರಿ) ಬೆಂಗಳೂರು

24ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅಪ್ಪು ನಮನದ ಪ್ರಯುಕ್ತ ದಿನಾಂಕ: 12.02.2024ನೇ ಸೋಮವಾರ ಸಂಜೆ 4.00 ಗಂಟೆಗೆ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರ್ ನಲ್ಲಿ ಕನ್ನಡದ ಹೆಸರಾಂತ ನಟ ಕರ್ನಾಟಕ ರತ್ನ ಡಾ|| ಪುನೀತ್ ರಾಜ್ ಕುಮಾರ್‌ರವರ ‘ಅಪ್ಪು ನಮನ’ ಕಾರ್ಯಕ್ರಮದಲ್ಲಿ ಬೊಂಬೆ ಹೇಳುತೈತೆ ಗೀತೆಗೆ ಒಂದು ಸಾವಿರ (1000) ವಾದ್ಯಗೋಷ್ಠಿ ಗಾಯಕ, ಗಾಯಕಿಯರು ಕೂಡಿ ಧ್ವನಿಗೂಡಿಸಿ ಪುನೀತ್ ರಾಜ್‌ ಕುಮಾರ್‌ರವರಿಗೆ ವಿಶೇಷ ನಮನ ಸಲ್ಲಿಸುತ್ತಿದ್ದೇವೆ.

ಈ ಸುಸಂದರ್ಭದಲ್ಲಿ  ತಾವುಗಳೂ ಭಾಗವಹಿಸಿ ಮತ್ತು ನೀವೂ ಕೂಡ ಬೊಂಬೆ ಹೇಳುತೈತೆ ಗೀತೆಯನ್ನು ಹಾಡುವುದರ ಮೂಲಕ ಹೆಚ್ಚಿನ ಸಹಕಾರ ನೀಡಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸವಿನಯ ಪ್ರಾರ್ಥನೆ ಮಾಡುತ್ತೇನೆ ಎಂದು ಡಾ. ಆರ್. ಶಂಕ‌ರ್-ರಾಜ್ಯಾಧ್ಯಕ್ಷರು ಹಾಗೂ ಪಿ. ಅರುಣ್ ಪ್ರಧಾನ ಕಾರ್ಯದರ್ಶಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936

ಸಂಗೀತ ವಿದ್ಯಾಸಾಗರ ಸಂಗೀತ ವಿದ್ವಾನ್ದಿ| ಚಿಂತಲಪಲ್ಲಿ ಶ್ರೀ ವೆಂಕಟರಾಮಯ್ಯನವರ ಜನ್ಮಶತಮಾನೋತ್ಸವ

ಸಂಗೀತ ವಿದ್ಯಾಸಾಗರ ಸಂಗೀತ ವಿದ್ವಾನ್ ದಿ| ಚಿಂತಲಪಲ್ಲಿ ಶ್ರೀ ವೆಂಕಟರಾಮಯ್ಯನವರ ಜನ್ಮಶತಮಾನೋತ್ಸವವನ್ನು ಮಕರ ಸಂಕ್ರಾಂತಿ ದಿನದಂದು ದಿನಾಂಕ 15.01.2024ರ ಸೋಮವಾರ ಬೆಳಿಗ್ಗೆ 10:00ರಿಂದ ರಾತ್ರಿ 9:00 ಗಂಟೆಯವರೆಗೆ ಚೌಡಯ್ಯ ಸ್ಮಾರಕ ಭವನ, ಗಾಯತ್ರಿ ದೇವಿ ಪಾರ್ಕ್ ಬಡಾವಣೆ, ವೈಯಾಲಿಕಾವಲ್, ಮಲ್ಲೇಶ್ವರಂ, ಬೆಂಗಳೂರು- 560003, ಇಲ್ಲಿ ಆಚರಿಸುತ್ತಿದ್ದು, ಸಾರ್ವಜನಿಕರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ಶ್ರೀ ವೆಂಕಟರಾಮಯ್ಯನವರ ಬಗ್ಗೆ ಪ್ರಕಟಣೆ / ಪ್ರಸಾರ ಮಾಡಲು ಅವರ ಕಿರು ವ್ಯಕ್ತಿ ಚಿತ್ರಣ / ಸಾಧನೆಗಳ ಮಾಹಿತಿ ಇಲ್ಲಿದೆ.

ವಿಶ್ವ ಪ್ರಸಿದ್ಧ ಸಂಗೀತಗಾರ: ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತನ್ನದೇ ಆದ ಮಹತ್ವ ಪಡೆದಿದೆ. ಈ ಸಂಗೀತ ಪರಂಪರೆಯಲ್ಲಿ ಚಿಂತಲಪಲ್ಲಿ ಮನೆತನವು ಪುರಾತನ ಮನೆತನಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ. ಈ ಮನೆತನವು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅದ್ವಿತೀಯವಾದ ಪ್ರತಿಭಾವಂತ ಕಲಾರತ್ನಗಳನ್ನು ನೀಡಿದೆ. ಇಂತಹ ಕಲಾರತ್ನಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಲೆಯನ್ನು ಜಾಗಿತಿಕವಾಗಿ ಪಸರಿಸಿದ, ಹೆಸರಾಂತ ಸಂಗೀತ ವಿದ್ಯಾಸಾಗರ ಸಂಗೀತ ವಿದ್ವಾನ್ ದಿ॥ ಚಿಂತಲಪಲ್ಲಿ ವೆಂಕಟರಾಮಯ್ಯರವರು ಒಂದು ಅನರ್ಘ್ಯ ರತ್ನವಾಗಿರುತ್ತಾರೆ.

ಜನನ: ಕ್ರಿ.ಶ.1922 ಜನವರಿ 30ರಂದು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಚಿಂತಲಪಲ್ಲಿ (ಹುಣಸೇನಹಳ್ಳಿ) ಗ್ರಾಮದಲ್ಲಿ ಖ್ಯಾತ ಸಂಗೀತ ವಿದ್ವಾಂಸರಾದ ದಿವಂಗತ ಶ್ರೀ ವೆಂಕಟಾಚಲಯ್ಯ ಮತ್ತು ಶ್ರೀಮತಿ ರಾಮಕ್ಕ ದಂಪತಿಗಳಿಗೆ ಜನಿಸಿದರು. ಇವರು ತಮ್ಮ ಸಂಗೀತ ಅಭ್ಯಾಸವನ್ನು ಅವರ ದೊಡ್ಡಪ್ಪನವರಾದ ಚಿಂತಲಪಲ್ಲಿ ಸಂಗೀತ ಪರಂಪರೆಯ ಕಳಸಪ್ರಾಯರಾದ ವಿದ್ವಾನ್ ದಿ|| ವೆಂಕಟರಾಯರು ಮತ್ತು ಅಣ್ಣನವರಾದ ಸಂಗೀತ ವಿದ್ವಾನ್ ದಿ|| ಚಿಂತಲಪಲ್ಲಿ ರಾಮಚಂದ್ರರಾಯರಲ್ಲಿ ಅಭ್ಯಾಸ ನಡೆಸಿದರು. ಶ್ರೀ ತ್ಯಾಗರಾಜರ ಶಿಷ್ಯಪರಂಪರೆ ಅನುಸ್ಫೂತವಾಗಿ ಕರ್ನಾಟಕದಲ್ಲಿ ಹರಿದುಬರುವಂತೆ ಮಾಡಿದ ಮತ್ತು ಆಸ್ಥಾನ ವಿದ್ವಾನ್, ಸಂಗೀತ ಸಾಮ್ರಾಟ್ ಹೀಗೆ 800 ವರ್ಷಗಳಿಂದಲೂ ಐತಿಹಾಸಿಕವಾಗಿ ಹೊಯ್ಸಳರ, ವಿಜಯನಗರ ಅರಸರ, ಮೈಸೂರು ಅರಸರ ನಿರಂತರ ಆಸ್ಥಾನಿಕರಾಗಿ ಬಂದ ಚಿಂತಲಪಲ್ಲಿ ಪರಂಪರೆ ಇವರಿಂದ ಪುನರುಜ್ಜಿವನಗೊಂಡು ತನ್ನದೇ ಆದ ವಿಶಿಷ್ಟ ಛಾಪನ್ನು ಸಂಗೀತ ಕ್ಷೇತ್ರದಲ್ಲಿ ಹೊಂದಿದೆ.

ಪಾಠ-ಪಠಣ-ವಿದ್ಯಾದಾನ:ಇವರು ತಮ್ಮ ಹುಟ್ಟೂರು ಹುಣಸೇನಹಳ್ಳಿ ಗ್ರಾಮದ ಹೆಸರನ್ನು ಸಂಗೀತ ಸಾಮ್ರಾಜ್ಯಕ್ಕೆ ಚಿರಸ್ಥಾಯಿಯಾಗಿಸಿದ ಖ್ಯಾತಿ ಈ ಜೋಡಿಯದ್ದು, ಶ್ರೀಯುತ ಚಿಂತಲಪಲ್ಲಿ ವೆಂಕಟರಾಮಯ್ಯರವರು ತಮ್ಮ ಶಿಷ್ಯರಿಗೆ ಅನೇಕ ಅಪರೂಪದ ಕೃತಿಗಳ ಪಾಠಾಂತರ, ಜೊತೆಗೆ ವಿಸ್ತಾರವಾದ ರಾಗಾಲಾಪನೆ, ನೆರೆವಲ್ ಸ್ವರ-ಪ್ರಸ್ತಾರಗಳನ್ನು ತಮ್ಮ ಸುಂದರವಾದ ಬರವಣಿಗೆಯ ಲಿಪಿಯೊಂದಿಗೆ ತರಬೇತಿ ನೀಡುತ್ತಿದ್ದರು. ಅವರು ಕಲಿಸಿದ ಅನೇಕ ಕೃತಿಗಳು ಇಂದಿಗೂ ಈ ಪರಂಪರೆಯ ಕಲಾಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.

ದೇಶ-ವಿದೇಶ :1956ರ ದಶಕದಲ್ಲಿ ಅಮೆರಿಕಾ, ಬ್ರಿಟನ್, ಜರ್ಮನಿ, ಆಸ್ಟ್ರಿಯಾ, ಫ್ರಾನ್ಸ್ ಮುಂತಾದ ಐರೋಪ್ಯ ರಾಷ್ಟ್ರಗಳಲ್ಲೂ ಮತ್ತು ಅರಬ್ ದೇಶಗಳಲ್ಲಿಯೂ ಅನೇಕ ಸಂಗೀತ ಕಾರ್ಯಕ್ರಮಗಳನ್ನು ಒಂದು ಚೂರೂ ಬಗ್ಗದೇ ವೇದಿಕೆಗೆ ಕಳೆಯಿರುವಂತೆ ಅವರು ಕೂರುತ್ತಿದ್ದರು. ನೇಪಾಳದಲ್ಲಿ ಜರುಗಿದ ಸಂಗೀತ ಕಾರ್ಯಕ್ರಮಗಳಲ್ಲಿ ಇವರ ಗಾಯನ ಆಲಿಸಿದ ಅಂದಿನ ಮಹಾರಾಜ ಮಹೇಂದ್ರ ವಿಕ್ರಮ ಶಾ ದೇವ ರವರು ಸಂತೋಷಚಿತ್ತದಿಂದ ಇವರಿಗೆ ಅನೇಕ ಉಡುಗೊರೆಗಳನ್ನು ನೀಡಿದರು. ಈ ರೀತಿಯಾಗಿ ವಿದೇಶಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿ, ಅಲ್ಲಿನ ಸಂಗೀತ ರಸಿಕರ ಪ್ರೀತಿ-ಅಭಿಮಾನ-ಪ್ರೋತ್ಸಾಹ ಪಡೆದು ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಚಾರಕ್ಕೆ ಮುಖ್ಯ ಕಾರಣರಾದರು.

ಸೇವಾಮನೋಭಾವ: 1971 ಡಿಸೆಂಬರ್ನಲ್ಲಿ ಶ್ರೀ ತ್ಯಾಗರಾಜ ಗಾನಸಭಾ ಸಂಸ್ಥಾಪಕರಲ್ಲೊಬ್ಬರಾಗಿ ಸಂಗೀತ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ. ಸದರಿ ಸಂಸ್ಥೆಯು ಇಂದಿಗೂ ಸಹ ಅವಿತರವಾಗಿ ನಡೆದುಕೊಂಡು ಬಂದಿರುತ್ತದೆ.

ಶಿಷ್ಯವೃಂದ : ಇವರು ಸಂಗೀತ ಲೋಕಕ್ಕೆ ಅದ್ವಿತೀಯ ಶಿಷ್ಯರನ್ನು ಕಾಣಿಕೆಯಾಗಿ ನೀಡಿರುತ್ತಾರೆ. ಅವರುಗಳಲ್ಲಿ ಸಂಗೀತ ವಿದ್ವಾನ್ ಜಿ.ಎ. ಹನುಮಂತಭಟ್ಟ, ಜಿ.ಎ. ಕುಮಾರಸ್ವಾಮಿ, ಜಿ.ಎ. ಸುಬ್ರಹ್ಮಣ್ಯಶಾಸ್ತ್ರಿ, ಟಿ.ಎಸ್. ಪದ್ಮಾ, ಚಂದ್ರಪ್ರಭಾ ಹಾಗೂ ವೇದವಲ್ಲಿ ಹಾಗೂ ಮಕ್ಕಳಾದ ಸಂಗೀತ ವಿದ್ವಾನ್ ಚಿಂತಲಪಲ್ಲಿ ವೆಂಕಟಾಚಲಪತಿ, ಚಿಂತಲಪಲ್ಲಿ ವಿ. ಶ್ರೀನಿವಾಸ ಮುಂತಾದ ಅಪಾರ ಶಿಷ್ಯಕೋಟಿಯನ್ನು ಸಂಗೀತ ಕ್ಷೇತ್ರಕ್ಕೆ ನೀಡಿರುತ್ತಾರೆ. ಜುಲೈ 1, 1976ರಂದು ಸಂಗೀತ ಲೋಕದಿಂದ ಈ ದಿಗ್ಗಜನ ಅಸ್ತಂಗತವಾಗಿರುತ್ತದೆ.

ಹೆಸರು: ಸಂಗೀತ ವಿದ್ಯಾಸಾಗರ ಸಂಗೀತ ವಿದ್ವಾನ್ ದಿ| ಚಿಂತಲಪಲ್ಲಿ ಶ್ರೀ ವೆಂಕಟರಾಮಯ್ಯನವರು
ಜನನ : 1922 ಜನವರಿ 30ರಂದು ಕೋಲಾರ ಜಿಲ್ಲೆಯ ಗೌರಿಬಿದನೂರು
ಮರಣ: 1976 ಜುಲೈ 1 ರಂದು ಸಂಗೀತ ಲೋಕದಿಂದ ಇವರು ಅಸ್ತಂಗತವಾದರು.

ಜನ್ಮ ಶತಮಾನೋತ್ಸವ ಸಮಾರಂಭ ಆಚರಣೆ 2024

ಸಂಗೀತ ವಿದ್ವಾನ್ ಚಿಂತಲಪಲ್ಲಿ ಶ್ರೀ ವೆಂಕಟರಾಮಯ್ಯನವರ ಜನ್ಮ ಶತಮಾನೋತ್ಸವ ಸಮಾರಂಭ – 2024 ಮೊ: 94488 49421

ದಿನಾಂಕ: 15 ಜನವರಿ, 2024 ಸೋಮವಾರ
ಸಮಯ: ಬೆ. 10.00 ರಿಂದ ಸಂ. 9.00 ರವರೆಗೆ
ಸ್ಥಳ: ಚೌಡಯ್ಯ ಸ್ಮಾರಕ ಭವನ, 16ನೇ ಅಡ್ಡರಸ್ತೆ, ವೈಯಾಲಿಕಾವಲ್, ಮಲ್ಲೇಶ್ವರಂ, ಬೆಂಗಳೂರು
ಮೊ: 94488 49421
……………………………………………………..
ಸಂಗೀತ ವಿದ್ವಾನ್ ಚಿಂತಲಪಲ್ಲಿ ಶ್ರೀ ವೆಂಕಟರಾಮಯ್ಯ
ಕುಟುಂಬದ ಮನೆ ವಿಳಾಸ: ನಂ. 68 140 (5), 10ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು – 560 003
ಮೊ: 94488 49421

City Today News 9341997936