NEB one8 ರನ್‌ನ ಮೊದಲ ಆವೃತ್ತಿಯನ್ನು ವಿರಾಟ್ ಕೊಹ್ಲಿ ಫ್ಲ್ಯಾಗ್ ಆಫ್ ಮಾಡಿದರು

8000 ಕ್ಕೂ ಹೆಚ್ಚು ಓಟಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

26 ಮಾರ್ಚ್ 2023, ಬೆಂಗಳೂರು: NEB one8 ರನ್‌ನ 1 ನೇ ಆವೃತ್ತಿಯಲ್ಲಿ 8000+ ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರಿಂದ ಬೆಂಗಳೂರು ಭಾನುವಾರದ ಮುಂಜಾನೆಯೇ ಜೀವಂತಿಕೆ ಪಡೆಯಿತು. ಭಾರತೀಯ ಏಸ್ ಕ್ರಿಕೆಟಿಗ – ವಿರಾಟ್ ಕೊಹ್ಲಿ ನಗರದಲ್ಲಿ ಫಿಟ್‌ನೆಸ್ ಅನ್ನು ಉತ್ತೇಜಿಸುವ ಉದ್ದೇಶದಿಂದ ರನ್‌ಗೆ ಚಾಲನೆ ನೀಡಿದರು.

ಭಾನುವಾರ ನಡೆದ ಓಟದಲ್ಲಿ ವೃತ್ತಿಪರ ಕ್ರೀಡಾಪಟುಗಳು, ಉತ್ಸಾಹಿ ನಾಗರಿಕರು ಭಾಗವಹಿಸಿದ್ದರು. 18 ಕಿಮೀ ದೂರವನ್ನು 0:59:55 ರಲ್ಲಿ ಕ್ರಮಿಸುವ ಮೂಲಕ ಶಿವಂ ಯಾದವ್ ವೇಗದ ಪುರುಷ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದರು ಮತ್ತು ವೈಭವ್ ಪಾಟೀಲ್ 10 ಕಿಮೀ ದೂರವನ್ನು 0:32:38 ರಲ್ಲಿ ಕ್ರಮಿಸುವ ಮೂಲಕ ಮೊದಲ ರ್ಯಾಂಕ್ ಪಡೆದರು.

ಓಟದ ಆರಂಭಕ್ಕೂ ಮುನ್ನ ಎಲ್ಲಾ ಓಟಗಾರರನ್ನು ಪ್ರೇರೇಪಿಸಲು ವಿರಾಟ್ ಕೊಹ್ಲಿ, “ನಮಸ್ಕಾರ ಬೆಂಗಳೂರು. ದೊಡ್ಡ ಸಂಖ್ಯೆಗಳನ್ನು ಹೊರಹಾಕಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಾನು ಸ್ಥಳಕ್ಕೆ ಬಂದಾಗ ಉತ್ಸಾಹ ಮತ್ತು ನಿರೀಕ್ಷೆಯನ್ನು ನಂಬಲಾಗಲಿಲ್ಲ. One8 ರನ್ ಅನ್ನು ಪ್ರತಿ ವರ್ಷ ಆಯೋಜಿಸಲಾಗುವುದು ಮತ್ತು ಆರೋಗ್ಯಕರ ಜೀವನ ಮತ್ತು ಫಿಟ್‌ನೆಸ್ ಕುರಿತು ಹೆಚ್ಚಿನ ಅರಿವು ಮೂಡಿಸಲು ಇದನ್ನು ಪ್ಯಾನ್ ಇಂಡಿಯಾ ಮಾಡಲು ನಾವು ಪ್ರಯತ್ನವನ್ನು ಮಾಡುತ್ತೇವೆ. ಓಟವು ನಿಮ್ಮ ಸ್ನೇಹಿತರು ಅಥವಾ ಪಾಲುದಾರರಿಂದ ಪ್ರೋತ್ಸಾಹದೊಂದಿಗೆ ಮಾಡಬಹುದಾದ ಒಂದು ಶಿಸ್ತು.

ಎಂಜಾಯ್ ಮಾಡೀ’ ಎಂದು ಸಹಿ ಹಾಕಿದರು.

City Today News – 9341997936

Virat Kohli flagged off the first edition of NEB one8 Run

More than 8000 runners participated in the event

26th March 2023, Bengaluru: Bengaluru sprung to life early on a Sunday morning as over 8000+ people took part in the 1st edition of the NEB one8 Run. Indian Ace Cricketer – Virat Kohli flagged off the run with the aim to promote fitness in the city.

Professional athletes, and enthusiastic citizens participated in the run on Sunday. Shivam Yadav won the first prize in the fastest male category by covering the distance of 18 km in 0:59:55, and Vaibhav Patil bagged the first rank by covering the distance of 10km in 0:32:38.

To motivate all the runners before the start of the run, Virat Kohli said, “Namaskara Bengaluru. Thank you so much for turning out huge numbers. I couldn’t believe the excitement and anticipation when I arrived at the venue. The one8 Run will be organized every year, and we will put in the effort to do it pan India to create more awareness about healthy living and fitness. Running is a discipline that can be done with encouragement from your friends or partners.

He signed off by saying, “Enjoy, Maadi.”

City Today News -9341997936

ಬೆಂಗಳೂರಿನ ನಿಮಾನ್ಸ್ ಕನ್‌ವೆಷನ್‌ ಸೆಂಟರ್‌ನಲ್ಲಿ ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವತಿಯಿಂದ ಇಗ್‌ನಿಟ್ಸ್ (IGNITUS) ಸಮಾವೇಶ

ಬೆಂಗಳೂರು : ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವತಿಯಿಂದ ಇಗ್‌ನಿಟ್ಸ್ (IGNITUS) ಸಮಾವೇಶವನ್ನು ಬೆಂಗಳೂರಿನ ನಿಮಾನ್ಸ್ ಕನ್‌ವೆಷನ್‌ ಸೆಂಟರ್‌ನಲ್ಲಿ ಆಯೋಜಿಸಲಾಗಿತ್ತು.

ಈ ಸಮಾವೇಶವನ್ನು ಜಿ.ಇ ಹೆಲ್ತ್ ಕೇರ್ ನ ನಿರ್ದೇಶಕರಾದ ರಾಮ್ ಕುಮಾರ್ ರಾಮಚಂದ್ರನ್, ಜೈನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚನ್ನರಾಜ್ ರಾಯ್ ಚಂದ್, ಜೈನ್ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ.ರಾಜ್ ಸಿಂಗ್, ಕ್ಯಾಪ್ ಜಿಮಿನಿ ಹಿರಿಯ ನಿರ್ದೇಶಕರಾದ ಮೈಕ್ ಮುರಳಿ, ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವಿಭಾಗದ ಮುಖ್ಯಸ್ಥರಾದ ಡಾ ಅರ್. ಸುಚಿತ್ರ, ರಾಪರ್ ಚಂದನ್ ಶೆಟ್ಟಿ ರವರು ಉದ್ಘಾಟಿಸಿದರು. ಈ ವೇಳೆ 15 ಅತ್ಯಂತ ಪ್ರಭಾವಶಾಲಿ ಶಿಕ್ಷಣ ತಜ್ಞರು, ಸಿಇಓಗಳು ಸಹ ಸಂಸ್ಥಾಪಕರು ಮತ್ತು ಸೆಲೆಬ್ರಿಟಿಗಳು ತಮ್ಮ ಜ್ಞಾನ ಮತ್ತು ಅನುಭವಗಳನ್ನು ಈ ಸಮಾವೇಶದಲ್ಲಿ ಹಂಚಿಕೊಂಡರು. ಈ ವೇಳೆ ಜೈನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚನ್ನರಾಜ್ ರಾಯ್ ಚಂದ್ ರವರು ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಕೌಶಲ್ಯಗಳನ್ನು ಹೆಚ್ಚಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ನಂತರ ಮೈಕ್ ಮುರಳಿ ರವರು ಮಾತನಾಡಿ ಈ ಸಮಾವೇಶದಲ್ಲಿ ನಾನು ಭಾಗವಹಿಸಿರುವುದು ನಿಜಕ್ಕೂ ಸಂತೋಷವಾಗಿದೆ ಏಕೆಂದರೆ ಇದು ಬರೀ ಸಮಾವೇಶವಲ್ಲ ಒಳ್ಳೆಯ ಅನುಭವ ನೀಡುವ ವೇದಿಕೆಯಾಗಿದ್ದು ವಿದ್ಯಾರ್ಥಿಗಳೊಂದಿಗೆ ನಾನು ಕೂಡ ಹೊಸ ವಿಷಯಗಳನ್ನು ಕಲಿಯುವ ಸಂದರ್ಭ ದೊರೆತಿದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ಕಿಚ್ಚನ್ನು ಹೊರಹೊಂಬುವ ಒಂದು ಒಳ್ಳೆಯ ಕಾರ್ಯಕ್ರಮವನ್ನು ಜೈನ್ ವಿಶ್ವವಿದ್ಯಾಲಯ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಬಳಿಕ ಡಾ ಅರ್. ಸುಚಿತ್ರ ರವರು ಮಾತನಾಡಿ ಈ ಸಮಾವೇಶದ ಮೂಲ ಉದ್ದೇಶವೇನೆಂದರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಈ ವೇದಿಕೆ ಮುಖೇನ ತಮ್ಮ ಸಾಧನೆಯ ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳುವುದರಿಂದ  ವಿದ್ಯಾರ್ಥಿಗಳು ತಮ್ಮ ಜೀವವನ್ನು ರೂಪಿಸಿಕೊಳ್ಳಲು ನೆರವಾಗಲಿದೆ ಎಂದರು.

City Today News – 9341997936

ಬೆಂಗಳೂರಿನ ನಿಮಾನ್ಸ್ ಕನ್‌ವೆಷನ್‌ ಸೆಂಟರ್‌ನಲ್ಲಿ ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವತಿಯಿಂದ ಇಗ್‌ನಿಟ್ಸ್ (IGNITUS) ಸಮಾವೇಶ

ಬೆಂಗಳೂರು : ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವತಿಯಿಂದ ಇಗ್‌ನಿಟ್ಸ್ (IGNITUS) ಸಮಾವೇಶವನ್ನು ಬೆಂಗಳೂರಿನ ನಿಮಾನ್ಸ್ ಕನ್‌ವೆಷನ್‌ ಸೆಂಟರ್‌ನಲ್ಲಿ ಆಯೋಜಿಸಲಾಗಿತ್ತು.

ಈ ಸಮಾವೇಶವನ್ನು ಜಿ.ಇ ಹೆಲ್ತ್ ಕೇರ್ ನ ನಿರ್ದೇಶಕರಾದ ರಾಮ್ ಕುಮಾರ್ ರಾಮಚಂದ್ರನ್, ಜೈನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚನ್ನರಾಜ್ ರಾಯ್ ಚಂದ್, ಜೈನ್ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ.ರಾಜ್ ಸಿಂಗ್, ಕ್ಯಾಪ್ ಜಿಮಿನಿ ಹಿರಿಯ ನಿರ್ದೇಶಕರಾದ ಮೈಕ್ ಮುರಳಿ, ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವಿಭಾಗದ ಮುಖ್ಯಸ್ಥರಾದ ಡಾ ಅರ್. ಸುಚಿತ್ರ, ರಾಪರ್ ಚಂದನ್ ಶೆಟ್ಟಿ ರವರು ಉದ್ಘಾಟಿಸಿದರು. ಈ ವೇಳೆ 15 ಅತ್ಯಂತ ಪ್ರಭಾವಶಾಲಿ ಶಿಕ್ಷಣ ತಜ್ಞರು, ಸಿಇಓಗಳು ಸಹ ಸಂಸ್ಥಾಪಕರು ಮತ್ತು ಸೆಲೆಬ್ರಿಟಿಗಳು ತಮ್ಮ ಜ್ಞಾನ ಮತ್ತು ಅನುಭವಗಳನ್ನು ಈ ಸಮಾವೇಶದಲ್ಲಿ ಹಂಚಿಕೊಂಡರು. ಈ ವೇಳೆ ಜೈನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚನ್ನರಾಜ್ ರಾಯ್ ಚಂದ್ ರವರು ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಕೌಶಲ್ಯಗಳನ್ನು ಹೆಚ್ಚಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ನಂತರ ಮೈಕ್ ಮುರಳಿ ರವರು ಮಾತನಾಡಿ ಈ ಸಮಾವೇಶದಲ್ಲಿ ನಾನು ಭಾಗವಹಿಸಿರುವುದು ನಿಜಕ್ಕೂ ಸಂತೋಷವಾಗಿದೆ ಏಕೆಂದರೆ ಇದು ಬರೀ ಸಮಾವೇಶವಲ್ಲ ಒಳ್ಳೆಯ ಅನುಭವ ನೀಡುವ ವೇದಿಕೆಯಾಗಿದ್ದು ವಿದ್ಯಾರ್ಥಿಗಳೊಂದಿಗೆ ನಾನು ಕೂಡ ಹೊಸ ವಿಷಯಗಳನ್ನು ಕಲಿಯುವ ಸಂದರ್ಭ ದೊರೆತಿದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ಕಿಚ್ಚನ್ನು ಹೊರಹೊಂಬುವ ಒಂದು ಒಳ್ಳೆಯ ಕಾರ್ಯಕ್ರಮವನ್ನು ಜೈನ್ ವಿಶ್ವವಿದ್ಯಾಲಯ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಬಳಿಕ ಡಾ ಅರ್. ಸುಚಿತ್ರ ರವರು ಮಾತನಾಡಿ ಈ ಸಮಾವೇಶದ ಮೂಲ ಉದ್ದೇಶವೇನೆಂದರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಈ ವೇದಿಕೆ ಮುಖೇನ ತಮ್ಮ ಸಾಧನೆಯ ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳುವುದರಿಂದ  ವಿದ್ಯಾರ್ಥಿಗಳು ತಮ್ಮ ಜೀವವನ್ನು ರೂಪಿಸಿಕೊಳ್ಳಲು ನೆರವಾಗಲಿದೆ ಎಂದರು.

City Today News – 9341997936

ಸಮುದಾಯಗಳನ್ನು ಉಳಿಸಿ ಸಮಾಜದ ಮುಖ್ಯವಾಹಿನಿಗೆ ತಂದು ಸಮಾಜಿಕ ನ್ಯಾಯ ಏನಾದರೂ ದೊರೆಯಬೇಕೆಂದರೆ ಕನಿಷ್ಠ 2% ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ – ವಿ. ಸಣ್ಣ ಅಜ್ಜಯ್ಯ

ವಿ. ಸಣ್ಣ ಅಜ್ಜಯ್ಯ
ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ ಅಲೇಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷರು

ನ್ಯಾಯಮೂರ್ತಿ ಶ್ರೀಯುತ. ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸಿನಂತೆ ಎಸ್.ಸಿ. ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವಂತೆ ದಶಕಗಳ ಕಾಲ ನಡೆಸಿದ ಹೋರಾಟಕ್ಕೆ ಹಿಂದಿನ ಯಾವುದೇ ಸರ್ಕಾರಗಳು ತೆಗೆದುಕೊಳ್ಳದ ಐತಿಹಾಸಿಕ ನಿರ್ಧಾರವನ್ನು ನಿನ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಮೊದಲನೆಯದಾಗಿ ನನ್ನ ವೈಯಕ್ತಿಕವಾಗಿ ಹಾಗೂ ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ. ಅಲೆಮಾರಿ ಬುಟಕಟ್ಟು ಮಹಾಸಭಾದ ವತಿಯಿಂದ ಮಾನ್ಯ ಮುಖ್ಯ ಮಂತ್ರಿಯವರಿಗೆ ಅಭಿನಂದನೆಗಳನನು ಸಲ್ಲಿಸುತ್ತೇನೆ.

ಆದರೆ ಇದುವರೆಗೂ ಸಮಾಜದ ಮುಖ್ಯ ವಾಹಿನಿಯಿಂದ ವಂಚಿತವಾಗಿ ಗುಡಿಸಲು, ಗುಡಾರಗಳಲ್ಲಿ ವಾಸಿಸುತ್ತಾ ಧಾರ್ಮಿಕ ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿರುವ ಇದುವರೆಗೂ ಶಾಲೆಯ ಮುಖವನ್ನೇ ನೋಡದ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹೀಗೆ ಯಾವುದೇ ದಾಖಲೆಗಳಿಲ್ಲದೆ, ವಿಳಾಸವಿಲ್ಲದೆ, ಶಿಕ್ಷಣವಿಲ್ಲದೆ ಊರಿಂದ ಊರಿಗೆ ಅಲೆಯುವ ಅಲೆಮಾರಿ ಮತ್ತಿತರ ಸಮುದಾಯಗಳೆಂದು 4ನೇ ವರ್ಗದಲ್ಲಿ ಗುರುತಿಸಿ ಕೇವಲ 1% ಮೀಸಲಾತಿ ನೀಡಿರುವುದು ಅತ್ಯಂತ ಅವೈಜ್ಞಾನಿಕ ನಿರ್ಧಾರವಾಗಿದೆ.

ಕಾರಣ ಪ.ಜಾತಿಗೆ ಇದ್ದ 15% ಮೀಸಲಾತಿಯನ್ನು ಇದುವರೆಗೂ ಯಾವ ಸಮುದಾಯಗಳು ಹೆಚ್ಚಿನ ಮಟ್ಟದಲ್ಲಿ ಮೀಸಲಾತಿಯನ್ನು ಅನುಭವಿಸಿದ್ದವೋ ಅದೇ ಸಮುದಾಯಗಳಿಗೆ ಈ ಸದಾಶಿವ ಆಯೋಗದ ವರದಿಯಲ್ಲಿಯೂ ಸಹ ಅವರಿಗೇನೆ ಪ್ರಧಾನ ಆದ್ಯತೆ ನೀಡಿ ಹಂಚಿಕೆ ಮಾಡಿದೆ.

ಹಾಗೂ ಇತ್ತೀಚಿನ ದಿನಗಳಲ್ಲಿ ಶೇಕಡ 15% ಇದ್ದ ಮೀಸಲಾತಿಯನ್ನು 17% ಗೆ ಹೆಚ್ಚಿಸಿದ್ದು, ಈ ಹೆಚ್ಚಳದ ಮೀಸಅನಲ್ಲಿ ಸ್ಯುಷ್ಯ ಸಮುದಾಯಗಳಿಗೆ 1 1/2% ಹೊಲಯ ಮತ್ತು ಹೊಲಯ ಸಂಬಂಧಿತ ಜಾತಿಗೆ 1/2 ಹೆಚ್ಚಿಸಿ 2% ಮೀಸಲನ್ನು ಈ ಎರಡು ವರ್ಗಕ್ಕೆ ಹಂಚಿಕೆ ಮಾಡಿದ್ದಾರೆ. ಅಲೆಮಾರಿ ಮತ್ತಿತರ ಸಮುದಾಯಗಳನ್ನು ಮರೆತಿದ್ದಾರೆ.

ದಿನಾಂಕ 10/1/2023ರಂದು ಎಲ್ಲಾ ಜಿಲ್ಲಾ ಅಧಿಕಾರಿಗಳ ದ್ವಾರ ಮಾನ್ಯ ಸರ್ಕಾರಕ್ಕೆ ನಮ್ಮ ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ ಅಲೇಮಾರಿ ಬುಡಕಟ್ಟು ಮಹಾಸಭಾ, ಬೆಂಗಳೂರು (ರಿ) ವತಿಯಿಂದ ಪತ್ರ ಚಳುವಳಿ ಮಾಡಿದ್ದರೂ ಕೂಡ ಸರ್ಕಾರಕ್ಕೆ ನಮ್ಮ ಅಲೆಮಾರಿ ದ್ವನಿ ಕೇಳಿಲ್ಲಾ.

ಕೇವಲ ಜನ ಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ವರ್ಗೀಕರಣ ಮಾಡದೆ. ಇದುವರೆಗೂ ಯಾವ-ಯಾವ ವರ್ಗಗಳು ಈ 15% ಮೀಸಲಾತಿಯನ್ನು ಬಳಸಿಕೊಂಡು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಮಾಜಿಕವಾಗಿ ಅಭಿವೃದ್ಧಿ ಹೊಂದಿವೆಯೋ ಅಂತಹ ಜಾತಿಗಳಿಗೆ ಸ್ವಲ್ಪ ಕಡಿಮೆ ಮೀಡಲು ನೀಡಿ, ಇದುವರೆಗೂ ಶಾಲೆಯ ಮುಖವನ್ನೇ ನೋಡದ ಸಮಾಜದಲ್ಲಿ ಕಡೆಗಣನೆಗೆ ಒಳಗಾಗಿರುವ ಮೀಸಲನ ವಾಸನೆಯನ್ನು ತಿಳಿದಿರದ ಯಾವುದೇ ಸರ್ಕಾರಿ ನೌಕರಿ, ರಾಜಕೀಯ ಸ್ಥಾನ-ಮಾನ ಪಡೆಯದೇ ಎಲ್ಲಾ ರಂಗಗಳಲ್ಲೂ ಹಿಂದುಳಿದಿರುವ ಅಲೆಮಾರಿ ಮತ್ತಿತರ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳೆಂದು ಗುರುತಿಸಿರುವ 4 ವರ್ಗದ ಸಮುದಾಯಗಳಿಗೆ ಈ ಒಳ ಮೀಸಲು ನೀಡಿರುವ 1% ಮೀಸಲು ಮೂಗಿಗೆ ತುಪ್ಪ ಸವರಿದಂತಿದೆ ಹಾಗೂ ಈ ಸಮುದಾಯಗಳನ್ನು ಮತ್ತೊಮ್ಮೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ.

ಈ ಸಮುದಾಯಗಳನ್ನು ಉಳಿಸಿ ಸಮಾಜದ ಮುಖ್ಯವಾಹಿನಿಗೆ ತಂದು ಸಮಾಜಿಕ ನ್ಯಾಯ ಏನಾದರೂ ದೊರೆಯಬೇಕೆಂದರೆ ಕನಿಷ್ಠ 2% ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ ಅಲೇಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷರು ವಿ. ಸಣ್ಣ ಅಜ್ಜಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

City Today News – 9341997936

PM Modi Inaugurates India’s First Totally-Free Medical College – Sri Madhusudan Sai Institute of Medical Sciences and Research in Karnataka Set-up cost of INR 400 Crores

PM Modi Inaugurates India’s First Totally-Free Medical College – Sri Madhusudan Sai
Institute of Medical Sciences and Research in Karnataka
Set-up cost of INR 400 Crores seen as a Societal Investment by Founder

Chikkaballapur, March 25: Prime Minister Shri Narendra Modi today inaugurated India’s first totally-free medical college established by humanitarian and spiritual leader Sadguru Sri Madhusudan Sai, built at a capital cost of Rs 400 crore at Muddenahalli, the birthplace of Bharath Ratna Sri M
Visvesvaraya. This unique model of medical education – giving medical education for free – will be an added impetus to the various government interventions to address the need for quality healthcare
delivery in rural India. Sri Basavaraj Bommai – CM of Karnataka and Dr K Sudhakar, Minister of Health and Medical Education – Govt. of Karnataka were also present at the event at Sathya Sai Grama, Muddenahalli. This free medical college holds great promise in transforming the landscape of medical education in the country, providing new opportunities for underprivileged students in rural areas who have long dreamt of such an opportunity.
The Sri Madhusudan Sai Institute of Medical Sciences and Research which comprises of one teaching hospital and an academic block apart from hostels, auditorium, staff residences and sports facilities
with a total area of about 3,25,000 sq.ft., is a unique and first-of-its-kind project, which will set a new standard for accessibility to quality medical education, check exclusion, for first-generation learners
and disadvantaged students from rural India. After qualifying in the NEET entrance examination, students will be embraced into the college with just one pair of clothes, and everything else will be taken care by the Prashanthi Balamandira Trust which has established this medical college. The Trust acquired the necessary land and built the infrastructure for the medical college to commence in the
academic year June 2023-24. The entire capital expenditure for the Sri Madhusudan Sai Institute of Medical Sciences and Research has been through the support of like-minded individuals from around
the world, and since there is no pressure of profiteering, it becomes a low-cost model.
Honourable Prime Minister, Sri Narendra Modi said, “ Sathya Sai Grama has given a wonderful model of service to this land of Bharath. The selfless services activities of Nutrition, Education and Healthcare that are being done from this place are truly appreciable. The inauguration of the free
medical college gives additional strength and enthusiasm to their already existing service projects. Sri Madhusudan Sai Institute of Medical Sciences and Research will produce Doctors and Allied Healthcare Providers who will submit themselves for the service of the Nation. ‘Amrut Kaal’ can be achieved only through one way – consistent efforts by each one of you, and this is what is happening
from this place.”

Sadguru Sri Madhusudan Sai said: “The dream of an ‘amrut kaal’ is finding its light of the day under the leadership of Sri Narendra Modi Ji. He is always available to support the cause of the good and the noble, and encourages good deeds where ever it happens. We are honoured to have Modi Ji
inaugurate this medical college. Seven years ago, a girl doing her Grade 12 at our educational
institutions expressed her wish to become a doctor to serve the rural people. Her father who is working as a cook did not have in his capacity to finance her medical education. We gave this girl an opportunity to pursue medical education, especially touched by her pure intention to serve the needy.
Today, she has become a Doctor and works in our institution. Thus, we decided to extend this opportunity for all children who have the aptitude but not the affordability to pursue medical
education, and especially to those who wants to study to serve others.”
Sarkar (Government), Samaj (Society), and Sansthan (Institution) – If these factors come together, then anything can be achieved. This is the right time to exert efforts to uplift India and restore its glory
back, and this is possible only under the leadership of Sri Narendra Modi Ji, and none else.”
Honourable Chief Minister of Karnataka, Sri Basavaraj Bommai said, “Sadguru Sri Madhusudan Sai’s
determination to establish an institution that will offer free medical education is commendable. I congratulate Sadguru Sri Madhusudan Sai for bringing into reality a hospital that is world-class in its service quality, and offering it all completely free of cost. This is unbelievable.
Our Honourable Prime Minister has a great vision for this country and his loving concern for the poorest of the poor is palpable. For the first time, a country with a 130 crore population has dared to
initiate a programme that ensures accessibility of healthcare for all through Ayushman Bharat. Modi
Ji is a man who dares to dream the most difficult things and achieves the most difficult things.
This event is a culmination of two great personalities – a man who has created a new healthcare model that provides access to the poorest of the poor in the country, and an institution that is giving free
medical services for the poorest of the poor. This is a day that gives a new ray of hope and confidence for all the people of this country, and this is what it is about building an Atma Nirbhar Bharat.”
The teaching hospital currently comprises 360 beds spread across two buildings. In the next phase, another hospital block with an extension of academic, and more hostel facilities will be constructed.

City Today News – 9341997936

ಯಂಗ್‌ ಸ್ಟರ್ ಎಂಪವರ್ಮೆಂಟ್ ಪಾರ್ಟಿ (ವೈಇಪಿ ಪಾರ್ಟಿ) ಯಿಂದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ

ಯಂಗ್‌ ಸ್ಟರ್ ಎಂಪವರ್ಮೆಂಟ್ ಪಾರ್ಟಿ (ವೈಇಪಿ ಪಾರ್ಟಿ) ಯಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದು, ಇಂದು 24 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸಿ.ಎಂ.ಶಹಭಾಶ್ ಖಾನ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರದ ಯಾವುದೇ ಯೋಜನೆಗಳ ಉಪಯೋಗವನ್ನು ಯಂಗ್‌ ಸ್ಟರ್ ಪಾರ್ಟಿ ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ಸೌಲಭ್ಯವನ್ನು ಪಡೆಯಬಹುದಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದಲ್ಲದೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದರ ಜೊತೆಗೆ ತಪ್ಪಿಸಬಹುದಾಗಿದೆ ಎಂದು ತಿಳಿಸಿದರು. ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಯುವ ಸರ್ಕಾರವನ್ನು ರಚಿಸುವ ಸಂಕಲ್ಪವನ್ನು ಯಂಗ್‌ ಸ್ಟರ್ ಎಂಪವರ್ಮೆಂಟ್ ಪಾರ್ಟಿ ತೊಟ್ಟಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಈ ಪಕ್ಷವನ್ನು ಬೆಂಬಲಿಸಿ ಈ ಭಾರಿ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ರಾಜ್ಯಾಧ್ಯಕ್ಷ ನರೇಶ್‌ ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸಲ್ಮಾನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಲಿಯಾಸ್ ಷರೀಫ್, ಮಾಗಡಿ ತಾಲ್ಲೂಕು ಘಟಕದ ಅಧ್ಯಕ್ಷ ರಫಿವುಲ್ಲ, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷ ಫಯಾಝ್ ಅಹಮದ್‌ ಹಾಗೂ ರಾಮನಗರ ಘಟಕದ ಅಧ್ಯಕ್ಷ ಸಯ್ಯದ್ ಹೈದರ್ ಮತ್ತಿತರರು ಹಾಜರಿದ್ದರು.

City Today News – 9341997936

ಸ್ಮಾರ್ಟ್‌ಫೋನ್ ಗೆ ಜೋತು ಬೀಳುತ್ತಿರುವ ಯುವ ಸಮುದಾಯ digital DETOX Centre

ದಿನಕ್ಕೆ ಸರಾಸರಿ 6 – 8 ಗಂಟೆಗಳ ಕಾಲ

ಸ್ಮಾರ್ಟ್‌ಫೋನ್ ಗೆ ಜೋತು ಬೀಳುತ್ತಿರುವ ಯುವ ಸಮುದಾಯ

ದೇಶದ ಮೊದಲ ಗ್ರಾಮೀಣ ಭಾಗದಲ್ಲಿ ಡಿಜಿಟಲ್‌ ವ್ಯಸನ ವರ್ಜನ ಕೇಂದ್ರ

digital DETOX Centre

ಒತ್ತಡ ಕಡಿಮೆ ಮಾಡಲು ಡಿಜಿಟಲ್ ತಂತ್ರಜ್ಞಾನ – ಸಾಧನಗಳಿಂದ ಯುವಕರನ್ನು ದೂರವಿಡಲು ಡಿಜಿಟಲ್ ವ್ಯಸನ ವಿಮುಕ್ತಿ (ಡಿಟಾಕ್ಸ್) ಕೇಂದ್ರ ಯುವಕರು ದಿನಕ್ಕೆ ಸರಾಸರಿ 6 – 8 ಗಂಟೆಗಳಷ್ಟು ಅವಧಿಯನ್ನು ಸ್ಮಾರ್ಟ್ ಫೋನ್ ಗಳ ವ್ಯರ್ಥ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದ ಯುವಕರಿಂದ ಮತ್ತು ವೃದ್ಧರವರೆಗೆ ಹಲವಾರು ಮಂದಿ ನಿದ್ರಾ ಹೀನತೆಯ ಸಮಸ್ಯೆಯನ್ನು ಎದುರಿಸಲಾರಂಭಿಸಿದ್ದಾರೆ. ಸ್ಮಾರ್ಟ್‌ ಫೋನ್ ಗಳನ್ನು ಬಳಸುವ ವ್ಯಸನ ತಮ್ಮ ವಿದ್ರಾ, ಚಕ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿಯದ ಅವರು ಈ ನಿದ್ರೆಯ ಕೊರತೆ ಸಮಸ್ಯೆಯೊಂದಿಗೆ ವೈದ್ಯರನ್ನು ಕಾಣುತ್ತಿದ್ದಾರೆ. ನಿರಂತರ ತಲೆನೋವು ಮತ್ತು ಆಯಾಸ ಯುವಜನರಲ್ಲಿ ಈಗ ಸರ್ವೇ ಸಾಮಾನ್ಯವಾಗುತ್ತಿದೆ ಎಂದು ಖ್ಯಾತ ವೈದ್ಯರಾದ ಎಂದು ಮಾನಸ ಆಸ್ಪತ್ರೆಯ ಡಾ|| ಹೆಚ್‌.ಎಸ್. ಶಶಿಧರ್ ಕುಮಾರ್ ಗೌರಿಬಿದನೂರು ಹೇಳಿದ್ದಾರೆ.

ಡಾ|| ಕೆ.ಎಸ್. ರತ್ನ, ಪ್ರಕಾರ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿ ಪ್ರತಿದಿನ ಸರಾಸರಿ 6 ರಿಂದ 8 ಗಂಟೆಗಳ ಕಾಲ ಸ್ಮಾರ್ಟ್‌ಫೋನ್ ಗಳನ್ನು ಯಾವುದಾದರೂ ರೂಪದಲ್ಲಿ ಬಳಸುತ್ತಿದ್ದಾರೆ. ಇದು ವೈರಲ್ / ಅಶ್ಲೀಲ – ಬೆತ್ತಲೆ ವೀಡಿಯೊಗಳನ್ನು ವೀಕ್ಷಿಸುವುದು, ಡೇಟಿಂಗ್ ಅಪ್ಲಿಕೇಷನ್ ಗಳನ್ನು ಬ್ರೌಸ್ ಮಾಡುವುದು, ಸಂಗೀತ ಕೇಳುವುದು, ಸಂದೇಶ ಕಳುಹಿಸುವುದು, ಚಾಟ್ ಮಾಡುವುದು ಮತ್ತು ಮೇಲ್ ಪರಿಶೀಲಿಸುವುದು, ಆನ್‌ಲೈನ್ ಆಟ ಆಡುವುದು ಹೀಗೆ ನಾನಾ ಚಟುವಟಿಕೆಗಳನ್ನು ಒಳಗೊಂಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರಿನಲ್ಲಿ ಭಾರತದ ಪ್ರಪ್ರಥಮ ಡಿಜಿಟಲ್ ಡಿಟಾಕ್ಸ್ ಕೇಂದ್ರವನ್ನು ಮಾನಸ ಆಸ್ಪತ್ರೆಯಲ್ಲಿ ಪ್ರಾರಂಭಿಸಿದ್ದಾರೆ. ಡಾ|| ಸುಮಂತ್, ವೈಜೆ ಪ್ರಕಾರ ಈ ನಿದ್ರಾಹೀನ ವ್ಯಕ್ತಿಗಳಿಗೆ, ಸಮಸ್ಯೆಯಿಂದ ಹೊರ ಬಂದು ಹೆಚ್ಚು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಲು ಸಹಾಯ ಮಾಡಲು ನಿರ್ಧರಿಸಿದ್ದಾರೆ. “ಪ್ರತಿದಿನ, ನಾನು ಹಲವಾರು ಯುವಕರು ನಿದ್ರೆಯ ಮಾದರಿಯಲ್ಲಿ ಅಡಚಣೆ, ತಲೆನೋವು, ಕಣ್ಣಿನ ಸಮಸ್ಯೆ ಇತ್ಯಾದಿ ಸಮಸ್ಯೆಗಳೊಂದಿಗೆ ನಮ್ಮ ಬಳಿಗೆ

ಚಿಕಿತ್ಸೆಗೆ ಆಗಮಿಸುತ್ತಾರೆ. ಇದಕ್ಕೆಲ್ಲ ಒಂದೇ ಕಾರಣವೆಂದರೆ ಯಾವುದೇ ಬೆಳಕು ಇಲ್ಲದ ಕೋಣೆಯಲ್ಲಿ ರಾತ್ರಿಯಲ್ಲಿ ಸ್ಮಾರ್ಟ್‌ಫೋನ್ ಗಳ ನಿರಂತರ ಬಳಕೆ’ ಎಂದು ಅವರು ಕಂಡುಕೊಂಡಿದ್ದಾರೆ.

ಸ್ಮಾರ್ಟ್‌ ಫೋನ್ ಗಳಲ್ಲಿ ನಿರಂತರವಾಗಿ ಲಭ್ಯವಿರುವ ವಿವಿಧ ವಿಷಯಗಳೊಂದಿಗೆ ಅದನ್ನು ಅತಿಯಾಗಿ ವೀಕ್ಷಿಸುವುದರಿಂದ ಆರೋಗ್ಯ ಸಮಸ್ಯೆಗಳು ಸಾಕಷ್ಟು ಸಾಮಾನ್ಯವಾಗುತ್ತಿದೆ. ಈ ಹಿನ್ನಲೆಯಲ್ಲಿ ಯುವಕರು ಮತ್ತು ಇತರರನ್ನು ಈ ಡಿಜಿಟಲ್ ವ್ಯಸನದಿಂದ ದೂರ ಮಾಡಲು ಡಾ|| ಶಶಿಧರ್ ಕುಮಾರ್ ಗೌರಿಬಿದನೂರಿನಲ್ಲಿ ಡಿಜಿಟಲ್ ಡಿಟಾಕ್ಸ್ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಡಿಜಿಟಲ್‌ ಸಾಧನಗಳಿಗೆ ಅಂಟಿಕೊಂಡಿರುವ ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ಸ್ಮಾರ್ಟ್‌ಫೋನ್ ಗಳು, ಟಿವಿ ಮಾಧ್ಯಮ, ಇಂಟರ್ನೆಟ್, ಡಿಜಿಟಲ್ ಗೇಮ್ಸ್ ಮತ್ತು ಜೂಜು ಹಾಗೂ ಸಾಮಾಜಿಕ ಮಾಧ್ಯಮಗಳಿಂದ ದೂರ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಗೌರಿಬಿದನೂರಿನಲ್ಲಿರುವ ಈ ಕೇಂದ್ರದಲ್ಲಿ ಡಿಜಿಟಲ್ ದಾಸರಾಗಿರುವವರಿಗೆ ಆರೋಗ್ಯಕರ ಜೀವನಶೈಲಿ ಹಾಗು ಡಿಜಿಟಲ್ ತಂತ್ರಜ್ಞಾನಗಳ ಬಳಕೆಯ ಕುರಿತು ಸಲಹೆ ನೀಡಲಾಗುತ್ತದೆ. ಈ ಕೇಂದ್ರವು ಇಂತಹ ವ್ಯಕ್ತಿಗಳಿಗೆ ಮುಖಾಮುಖಿ ಸಂವಹನದ ಪ್ರಾಮುಖ್ಯತೆಯನ್ನು ತಿಳಿಯಪಡಿಸಿ, ಅವರನ್ನು ಸ್ಮಾರ್ಟ್‌ ಫೋನ್, ಲ್ಯಾಪ್‌ಟಾಪ್, ಇತ್ಯಾದಿಗಳಿಂದ ವಿರಾಮ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ, ತಂತ್ರಜ್ಞಾನದ ವ್ಯಸನವು ವ್ಯಕ್ತಿಗಳಲ್ಲಿ ಹೆಚ್ಚು ಒತ್ತಡವನ್ನು ಉಂಟುಮಾಡುತ್ತದ ಮತ್ತು ಈ ವ್ಯಸನಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆಗಿನ ಸಂಶೋಧನೆಯನ್ನು ಉಲ್ಲೇಖಿಸುವ ಡಾ|| ಶಶಿಧರ್, ಡಿಜಿಟಲ್ ವ್ಯಸನ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಫ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

– MANASA HOSPITAL B.H ROAD, Gauribidanur-561208, Chikkaballapur Dist., Mob: 9945619067

City Today News – 9341997936

ದಲಿತ ರೈತರ ಹೋರಾಟ

ಪ್ರಪಂಚದಲ್ಲೇ ಅತ್ತಿವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಸಿಲಿಕಾನ್ ಮತ್ತು ಐ.ಟಿ ಬಿಟಿ ಸಿಟಿಯಾಗಿದೆ. ಜೊತೆಗೆ ಭೂಮಿಯ ಬೆಲೆಯು ಸಹ ಚಿನ್ನದ ಬೆಲೆಗಿಂತ ಅಧಿಕವಾಗಿದೆ ಹಾಗೆಯೇ ಬಡವರನ್ನು ಯಾಮಾರಿಸಿ ಭೂಮಿಯನ್ನು ಕಬಳಿಸುವವರ ಸಂಖ್ಯೆಯು ಹೇರಳವಾಗಿದೆ. ಇಂತಹ ಪರಿಸ್ಥಿಯಲ್ಲಿ ದಲಿತ ರೈತರು ಬೆಂಗಳೂರು ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾಡುಗೋಡಿ ಪ್ಲಾಂಟೇಶನ್ ಗ್ರಾಮದಲ್ಲಿ ಕಳೆದ 74 ವರ್ಷಗಳ ಹಿಂದೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಜೀತಪದ್ಧತಿಯಲ್ಲಿದ್ದ ದಲಿತ ಕುಟುಂಬಗಳನ್ನು ಸರ್ಕಾರವೇ ಗುರುತಿಸಿ ಪ್ರತಿ ಕುಟುಂಬಕ್ಕೆ ತಲಾ 5 ಎಕರೆ ಕೃಷಿ ಭೂಮಿ ಮತ್ತು 40X50) ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಿರುತ್ತಾರೆ. ಜೊತೆಗೆ ದಲಿತ ರೈತರ ಹೆಸರಿಗೆ ಕಂದಾಯ ಇಲಾಖೆಯಿಂದ ಪಹಣಿ ನೀಡಿ ಭೂಮಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಕಂದಾಯವನ್ನು ಸಹ ವಸೂಲಿ ಮಾಡಿರುತ್ತಾರೆ.

ತದನಂತರ 1981-82 ರಲ್ಲಿ ಸದರಿ ರೈತರ ಬಳಿಯಿದ್ದ ಸ್ವಲ್ಪ ಪ್ರಮಾಣದ (385 ಎಕರೆ) ಭೂಮಿಯನ್ನು ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿಯಿಂದ ತಲ್ಲಾ ಎಕರೆ ಭೂಮಿಗೆ 30,000/- ರೂಗಳಂತೆ ದಲಿತ ರೈತರಿಗೆ ಪರಿಹಾರವನ್ನು ನೀಡಿ ಭೂಮಿಯನ್ನು ತೆಗೆದುಕೊಂಡಿರುತ್ತಾರೆ. ಸದರಿ ಭೂಮಿಯಲ್ಲಿ ಭಾರತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗು ಖಾಸಗಿ ಕೈಗಾರಿಕೆಗಳು ಕಾರ್ಯಾರಂಭ ಮಾಡುತ್ತದೆ.

385 ಎಕರೆ ಹೊರತುಪಡಿಸಿ ಉಳಿದಿರು ಸುಮಾರು 150 ಎಕರೆ ಭೂಮಿಯಲ್ಲಿ ದಲಿತ ರೈತರು ಇಂದಿಗೂ ವ್ಯವಸಾಯದ ಕುರಿ, ಮೇಕೆ ಹಾಗು ದನಗಳ ಸಾಕಾಣಿಕೆಯಿಂದ ಹಾಲಿನ ವ್ಯಾಪಾರದೊಂದಿಗೆ ಜೀವನ ನಡೆಸುತ್ತಿದ್ದಾರೆ. ಈ ನಡುವೆ ಬೃಹತ್ ಬೆಂಗಳೂರು: ಮೇಟೋ ನಿಗಮದವರು ಸುಮಾರು 49 ಎಕರೆ ಭೂಮಿಯನ್ನು ಸ್ವಾಧಿನಪಡಿಕೊಳ್ಳುವ ಸಂದರ್ಭದಲ್ಲಿ ಭೂಮಿ ಕಳೆದುಕೊಳ್ಳುವ ದಲಿತ ರೈತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಎರಡು ವರ್ಷಗಳು ಕಳೆದರು. ಭೂಮಿ ಕಳೆದುಕೊಂಡ ರೈತರಿಗೆ ಒಂದು ಬಿಡಿಗಾಸಿನ ಪರಿಹಾರವು ದೊರೆತಿಲ್ಲ. ಇದರಿಂದಾಗಿ 24 ದಲಿತ ಕುಟುಂಬಗಳು ಕೃಷಿ ಮಾಡುತ್ತಿದ್ದ ಭೂಮಿಯನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.

ಇನ್ನೂಳಿದ ಕೃಷಿ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ಸರ್ಕಾರದ ಕೆಲವು ಸಂಸ್ಥೆಗಳ ಹೆಸರಿನಲ್ಲಿ ಸ್ವಾಧಿನಪಡಿಸಿಕೊಂಡು ತದನಂತರ ಖಾಸಗೀಯವರಿಗೆ ಮಾರಾಟ ಮಾಡುವ ಉನ್ನಾರ ನಡೆಯುತ್ತಿದೆ. ಇಂತಹ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಗ್ರಾಮದ ದಲಿತ ರೈತರು ಹೋರಾಟ ಸಮಿತಿಗಳನ್ನು ರಚಿಸಿಕೊಂಡು ಹಲವು ವರ್ಷಗಳಿಂದ ನ್ಯಾಯಾಕ್ಕಾಗಿ ಹೋರಾಟಗಳನ್ನು ಮಾಡುತ್ತಿದೆ. ಈ ರೀತಿಯಲ್ಲಿ ಹೋರಾಟಗಳನ್ನು ಮಾಡುವ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿಯವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ತಮ್ಮ ಭೂಮಿ ಮತ್ತು ನಿವೇಶನಗಳಿಗೆ ಹಕ್ಕುಪತ್ರ ವಿತರಣೆ ಮಾಡಿಸುವುದಾಗಿ ಹಲವು ಭಾರಿ ಭರವಸೆಗಳನ್ನು ನೀಡಿರುತ್ತಾರೆ.

ಇದೀಗ ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 5 ವರ್ಷಗಳು ಕಳೆದರು ಮಾನ್ಯ ಶಾಸಕರು ನಮ್ಮ ದಲಿತ ರೈತರ ಸಮಸ್ಯೆಗಳನ್ನು ಪರಿಹಾರಿಸಲು ಯಾವುದೇ ಕ್ರಮವಹಿಸದಿರುವುದು ದಲಿತ ವಿರೋಧಿ ನೀತಿಯಾಗಿದೆ. ದಲಿತ ರೈತರ ಸ್ವಾಧಿನಾನುಭವದಲ್ಲಿರುವ ಭೂಮಿಗಳನ್ನು ಯಾವುದೇ ಪರಿಹಾರವಿಲ್ಲದೆ ಕಬಳಿಸುವ ಜೊತೆಗೆ ದಲಿತರನ್ನು ಮತ್ತಷ್ಟು ಶೋಷಣೆ ಮಾಡುವ ಸರ್ಕಾರದ ಹಾಗು ಶಾಸಕರ ನಡೆಯನ್ನು ಖಂಡಿಸಿ ಕಾಡುಗೋಡಿ ಪ್ಲಾಂಟೇಶನ್ ಗ್ರಾಮದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಕಳೆದ 365 ದಿನಗಳಿಂದ ನಿರಂತರ ಧರಣಿ ಸತ್ಯಗ್ರಹ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಧರಣಿ ನಿರತ ಸ್ಥಳಕ್ಕೆ ಮಾನ್ಯ ಶಾಸಕರು ಆಗಮಿಸಿ ಮನವಿಯನ್ನು ಸ್ವೀಕರಿಸಬೇಕೆಂದು ಕೋರಿ ಪತ್ರದ ಮೂಲಕ ಮನವಿ ಸಲ್ಲಿಸಿದರು ಸಹ ಮಾನ್ಯ ಶಾಸಕರು ದಲಿತ ರೈತರ ಕಡೆ ಮುಖ ಮಾಡಲಿಲ್ಲ. ಇಂತಹ ನಡವಳಿಕೆಯನ್ನು ಖಂಡಿಸಿ ಮುಂದಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿರುವ ದಲಿತ, ರೈತ, ಪ್ರಗತಿಪರ ಸಂಘಟನೆಗಳೊಂದಿಗೆ ಚರ್ಚಿಸಿ ಮತ್ತಷ್ಟು ಹೋರಾಟಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಇತರೆ ಪ್ರದೇಶಗಳ ಜನಸಮಾನ್ಯರಿಗೆ ವಿಚಾರವನ್ನು ಸಲುವಾಗಿ ಬೆಂಗಳೂರಿನ ಪ್ರಸ್‌ಕ್ಲಬ್ ನಲ್ಲಿ ಪತ್ರಿಕ ಗೋಷ್ಟಿಯನ್ನು ಕರೆಯಲಾಗಿ ಮುನೇಂದ್ರ .ಪಿ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

60 ಲಕ್ಷ ಜನಸಂಖ್ಯೆ ಹೊಂದಿರುವ ವಾಲ್ಮೀಕಿ ನಾಯಕ ಜನಾಂಗಕ್ಕೆ ಸಾಮಾನ್ಯ ಕ್ಷೇತ್ರಗಳಲ್ಲಿ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಕುರಿತು.

ಈ ಮೂಲಕ ತಮ್ಮಲ್ಲಿ ವಿನಂತಿ ಮಾಡುವುದೇನೆಂದರೆ, ವಾಲ್ಮೀಕಿ ನಾಯಕ ಜನಾಂಗವು ಕರ್ನಾಟಕದಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವುದು ತಮಗೆಲ್ಲರಿಗೂ ತಿಳಿದಿರುವುದು ಸರಿಯಷ್ಟೇ. ಆದರೆ ಎಸ್.ಟಿ. ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಸಾಮಾನ್ಯ ಕ್ಷೇತ್ರಗಳಲ್ಲಿಯೂ ಸಹ ನಿರ್ಣಾಯಕ ಮತದಾರರ ಸಂಖ್ಯೆ ಹೊಂದಿರುತ್ತೇವೆ. ಆದ್ದರಿಂದ ತಾವುಗಳು ಮುಂಬರುವ ವಿಧಾನಸಭಾ ಚುನಾವಣೆಗೆ ನಮ್ಮ ಜನಾಂಗದ ಅಭ್ಯರ್ಥಿಗಳಿಗೆ ಪ್ರಾಶಸ್ತ್ರ ಕೊಟ್ಟು ತಮ್ಮ ಪಕ್ಷದ ವತಿಯಿಂದ ಸಾಮಾನ್ಯ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇವೆ. ರಾಜ್ಯದಲ್ಲಿ ವಾಲ್ಮೀಕಿ ನಾಯಕ ಜನಾಂಗವು ಸುಮಾರು 80 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಅಭ್ಯರ್ಥಿಯ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲದು. ಆದ್ದರಿಂದ ಎಲ್ಲ ಪಕ್ಷಗಳಿಂದಲೂ ತಾವುಗಳು ನಮ್ಮ ಜನಾಂಗರ ಅಭಿವೃದ್ಧಿಗಾಗಿ ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ತಮ್ಮ ತಮ್ಮ ಪಕ್ಷದಿಂದ ಅವಕಾಶ ಮಾಡಿಕೊಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.

ತಾವುಗಳು ನಮ್ಮ ಜನಾಂಗದ ಅಭ್ಯರ್ಥಿಗಳಿಗೆ ಸಾಮಾನ್ಯ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಿದಲ್ಲಿ ನಾವುಗಳು ರಾಜ್ಯಾದ್ಯಂತ ತಮ್ಮ ಪಕ್ಷಕ್ಕೆ ಬೆಂಬಲ ಸಿಗಲಿದೆ. ಆದ್ದರಿಂದ ನಮ್ಮ ಈ ಮನವಿಯನ್ನು ಪರಿಗಣಿಸಿ ನಮ್ಮ ಸಮಾಜದ ಅಭಿವೃದ್ಧಿಗೆ ಇದೊಂದು ಸುವರ್ಣಾವಕಾಶ ಎಂದು ಭಾವಿಸಿ ಸಾಮಾನ್ಯ ಕ್ಷೇತ್ರಕ್ಕೆ ನಮ್ಮ ಜನಾಂಗದ ಆಕಾಂಕ್ಷಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕಾಗಿ ಕೋರಲಾಗಿದೆ.

– ಜಿ.ಟಿ. ಚಂದ್ರಶೇಖರಪ್ಪ ರಾಜ್ಯಾಧ್ಯಕ್ಷರು

– ಕೆಂಪರಾಮಯ್ಯ ಪ್ರಧಾನ ಕಾರ್ಯದರ್ಶಿಗಳು

City Today News – 9341997936