ವಾಲ್ಮೀಕಿ ಸಮುದಾಯಕ್ಕೆ ಸೇರಿದ ಬುಡಕಟ್ಟು ಮಹಿಳೆ ಶಾಂತರವರಿಗೆ ಹಿಂದಿ,ಇಂಗ್ಲಿಷ ಗೊತ್ತಿಲ್ಲ ಅಂತಾ ಹೀಯಾಳಿಸುವುದು ಮಹಿಳೆಯರು ಮತ್ತು ಬುಡಕಟ್ಟು ಸಮುದಾಯವನ್ನೆ ಹೀಗಳೆದಂತೆ

ಬಿಜೆಪಿ ಅಭ್ಯರ್ಥಿ ಶ್ರೀಮತಿ ಶಾಂತರವರಿಗೆ ಹಿಂದಿ,ಇಂಗ್ಲಿಷ್ ಬರಲ್ಲ. ಓಕೇ.
ಮಾನ್ಯ ದೇವೆಗೌಡ್ರು ಪ್ರಧಾನಮಂತ್ರಿ ಆದಾಗ ಹಿಂದಿ ಕಲಿಸಲು ಪಂಡಿತರನ್ನು ಅವರು ನೇಮಿಸಿಕೊಂಡಿದ್ರು ಎನ್ನುವುದನ್ನು ಗಮನಿಸಿದ್ರೆ ಅವರು ಕೂಡ ಹಿಂದಿಯಲ್ಲಿ ಬಿಗ್ ಜೀರೋ.
ಹಿಂದಿ ಬರಲ್ಲಂತಾ ಗೌಡ್ರರನ್ನ ಪ್ರಧಾನಮಂತ್ರಿ ಹುದ್ದೆಗೆ ಆನರ್ಹಗೊಳಿಸಲಿಲ್ಲ.
ಹಿಂದಿ,ಇಂಗ್ಲಿಷ್ ಗೊತ್ತಿಲ್ಲದ ಕಾಮರಾಜ ನಾಡಾರ್ ಎಐಸಿಸಿ ವರಿಷ್ಠರಾಗಿದ್ರು. ತಮಿಳುನಾಡು ಸಿಎಂ ಆಗಿದ್ರು.
ಇಂತಹ ಸಾಕಷ್ಟು ಉದಾಹರಣೆಗಳಿವೆ.
ವಾಲ್ಮೀಕಿ ಸಮುದಾಯಕ್ಕೆ ಸೇರಿದ ಬುಡಕಟ್ಟು ಮಹಿಳೆ ಶಾಂತರವರಿಗೆ ಹಿಂದಿ,ಇಂಗ್ಲಿಷ ಗೊತ್ತಿಲ್ಲ ಅಂತಾ ಹೀಯಾಳಿಸುವುದು ಮಹಿಳೆಯರು ಮತ್ತು ಬುಡಕಟ್ಟು ಸಮುದಾಯವನ್ನೆ ಹೀಗಳೆದಂತೆ.
ಹಿಂದಿ ಮತ್ತು ಇಂಗ್ಲಿಷ್ ಚೆನ್ನಾಗಿ ಗೋತ್ತಿರುವ ಮಾನ್ಯ ಉಗ್ರಪ್ಪರನ್ನು ಇಷ್ಟು ದಿನಗಳ ಕಾಲ ಯಾಕೇ ಮರೆತಿದ್ರು.
ರಾಜ್ಯಸಭೆಗೋ ಇಲ್ಲ ಎಸ್ಟಿಗಿಂತಲೂ ಸಾಮಾನ್ಯ ವರ್ಗಕ್ಕೆ ಮೀಸಲಿರುವ ಎಂಪಿ ಕ್ಷೇತ್ರ ಗಳಿಂದ ಗೆಲ್ಲಿಸಬಹುದಿತ್ತಲ್ಲ.
ನಮ್ಮ ಸಂವಿಧಾನ ರಚನಾಕಾರರೇ ಜನಪ್ರತಿನಿಧಿಗಳಾಗಲು ಭಾಷೆ ಮತ್ತು ವಿದ್ಯಾಹರ್ತೆಯನ್ನು ಒಂದು ಆರ್ಹತೆಯನ್ನಾಗಿಸಿಲ್ಲ.
ಇಂತಹದ್ರರಲ್ಲಿ ಈಗ ಹಿಂದಿ ಗಿಂದಿ ಅನ್ನುವುದು ಸೇಮ್ ಲೇಸ್.
ನಿಮಗೆ ಗೊತ್ತಿರಲಿ ಪ್ರಖಾಂಡ ಬುದ್ದಿವಂತರಲ್ಲಿ ಬಹುತೇಕರು ಇಂದಿರಾಗಾಂಧಿಯವರಿಗೆ ಎದುರಾಗಿ ನಿಂತು ಪಕ್ಷ ಕಟ್ಟಿದಾಗ ಈ ದೇಶದಲ್ಲಿ ಕಾಂಗ್ರೆಸ್ ಗೆ ಭದ್ರ ತಳಪಾಯವಾಗಿ ನಿಂತಿದ್ದು ಬಹುತೇಕ ಅನಕ್ಷರಸ್ಥರು ಅದರಲ್ಲಿ ಮಹಿಳೆಯರು ಹೆಚ್ಚು.
ಇಂದಿರಾಗಾಳಿಯಲ್ಲಿ ಹಾರಿಬಂದ ಉಪ್ಪನಾಳಗೂಳಪ್ಪ,ಡಿಕೆ.ನಾಯ್ಕರ್,ಜಾಫರ್ ಷರೀಫ್ ಹೀಗೆ ಆನೇಕರು ಹಿಂದಿ,ಇಂಗ್ಲಿಷ್ ಪಾಂಡಿತ್ಯವನ್ನೆ ಹೊದ್ದಿರಲಿಲ್ಲ.

Courtecy:

Sri.ಹುಳ್ಳಿಪ್ರಕಾಶ ಸಂಪಾದಕರು ಸುನಾಮಿ ಪತ್ರಿಕೆ.

City Today News

(Tj vision media)

9341997936

Leave a comment

This site uses Akismet to reduce spam. Learn how your comment data is processed.