
ಸಂಗೀತ ಕಲಾವಲಯದಲ್ಲಿ ‘ ಸುಗಮ ಸಂಗೀತ ‘ ಪ್ರಕಾರ ಸ್ವಯಂ ಪ್ರಕಾಶದಿಂದ ಬೆಳಗುವಷ್ಟು ಬೆಳೆದಿದೆ . ಹಲವು ಕವಿಗಳನ್ನು , ಕಲಾವಿದರನ್ನು ಬೆಳೆಸಿದೆ . ತನ್ನದೇ ಆದ ಶೋತೃ ಸಮೂಹವನ್ನು ಸಂಪಾದಿಸಿಕೊಂಡಿದೆ . 2003ರಲ್ಲಿ ಸುಗಮ ಸಂಗೀತದ ಪುರೋಭಿವೃದ್ಧಿಗೆ ಧ್ವನಿಯಾಗಿ ಮೂಡಿ ಬಂದದ್ದೇ “ ಕರ್ನಾಟಕ ಸುಗಮ ಸಂಗೀತ ಪರಿಷತ್ತು ‘ ‘ . ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಆಶ್ರಯದಲ್ಲಿ ಈಗಾಗಲೇ 15 ರಾಜ್ಯಮಟ್ಟದ ಸಮ್ಮೇಳನಗಳು , 400ಕ್ಕೂ ಹೆಚ್ಚು ತರಬೇತಿ ಶಿಬಿರಗಳು ಹಾಗೂ ಕಾವ್ಯಗಾಯನದ ಮೂಲಕ ಕನ್ನಡದ ಹೆಸರಾಂತ ಕವಿಗಳ ಕವಿತೆಗಳನ್ನು ಮನೆಮನೆಗೆ ತಲುಪಿಸುವಂತ ಮಹತ್ವದ ಕಾರ್ಯಗಳನ್ನು ಮಾಡುತ್ತ ಬಂದಿದೆ . 16ನೇ ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನ ‘ ಗೀತೋತ್ಸವ – 2019 ‘ ‘ ನ್ನು – ಚಿತ್ರದುರ್ಗದ ಶ್ರೀ ಮುರಘಾಮಠ ಆವರಣದಲ್ಲಿರುವ ಅನುಭವ ಮಂಟಪ ‘ ದಲ್ಲಿ 2019ರ ಜನವರಿ ತಿಂಗಳ ದಿನಾಂಕ 12 ಮತ್ತು 13ರಂದು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ .
City Today News
(Tj vision media)
9341997936
