
ದಿನಾಂಕ 03 / 01 / 2019 ,
ಚಿಂತಾಮಣಿ ತಾಲ್ಲೂಕು , ಚೊಕ್ಕರೆಡ್ಡಹಳ್ಳಿ ಗ್ರಾಮದ ನಿವಾಸಿಯೊಬ್ಬರು ಬಡಗವಾರಹಳ್ಳಿ , ಮರಿಮಾಕಲಹಳ್ಳಿ ಗ್ರಾಮದಲ್ಲಿರುವ ಜಮೀನುಗಳನ್ನು ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿಸಲು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಛೇರಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ. 1) ಶ್ರೀ . ವಸಂತ್ಕುಮಾರ್ , ಗ್ರಾಮ ಲೆಕ್ಕಿಗ , ಕಾಗತಿ ಕಂದಾಯ ವೃತ್ತ ಹಾಗೂ 2 ) ಶ್ರೀ ರವಿ ಕಲ್ಲೂರು , ರೆವಿನ್ಯೂ ಇನ್ಸ್ಪೆಕ್ಟರ್ , ಕಸಬಾ ಹೋಬಳಿ , ಚಿಂತಾಮಣಿ ತಾಲ್ಲೂಕು ರವರು ಸ್ಥಳ ಪರಿಶೀಲನೆ ಮಾಡಿ , ನಿರಾಕ್ಷೇಪಣ ಪತ್ರವನ್ನು ನೀಡಲು ರೂ . 30 , 000 / – ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : n / 01 / 2019 ರಂದು ದೂರುದಾರರಿಂದ ಶ್ರೀ . ವಸಂತ್ಕುಮಾರ್ ರವರು ರೂ . 23 , 000 / – ಲಂಚದ ಹಣವನ್ನು ಸ್ವೀಕರಿಸುತ್ತಿರುವಾಗ ಚಿಕ್ಕಬಳ್ಳಾಪುರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಆರೋಪಿಯನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .
City Today News
(Tj vision media)
9341997936
