
11 / 01 / 2019 , ಕೋಲಾರ ಜಿಲ್ಲೆ ಅರಭಿ ಕೊತ್ತನೂರು ಗ್ರಾಮದ ನಿವಾಸಿಯು ತಮ್ಮ ಖಾಲಿ ನಿವೇಶನದ ಖಾತೆ ಮಾಡಿಕೊಡಲು ಅರಭಿ ಕೊತ್ತನೂರು ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಿರುತ್ತಾರೆ . ಶ್ರೀ . ಮಲ್ಲಿಕಾರ್ಜುನಯ್ಯ , ಕಾರ್ಯದರ್ಶಿ , ಅರಭಿ ಕೊತ್ತನೂರು ಗ್ರಾಮ ಪಂಚಾಯ್ತಿ ಇವರು ಅರ್ಜಿದಾರರ ಖಾತೆ ಮಾಡಿಕೊಡಲು ರೂ . 5 , 000 / – ಲಂಚದ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕಃ11 / 01 / 2019 ರಂದು ಶ್ರೀ . ಮಲ್ಲಿಕಾರ್ಜುನಯ್ಯ , ರವರು ದೂರುದಾರರಿಂದ ರೂ . 4 , 500 / ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಕೋಲಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿರುತ್ತಾರೆ . ಇವರನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .
City Today News
(citytoday.media)
9341997936
