
ದಿನಾಂಕ : 24 / 01 / 2019 ಆನೇಕಲ್ ತಾಲ್ಲೂಕು , ಜಿಗಣಿ ಹೋಬಳಿ , ನೆರಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿರವರು ತಮ್ಮ ಸಂಘದ ಆಡಳಿತ ಮಂಡಳಿಯ ಚುನಾವಣೆಯ ಖರ್ಚು ವೆಚ್ಚಗಳ ವೋಚರ್ ಕೋರಿ ಅರ್ಜಿಯನ್ನು ಸಲ್ಲಿಸಿರುತ್ತಾರೆ . ಶ್ರೀ . ಹೇಮಚಂದ್ರ , ಎಸ್ . ಡಿ . ಎ , ಸಹಕಾರ ಸೌಧ , ಉಪ ನಿಬಂಧಕರ ಕಛೇರಿ , ಮಲ್ಲೇಶ್ವರಂ , ಬೆಂಗಳೂರು ರವರು ವೋಚರ್ ಅನ್ನು ನೀಡಲು ರೂ . 10 , 000 / – ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 24 / 01 / 2019 ರಂದು ಶ್ರೀ ಹೇಮಚಂದ್ರ ರವರು ರೂ . 9000 / – ಲಂಚದ ಹಣವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಇವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .
City Today News
(citytoday.media)
9341997936
