24 / 01 / 2019 ರಂದು ಶ್ರೀ . ಆರ್ . ಸಿದ್ದೇಶ್ವರ್ ರವರು ದೂರುದಾರರಿಂದ ರೂ . 50 , 000 / ಲಂಚದ ಹಣವನ್ನು ಪಡೆದು , ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ .

ತುಮಕೂರು ಜಿಲ್ಲೆ , ಗುಬ್ಬಿ ತಾಲ್ಲೂಕು , ಕೋಡಿಯಾಲ ಗ್ರಾಮದ ನಿವಾಸಿಯೊಬ್ಬರು ಆಶ್ರಯ ಯೋಜನೆಯಡಿಯಲ್ಲಿ ತಮಗೆ ಮಂಜೂರಾಗಿದ್ದ ನಿವೇಶನದ ಹಕ್ಕುಪತ್ರವನ್ನು ನೀಡಲು ಕೋರಿ ಚೇಳೂರು ಗ್ರಾಮ ಪಂಚಾಯತ್ ಕಛೇರಿಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುತ್ತಾರೆ . ಶ್ರೀ . ಆರ್ . ಸಿದ್ದೇಶ್ವರ್ , ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರವರು ಅರ್ಜಿದಾರರ ನಿವೇಶನದ ಹಕ್ಕುಪತ್ರವನ್ನು ನೀಡಲು ರೂ . 60 , 000 / ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 24 / 01 / 2019 ರಂದು ಶ್ರೀ . ಆರ್ . ಸಿದ್ದೇಶ್ವರ್ ರವರು ದೂರುದಾರರಿಂದ ರೂ . 50 , 000 / ಲಂಚದ ಹಣವನ್ನು ಪಡೆದು , ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಆರೋಪಿತರನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.