ಕಾನೂನು ಬಾಹಿರವಾಗಿ ಶ್ರೀ ವಿಶ್ವಕರ್ಮ ಸಮಾಜ ನಡೆಯುತ್ತಿರುವ ಅಕ್ರಮ ಕುರಿತು

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿ ಶ್ರೀ ಕಾಳಿಕಾದೇವಿ ಟಸ್ ಹಾಗೂ ಶ್ರೀ ಎಶಕರ್ಮ ಸಮಾಜ ವಿಕಾಸ ಸಂಸ್ಥೆಗಳು ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ 1960 ಕಾಯ್ದೆಯಡಿ 1977 – 78 ಸಾಲಿನಲ್ಲಿ ನೋಂದಣಿಯಾಗಿದ್ದು ನಂತರ 2001 – 02ನೇ ಸಾಲಿನವರೆಗೂ ಆಡಿಟ್ ಹಾಗೂ ರಿನಿವಲ್ ಆಗಿರುತ್ತದೆ . ತದನಂತರ ಆಡಿಟ್ ಹಾಗೂ ರಿನಿವಲ್ ಆಗದೇ ಇದ್ದರು ಈ ಸಂಸ್ಥೆಯವರು ಕಾನೂನು ಬಾಹಿರವಾಗಿ ಕಾಳಿಕಾದೇವಿ ಹೆಸರಿನಲ್ಲಿ ರಾಜ್ಯದ ಹಲವೆಡೆಗಳಿಂದ ಬರುವ ಭಕ್ತಾದಿಗಳಿಂದ ಕೋಟ್ಯಾಂತರ ರೂಪಾಯಿಗಳ ದೇಣಿಗೆ ಸಂಗ್ರಹಿಸಿ ಪ್ರತಿ ವರ್ಷ ಚೂಟಿ ವಾರ್ಷಿಕ ವರದಿ ಹಾಗೂ ಬೋಟಿ ಅಡಾವೆ ಪತಿಕೆಯನ್ನು ಮುದ್ರಿಸಿ ಹಂಚುತ್ತಿದ್ದಾರೆ . ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸೆ ನೋಂದಣಿಯಾದಾಗಿನಿಂದ 2001 – 02ನೇ ಇಸಿಯವರೆಗೆ ಮಾತ್ರ ಆಡಿಟ್ ಹಾಗೂ ರಿನಿವಲ್ ಆಗಿ ತದನಂತರ 2002 – 03ರಿಂದ ಇಲ್ಲಿಯವರೆಗೂ ( ಅಂದರೆ 2019ರವರೆಗೂ ) ಅಂದರೆ 16 ವರ್ಷಗಳಿಂದ ಕಾನೂನು ಬಾಹಿರವಾಗಿ ದೇವಿಯ ಭಕ್ತರನ್ನು ವಂಚಿಸುತ್ತಾ ಬಂದಿರುತ್ತಾರೆ . – ಅಲ್ಲದೇ ಈ ಸಂಸ್ಥೆಯು ಶಿರಸಂಗಿಯಲ್ಲಿ ಭೂಕಬಳಿಕೆ ಮಾಡಿದ ಆರೋಪವೂ ಇದೆ . ಕಾರಣ ಕಟ್ಟುನಿಟ್ಟಿನ ಕಾನೂನು ಚೌಕಟ್ಟು ಇದ್ದರೂ ಭಕ್ತರಿಂದ ಲಕ್ಷಾಂತರ ರೂಪಾಯಿ ಹಾಗೂ ಕೋಟ್ಯಾಂತರ ರೂಪಾಯಿ ದೇಣಿಗೆ ಹೆಸರಿನಲ್ಲಿ ಭಕ್ತರಿಗೆ ವಂಚನೆ ಮಾಡಿ ಕಬಳಿಸುತ್ತಾ ಬಂದಿರುತ್ತಾರೆ . ಹೀಗಿರುವ ಪರಿಸ್ಥಿತಿಯಲ್ಲಿ ಅಲ್ಲಿ ಬರುವ ವಿವಿಧ ರಾಜ್ಯಗಳ ಭಕ್ತರು ಹಾಗೂ ಜಿಲ್ಲೆಯ ಭಕ್ತರಿಗೆ ಯಾರ ಹತ್ತಿರ ದೇವಿಗೆ ಧನಸಹಾಯ ಮಾಡಬೇಕೆಂಬುದು ಹಾಗೂ ಯಾವ ಸಂಸ್ಥೆಯಲ್ಲಿ ಸೇವೆ ಸಲ್ಲಿಸಬೇಕೆಂಬುದು ಗೊಂದಲ ಉಂಟಾಗಿದೆ .

ಈ ಕುರಿತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ( 8 ) ಗೆ ಸಾಕಷ್ಟು ಬೇನಾಮಿ ( ಮೂಕರ್ಜಿ ) ದೂರುಗಳು ಬಂದಿರುತ್ತವೆ . ಆದ ಕಾರಣ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಆ ಆ ನ ಪದಾಧಿಕಾರಿಗಳು ತಾವು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರವನ್ನು ಗೌರವದಿಂದ ತೆರವುಗೊಳಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದು ಉತ್ತಮ ಮಾರ್ಗ , ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾನೂನು ರೀತಿ ಭ್ರಷ್ಟಾಚಾರ ನಡೆಯುವುದನ್ನು ಹಾಗೂ ರಾಜ್ಯದ ವಿವಿಧೆಡೆಗಳಿಂದ ಬರುವ ಭಕ್ತಾಧಿಗಳಿಗೆ ವಂಚನೆಯಾಗುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ( ರಿ ) ವತಿಯಿಂದ ಕಾನೂನು ರೀತಿ ಹೋರಾಟ ಮಾಡಬೇಕಾಗುತ್ತದೆ ಎಂದು ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿರುತ್ತಾರೆ.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.