
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿ ಶ್ರೀ ಕಾಳಿಕಾದೇವಿ ಟಸ್ ಹಾಗೂ ಶ್ರೀ ಎಶಕರ್ಮ ಸಮಾಜ ವಿಕಾಸ ಸಂಸ್ಥೆಗಳು ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ 1960 ಕಾಯ್ದೆಯಡಿ 1977 – 78 ಸಾಲಿನಲ್ಲಿ ನೋಂದಣಿಯಾಗಿದ್ದು ನಂತರ 2001 – 02ನೇ ಸಾಲಿನವರೆಗೂ ಆಡಿಟ್ ಹಾಗೂ ರಿನಿವಲ್ ಆಗಿರುತ್ತದೆ . ತದನಂತರ ಆಡಿಟ್ ಹಾಗೂ ರಿನಿವಲ್ ಆಗದೇ ಇದ್ದರು ಈ ಸಂಸ್ಥೆಯವರು ಕಾನೂನು ಬಾಹಿರವಾಗಿ ಕಾಳಿಕಾದೇವಿ ಹೆಸರಿನಲ್ಲಿ ರಾಜ್ಯದ ಹಲವೆಡೆಗಳಿಂದ ಬರುವ ಭಕ್ತಾದಿಗಳಿಂದ ಕೋಟ್ಯಾಂತರ ರೂಪಾಯಿಗಳ ದೇಣಿಗೆ ಸಂಗ್ರಹಿಸಿ ಪ್ರತಿ ವರ್ಷ ಚೂಟಿ ವಾರ್ಷಿಕ ವರದಿ ಹಾಗೂ ಬೋಟಿ ಅಡಾವೆ ಪತಿಕೆಯನ್ನು ಮುದ್ರಿಸಿ ಹಂಚುತ್ತಿದ್ದಾರೆ . ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸೆ ನೋಂದಣಿಯಾದಾಗಿನಿಂದ 2001 – 02ನೇ ಇಸಿಯವರೆಗೆ ಮಾತ್ರ ಆಡಿಟ್ ಹಾಗೂ ರಿನಿವಲ್ ಆಗಿ ತದನಂತರ 2002 – 03ರಿಂದ ಇಲ್ಲಿಯವರೆಗೂ ( ಅಂದರೆ 2019ರವರೆಗೂ ) ಅಂದರೆ 16 ವರ್ಷಗಳಿಂದ ಕಾನೂನು ಬಾಹಿರವಾಗಿ ದೇವಿಯ ಭಕ್ತರನ್ನು ವಂಚಿಸುತ್ತಾ ಬಂದಿರುತ್ತಾರೆ . – ಅಲ್ಲದೇ ಈ ಸಂಸ್ಥೆಯು ಶಿರಸಂಗಿಯಲ್ಲಿ ಭೂಕಬಳಿಕೆ ಮಾಡಿದ ಆರೋಪವೂ ಇದೆ . ಕಾರಣ ಕಟ್ಟುನಿಟ್ಟಿನ ಕಾನೂನು ಚೌಕಟ್ಟು ಇದ್ದರೂ ಭಕ್ತರಿಂದ ಲಕ್ಷಾಂತರ ರೂಪಾಯಿ ಹಾಗೂ ಕೋಟ್ಯಾಂತರ ರೂಪಾಯಿ ದೇಣಿಗೆ ಹೆಸರಿನಲ್ಲಿ ಭಕ್ತರಿಗೆ ವಂಚನೆ ಮಾಡಿ ಕಬಳಿಸುತ್ತಾ ಬಂದಿರುತ್ತಾರೆ . ಹೀಗಿರುವ ಪರಿಸ್ಥಿತಿಯಲ್ಲಿ ಅಲ್ಲಿ ಬರುವ ವಿವಿಧ ರಾಜ್ಯಗಳ ಭಕ್ತರು ಹಾಗೂ ಜಿಲ್ಲೆಯ ಭಕ್ತರಿಗೆ ಯಾರ ಹತ್ತಿರ ದೇವಿಗೆ ಧನಸಹಾಯ ಮಾಡಬೇಕೆಂಬುದು ಹಾಗೂ ಯಾವ ಸಂಸ್ಥೆಯಲ್ಲಿ ಸೇವೆ ಸಲ್ಲಿಸಬೇಕೆಂಬುದು ಗೊಂದಲ ಉಂಟಾಗಿದೆ .
ಈ ಕುರಿತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ( 8 ) ಗೆ ಸಾಕಷ್ಟು ಬೇನಾಮಿ ( ಮೂಕರ್ಜಿ ) ದೂರುಗಳು ಬಂದಿರುತ್ತವೆ . ಆದ ಕಾರಣ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಆ ಆ ನ ಪದಾಧಿಕಾರಿಗಳು ತಾವು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರವನ್ನು ಗೌರವದಿಂದ ತೆರವುಗೊಳಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದು ಉತ್ತಮ ಮಾರ್ಗ , ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾನೂನು ರೀತಿ ಭ್ರಷ್ಟಾಚಾರ ನಡೆಯುವುದನ್ನು ಹಾಗೂ ರಾಜ್ಯದ ವಿವಿಧೆಡೆಗಳಿಂದ ಬರುವ ಭಕ್ತಾಧಿಗಳಿಗೆ ವಂಚನೆಯಾಗುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ( ರಿ ) ವತಿಯಿಂದ ಕಾನೂನು ರೀತಿ ಹೋರಾಟ ಮಾಡಬೇಕಾಗುತ್ತದೆ ಎಂದು ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿರುತ್ತಾರೆ.
City Today News
(citytoday.media)
9341997936
