
ನಾಡಪ್ರಭು ಕೆಂಪೇಗೌಡ ( ಕ್ರಿ . ಶ . 1515 – 1569 ) ಭವ್ಯ ಭಾರತದಲ್ಲಿ ಕರ್ನಾಟಕದ ಬೆಂಗಳೂರು ನಗರಕ್ಕೆ ವಿಶೇಷ ಸ್ಥಾನಮಾನವಿದೆ . ಉದ್ಯಾನ ನಗರಿ , ಹವಾನಿಯಂತ್ರಿತ ನಗರ , ವಿಶ್ವದ ಮಾಹಿತಿ ತಂತ್ರಜ್ಞಾನ ಕೇಂದ್ರ , ಸರ್ವಧರ್ಮಗಳ ಸಮನ್ವಯ ನಗರ , ಹೀಗೆ ಹಲವಾರು ವಿಶೇಷಣಗಳನೊಳಗೊಂಡಿದೆ .

ನಮ್ಮ ಈ ನಗರ , ಧರ್ಮಪ್ರಭು ಎಂದೇ ಹೆಸರಾದ ನಾಡಪ್ರಭು ಕೆಂಪೇಗೌಡರಿಂದ 16ನೇ ಶತಮಾನದಲ್ಲಿ ನಿರ್ಮಾಣವಾಯಿತು ಎಂಬುದು ಹೆಮ್ಮೆಯ ಇತಿಹಾಸ , ಕಿರೀಟಪ್ರಾಯವಾದ ಈ ಸುಂದರ ನಗರದ ನಿರ್ಮಾಪಕ ಪ್ರಾತಃ ಸ್ಮರಣೀಯರು ! ಕಳೆದ ಐದು ಶತಮಾನಗಳಿಂದ “ ಬೆಂದಕಾಳೂರು – ಬೆಂಗಳೂರು ‘ ನಗರವಾಗಿ ಪರಿವರ್ತಿತಗೊಂಡು ವಿಶ್ವದ ಭೂಪಟದಲ್ಲಿ ವಿಶಿಷ್ಟ ಸ್ಥಾನ – ಮಾನ ಪಡೆದಿದೆ .

ರಾಷ್ಟ್ರಕವಿಗಳು ನುಡಿದಂತೆ “ ಸರ್ವಜನಾಂಗದ ಶಾಂತಿಯ ತೋಟ ‘ ವಾಗಿರುವ ಬೆಂಗಳೂರು ನಗರದ ನಿರ್ಮಾಪಕನಿಗೆ ರಾಷ್ಟ್ರದ ರಾಜಧಾನಿ “ ನವದೆಹಲಿಯಲ್ಲಿ ನಾಡಿನ ಪರಮಪೂಜ್ಯ ಮಠಾಧೀಶರುಗಳ ಸಮ್ಮುಖದಲ್ಲಿ , ನೇತಾರರು , ಸಾಹಿತಿಗಳು , ದೇಶ – ವಿದೇಶದ ಕನ್ನಡಿಗರು , ಕಲಾವಿದರು ಹಾಗೂ ರಾಜ್ಯದ ಸಹಸ್ರಾರು ಪ್ರತಿನಿಧಿಗಳ ಸಮಕ್ಷಮದಲ್ಲಿ ಗೌರವಾರ್ಪಣೆಯ ಸಂಭ್ರಮ .
City Today News
(citytoday.media)
9341997936
