
ಸಿಸಿಬಿ ಕಾರ್ಯಾಚರಣೆ ಪತ್ರಿಕಾ ಪ್ರಕಟಣೆ ಸ್ಟಾರ್ ಗೋಲ್ಡ್ ರಿಕ್ರಿಯೇಷನ್ನಲ್ಲಿ ಕ್ಲಬ್ ಮೇಲೆ ದಾಳಿ – ಜೂಜಾಟ ಆಡುತ್ತಿದ್ದ 11 ಜನರ ಬಂಧನ – ನಗದು ರೂ . 88 , 020 / – ವಶ ಬೆಂಗಳೂರು ನಗರದ , ಚಾಮರಾಜಪೇಟೆ ಪೊಲೀಸ್ ಠಾಣೆಯ ಸರಹದ್ದಿನ ಚಾಮರಾಜ ಪೇಟೆ , 9ನೇ ಕ್ರಾಸ್ , ಗಣೇಶ ಕಾಂಪ್ಲೆಕ್ಸ್ , ನಂ 1632 – 1 , 2ನೇ ಮಹಡಿಯಲ್ಲಿರುವ ಸ್ಟಾರ್ ಗೋಲ್ಡ್ ರಿಕ್ರಿಯೇಷನ್ನಲ್ಲಿ ಕ್ಲಬ್ನಲ್ಲಿ ಮಾನ್ಯ ನ್ಯಾಯಾಲಯದ ನಿಬಂಧನೆಗಳನ್ನು ಉಲ್ಲಂಘಿಸಿ ಸದಸ್ಯರಲ್ಲದ ಕೆಲವು ಜನ ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗ ( ಸಿಸಿಬಿ ) ವಿಶೇಷ ವಿಚಾರಣಾ ದಳದ ಪೊಲೀಸರು ದಿನಾಂಕ 08 . 03 . 2019 ರಂದು ಮೇಲ್ಕಂಡ ಸ್ಥಳದ ಮೇಲೆ ಕಾರ್ಯಾಚರಣೆ ನಡೆಸಿ ಜೂಜಾಟದಲ್ಲಿ ತೊಡಗಿದ್ದ 1 , ಯೋಗೇಶ್ ಬಿನ್ ಗಂಗಾಧರ 31 ವರ್ಷ 2 . ಮಹದೇವಸ್ವಾಮಿ ಬಿನ್ ಮಹದೇವಯ್ಯ 40 ವರ್ಷ 3 , ಹರೀಶ್ ಬಿನ್ ಮುನಿಸ್ವಾಮಿ 35 ವರ್ಷ 4 , ಹರೀಶ ಬಿನ್ ಲೇಟ್ ವೆಂಕಟೇಶ 30 ವರ್ಷ 5 , ಹೇಮಂತಕುಮಾರ್ ಬಿನ್ ಜಯಶೀಲನ್ 35 ವರ್ಷ 6 , ಮುತ್ತುರಾಜು ಬಿನ್ ಪಾಂಡಿಯನ್ 34 ವರ್ಷ 7 . ವಸೀಂ ಅಲಿಖಾನ್ ಬಿನ್ ಯಕಾತ್ ಖಾನ್ 29 ವರ್ಷ 8 , ಶ್ರೀನಿವಾಸ ಬಿನ್ ಮುನಿವೆಂಕಟಪ್ಪ 35 ವರ್ಷ 9 , ಮಹೇಶ ಬಿನ್ ತಿಮ್ಮಪ್ಪಯ್ಯ 35 ವರ್ಷ 10 , ಪ್ರಶಾಂತ ಬಿನ್ ರಾಘವೇಂದ್ರ ರಾವ್ 49 ವರ್ಷ 11 , ಶಿವರಾಮು ಬಿನ್ ಮಾದೇಗೌಡ , 47 ವರ್ಷ ( ಕ್ಲಬ್ ಮಾಲೀಕ ) ಇವರುಗಳನ್ನು ವಶಕ್ಕೆ ಪಡೆದು ಇವರುಗಳ ವಶದಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ . 88 , 020 / – ಹಾಗೂ 06 ಕಟ್ಟು ಇಸ್ಪೀಟ್ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ .

ಈ ಸಂಬಂಧ ಆರೋಪಿಗಳ ವಿರುದ್ದ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ . ಈ ಕಾರ್ಯಚರಣೆಯನ್ನು ಬೆಂಗಳೂರು ನಗರದ ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ ಆಲೋಕ್ ಕುಮಾರ್ , ಐಪಿಎಸ್ & ಉಪ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್ . ಎಸ್ , ಐಪಿಎಸ್ ರವರ ನೇರ ಮಾರ್ಗದರ್ಶನದಲ್ಲಿ , ಸಿಸಿಬಿ ಘಟಕದ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಎನ್ . ಹೆಚ್ , ರಾಮಚಂದ್ರಯ್ಯ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಅಂಜನ್ಕುಮಾರ್ ಮತ್ತು ಸಿಬ್ಬಂದಿಗಳಾದ ಶ್ರೀ ವಿನೋದ್ ಕುಮಾರ್ , ಶ್ರೀ ಅಶೋಕ , ಶ್ರೀ ಜಾನ್ ಕೆನ್ನಿ , ಶ್ರೀ ಚಂದ್ರಶೇಖರ್ ಶ್ರೀ . ನಾಗರಾಜು ರವರುಗಳು ಯಶಸ್ವಿಗೊಳಿಸಿರುತ್ತಾರೆ .
City Today News
(citytoday.media)
9341997936
