ಡಿ . ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ “ಡಾ : ಕೆ . ಅನ್ನದಾನಿರವರಿಗೆ” ಅಭಿನಂದನಾ ಕಾರ್ಯಕ್ರಮ

ಡಿ . ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ : ಕೆ . ಅನ್ನದಾನಿರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಪಕ್ಷದ ರಾಜ್ಯ ಕಛೇರಿಯಲ್ಲಿ ದಿನಾಂಕ : 15 – 03 – 2019ನೇ ಶುಕ್ರವಾರ ಮಧ್ಯಾಹ್ನ : 12 – 30 ಘಂಟೆಗೆ ಹಮ್ಮಿಕೊಳ್ಳಲಾಗಿದ್ದು ,

ಅಂದೇ ಶ್ರೀ ಕೆ . ಎ . ಆನಂದ್‌ರವರು ಕರ್ನಾಟಕ ಪ್ರದೇಶ ಜನತಾದಳ ( ಜಾತ್ಯತೀತ ) ಪಕ್ಷದ ಪರಿಶಿಷ್ಠ ಜಾತಿ ವಿಭಾಗದ “ ನೂತನ ಅಧ್ಯಕ್ಷ ” ರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ . ಈ ಕಾರ್ಯಕ್ರಮಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಹೆಚ್ . ಡಿ . ದೇವೇಗೌಡರವರು , ರಾಜ್ಯಾಧ್ಯಕ್ಷರಾದ ಶ್ರೀ ಅಡಗೂರು ಎಚ್ . ವಿಶ್ವನಾಥ್‌ರವರು , ಪಕ್ಷದ ಸಚಿವರು , ಶಾಸಕರು , ಹಿರಿಯ ಮುಖಂಡರುಗಳು ಭಾಗವಹಿಸಲಿದ್ದಾರೆ .

– ಕಿರಣ್‌ಕುಮಾರ್‌ ಬಿ.ಆರ್

ರಾಜ್ಯ ಪ್ರಧಾನ ಕಾರ್ಯದರ್ಶಿ

ಪರಿಶಿಷ್ಠ ಜಾತಿ ವಿಭಾಗ

ಕರ್ನಾಟಕ ಪ್ರದೇಶ ಜನತಾದಳ ( ಜಾತ್ಯತೀತ )

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.