
ದಿನಾಂಕ : 29 . 04 . 2019
ಜಿಲ್ಲಾ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ , ತುಮಕೂರು ರವರಿಗೆ ತಿಪಟೂರು ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ . 57 / 2015 ರಲ್ಲಿ ಖುಲಾಸೆ ಆಗಿದ್ದು , ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ , ಮೇಲ್ಮನವಿಯನ್ನು ಸಲ್ಲಿಸದೇ ಇರಲು ಶ್ರೀಮತಿ . ಪೂರ್ಣಿಮ , ಸಹಾಯಕ ಅಭಿಯೋಜಕರು , ಜೆ . ಎಂ . ಎಫ್ . ಸಿ , ನ್ಯಾಯಾಲಯ , ತಿಪಟೂರು ರವರು ರೂ . 40 , 000 / – ಲಂಚದ ಹಣಕ್ಕೆ ಬೇಡಿಕೆ ಇಟ್ಟು ರೂ . 20000 / – ಲಂಚದ ಹಣವನ್ನು ಬ್ಯಾಂಕ್ ಖಾತೆಗೆ ವರ್ಗವಣೆ ಮಾಡಿಸಿಕೊಂಡಿರುತ್ತಾರೆ . ದಿನಾಂಕ : 29 / 04 / 2019 ರಂದು ರೂ . 20 , 000 / – ಲಂಚದ ಹಣವನ್ನು ಶರಣ್ ಕುಮಾರ್ . ಎನ್ , ಬೆರಳಚ್ಚುಗಾರರು , ಜೆ . ಎಂ . ಎಫ್ . ಸಿ , ನ್ಯಾಯಾಲಯ , ತಿಪಟೂರು ರವರು ಪಿರ್ರ್ಯಾದುದಾರರಿಂದ ಪಡೆದುಕೊಳ್ಳುವ ಸಂದರ್ಭದಲ್ಲಿ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಇವರಿಬ್ಬರನ್ನು ದಸ್ತಗಿರಿ ಮಾಡಿದ್ದು , ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .
City Today News
(citytoday.media)
9341997936
