
ಕಲಾಕ್ಷೇತ್ರ ಗೆಳೆಯರ ಬಳಗ ಬೆಂಗಳೂರು ರಂಗ ಜಂಗಮ ಮೇಕಪ್ ಕೃಷ್ಣ ಅವರಿಗೆ ನುಡಿ ನಮನ ದಿನಾಂಕ : 27 – 01 – 2020 ಸಮಯ : ಸಂಜೆ 5 : 30 ಕ್ಕೆ ಸ್ಥಳ : ಮಹಿಳಾ ವಿಶ್ರಾಂತಿ ಕೊಠಡಿ , ರವೀಂದ್ರ ಕಲಾಕ್ಷೇತ್ರ , ಬೆಂಗಳೂರು ಸ್ನೇಹಿತರೊಂದಿಗೆ ಬನ್ನಿ ಕೃಷ್ಣನ ಸ್ಮರಿಸೋಣ

Dr.ರಾಜ್ ಕುಮಾರ್ , – ವಿಷ್ಣುವರ್ಧನ್ , -ಅಂಬರೀಷ್ – ಸೇರಿ ಹಲವು ಮೇರು ನಟರಿಗೆ ಬಣ್ಣ ಹಚ್ಚಿದ ಪ್ರಸಾದನ ಕಲಾವಿದ ಮೇಕಪ್ ಕೃಷ್ಣ ( 55 ) ಸೋಮವಾರ ನಿಧನರಾದರು . * ಇವರಿಗೆ ಪತ್ನಿ ವತ್ಸಲಾ ಕೃಷ್ಣ ಮತ್ತು ಪುತ್ರಿ ವರ್ಷಾ ಕೃಷ್ಣ ಇದ್ದಾರೆ . ಮೂತ್ರಪಿಂಡ ವೈಫಲ್ಯದಿಂದ ಬಳಲು ತ್ತಿದ್ದ ಅವರು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು . ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು . ಇವರ ಹುಟ್ಟೂರಾದ ಗೊಲ್ಲಹಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು . ಕನ್ನಡದ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಸಾದನ ಕಲಾವಿದರಾಗಿ ಕೆಲಸ ಮಾಡಿದ್ದರು . ಬಾಲಿವುಡ್ ನಟರಿಗೂ ಮೇಕಪ್ ಮಾಡಿದ್ದರು . ರಾಜ್ ಕುಟುಂಬದೊಂದಿಗೆ ಹೆಚ್ಚು ಸಂಪರ್ಕ ಇಟ್ಟುಕೊಂಡಿದ್ದ ಕೃಷ್ಟ ರಾಜ್ಕುಮಾರ್ ಅವರ ಮಕ್ಕಳ ಚಿತ್ರಗಳಿಗೂ ಕೆಲಸ ಮಾಡಿದ್ದಾರೆ .
City Today News
(citytoday.media)
9341997936
