ಆರೋಗ್ಯ ಸೇತು ಕೋವಿಡ್19 ಮೊಬೈಲ್ ಆ್ಯಪ್ ನ್ನು ಡೌನ್‌ಲೋಡ್ ಮಾಡಿ ಇದರ ಪ್ರಯೋಜನ ಪಡೆದುಕೊಳ್ಳಲು ಸೂಚನೆ – ಶ್ರೀ ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವರುಕರ್ನಾಟಕ ಸರ್ಕಾರ

ಸುತ್ತೋಲೆ.

ಮಾರಕವಾದ ಕೊರೋನಾ ಸೊಂಕು (ಕೋವಿಡ್ 19) ಎಲ್ಲೆಡೆ ಹರಡುತ್ತಿರುವ ಈ ಸಂದರ್ಭದಲ್ಲಿ ಸೋಂಕಿತರ ಮೇಲೆ ನಿಗಾ ಇಡುವುದೇ ಸರ್ಕಾರಕ್ಕೆ ಮತ್ತು ಆರೋಗ್ಯ ಸಹಾಯಕರಿಗೆ ಬಹುದೊಡ್ಡ ಕೆಲಸವಾಗಿದೆ. ಹಾಗಾಗಿಯೇ ಸೋಂಕಿತ ವ್ಯಕ್ತಿಯ ಮೇಲೆ ನಿಗಾ ಇರಿಸುವ ಮತ್ತು ವೈಯಕ್ತಿಕ ಅಲರ್ಟ್ ಸಂದೇಶಗಳನ್ನು‌ ನೀಡುವ ಆರೋಗ್ಯ ಸೇತು ಕೋವಿಡ್19 ಮೊಬೈಲ್ ಆ್ಯಪ್ ನ್ನು ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿದೆ. ಈ ಮೊಬೈಲ್ ಆ್ಯಪ್ ನ್ನು ನಮ್ಮ ಜಲಸಂಪನ್ಮೂಲ ಇಲಾಖೆಯ ‌ಎಲ್ಲಾ ಅಧಿಕಾರಿಗಳು, ನೀರಾವರಿ ನಿಗಮಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಡೌನ್‌ಲೋಡ್ ಮಾಡಿ ಇದರ ಪ್ರಯೋಜನ ಪಡೆದುಕೊಳ್ಳಲು ಸೂಚಿಸಿದೆ.

ಶ್ರೀ ರಮೇಶ್ ಜಾರಕಿಹೊಳಿ
ಜಲಸಂಪನ್ಮೂಲ ಸಚಿವರು
ಕರ್ನಾಟಕ ಸರ್ಕಾರ

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.