
ಮಾನ್ಯ ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎ.ಬಸವರಾಜ ಅವರು ಇಂದು ಬೆಳಿಗ್ಗೆ ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಮುರುಘ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಅವರ ಅಶೀರ್ವಚನ ಪಡೆದರು.

ನಂತರ ಮಠದ ಆವರಣದಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಲಾಕ್ ಡೌನ್ ಅಗಿರುವ ಪರಿಣಾಮ ಅಲೆಮಾರಿ ,ಬುಡಕಟ್ಟು, ತಳಸಮುದಾಯ ಹಾಗೂ ಮಂಗಳಮಖಿಯರಿಗೆ ಚಿತ್ರದುರ್ಗ ಶಾಸಕರದ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಶ್ರೀ ಮಠದ ಸಹಯೋಗದೊಂದಿಗೆ ಉಚಿತವಾಗಿ ಅಹಾರ ಪದಾರ್ಥಗಳನ್ನು ನೀಡಿದರು.
City Today News
(citytoday.media)
9341997936
