ಡಾ.ಪಿ.ಆನಂದ್,ಸುಜಾತ ದಂಪತಿಗಳ ಕುಟುಂಬ ಮತ್ತು ಮಾಜಿ ಸಚಿವರು ಹಾಗೂ ಬಿ.ಟಿ.ಎಂ ಲೇಔಟ್ ಶಾಸಕರಾದ ಶ್ರೀ.ರಾಮಲಿಂಗಾ ರೆಡ್ಡಿಯವರ ಸಮ್ಮುಖದಲ್ಲಿ ಉಚಿತ ಮಾಸ್ಕ್, ಬಿಸ್ಕಟ್ ಪ್ಯಾಕೆಟ್, ಸೀರೆ+ರವಿಕೆ ವಿತರಣೆ

ಕೋರಮಂಗಲ ಗ್ರಾಮದ ಸಮಾಜ ಸೇವಕರಾದ ಡಾ. ಪಿ.ಆನಂದ್ ಮತ್ತು ಸುಜಾತ ಮಾಲೀಕರು,ಎಂ.ಮುನಿರೆಡ್ಡಿ ಈರಮ್ಮ ಕಲ್ಯಾಣ ಮಂಟಪ. ದಿನಾಂಕ30/4/2020ರಂದು ಕೋರಮಂಗಲ ಗ್ರಾಮದ ಬಸವೇಶ್ವರ ಗುಡಿ ಸಮೀಪವಿರುವ ಅವರ ಮನೆಯ ಹತ್ತಿರ ಎಲ್ಲಾ ವರ್ಗಕ್ಕೆ ಸೇರಿದ ಬಡ ಜನರಿಗೆ ಉಪಯೋಗವಾಗುವ ರೀತಿಯ ಒಂದು ಸಣ್ಣ ಧರ್ಮ ಕಾರ್ಯ ಏರ್ಪಡಿಸಿ ಬಡ ಬಗ್ಗರಿಗೆ ಸಹಾಯ ಹಸ್ತ ನೀಡಿರುತ್ತಾರೆ.

ಈ ಪುಣ್ಣ್ಯ ಕಾರ್ಯಕ್ರಮ ಮಾಜಿ ಸಚಿವರು ಹಾಗೂ ಬಿ.ಟಿ.ಎಂ ಲೇಔಟ್ ಶಾಸಕರಾದಂತ ಶ್ರೀ.ರಾಮಲಿಂಗಾ ರೆಡ್ಡಿಯವರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರೆವೇರಿತು.

ಅದಾಗಲೇ ದಿನಾಂಕ 23ನೇ ಏಪ್ರಿಲ್ ರಂದು ಮೂರು ಬಡಜನ ವಾಸಿಸುವ ಪ್ರದೇಶಗಳಲ್ಲಿ ಮಾಸ್ಕ್ ವಿತರಿಸಿ ಬಡಜನರ ಮೆಚ್ಚುಗೆಗೆ ಪಾತ್ರರಾದರು. ಅದರ ಮುಂದುವರಿದ ಬಾಗವಾಗಿ ಮತ್ತು ಸ್ತಳೀಯ ಬಡಜನರ ಬೇಡಿಕೆಯ ಮೇರೆಗೆ ಮತ್ತೆ 2000 ಬಡಜನರಿಗೆ ದಿನಾಂಕ30/4/2020ರಂದು ಸಚಿವರು ಹಾಗೂ ಬಿ.ಟಿ.ಎಂ ಲೇಔಟ್ ಶಾಸಕರಾದಂತ ಶ್ರೀ.ರಾಮಲಿಂಗಾ ರೆಡ್ಡಿಯವರ ಸಮ್ಮುಖದಲ್ಲಿ ಮಾಸ್ಕ್, ಬಿಸ್ಕಟ್ ಪ್ಯಾಕೆಟ್,ಸೀರೆ+ರವಿಕೆ ನೀಡಿರುತ್ತಾರೆ.

ಎಲ್ಲಾ ವರ್ಗದ ಮಕ್ಕಳಿಗೆ
ಮಾಸ್ಕ್+ಬಿಸ್ಕಟ್

ಎಲ್ಲಾ ವರ್ಗದ ಮಹಿಳೆಯರಿಗೆ
ಮಾಸ್ಕ್+ಬಿಸ್ಕಟ್ ಪ್ಯಾಕೆಟ್+ಸೀರೆ+ರವಿಕೆ

ಎಲ್ಲಾ ವರ್ಗದ ಗಂಡಸರಿಗೆ
ಮಾಸ್ಕ್+ಬಿಸ್ಕಟ್ ಪ್ಯಾಕೆಟ್

ಎಲ್ಲಾ ವರ್ಗದ 70ವಯಸ್ಸಿಗೆ ಮೇಲ್ಪಟ್ಟವರಿಗೆ
ಮಾಸ್ಕ್+ಬಿಸ್ಕಟ್ ಪ್ಯಾಕೆಟ್ ಡಾ.ಪಿ.ಆನಂದ್,ಸುಜಾತ ಮತ್ತು ಮಕ್ಕಳಾದ ವನಿತಾ ಆನಂದ್,ನಿಮಿಶಾ ಆನಂದ್,ವಿನಯ್ ಆನಂದ್ ಕುಟುಂಬ ಸಮೇತರಾಗಿ ವಿತರಣೆ ಮಾಡಿ ಯಶಸ್ವಿಗಳಿಸಿದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.