ಪತ್ರಕರ್ತರಿಗೆ ದಿನಸಿ ಕಿಟ್(Ration Kits) ವಿತರಣೆ

ಬಸವನ ಬಾಗೇವಾಡಿ , ಜೂ .19 : ಸುಮಾರು ನಾಲ್ಕು ತಿಂಗಳಿನಿಂದ ಕರೊನಾ ವೈರಸ್ ದೇಶಕ್ಕೆ ಬೆಂಬಿಡದೆ ಕಾಡುತ್ತಿದೆ . ನೂರಾರು ಜನರ ಪ್ರಾಣವನ್ನು ಕಿತ್ತಿಕೊಂಡು ಅಟ್ಟಹಾಸ ಮೆರೆದಿದೆ , ಆ ನಿಟ್ಟಿನಲ್ಲಿ ಪತ್ರಕರ್ತರು ಕೊರೊನಾ ವಿರುದ್ದ ಹೋರಾಡಿ ತಮ್ಮ ಕೈಲಾದಷ್ಟು ಸಹಾಯ ಮಾಡಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದು ಸಮಾಜ ಸೇವಕ ಮಲ್ಲನಗೌಡ ಎಸ್ ಬಿರಾದಾರ ಕೊರವಾರ ಹೇಳಿದರು .

ತಾಲೂಕಿನ ಹೂವಿನಹಿಪ್ಪರಗಿಯಲ್ಲಿ ಪರ್ತಕರ್ತರಿಗೆ ದಿನಸಿ ಕಿಟ್ಟ ವಿತರಿಸಿ ಮಾತನಾಡಿದ ಅವರು , ಕೊರೊನಾ ವೈರಸ್ ವಿರುದ್ದ ಹಗಲು ರಾತ್ರಿ ಎನ್ನದೆ ಹೊರಾಡುತ್ತಿರುವ ಆರೋಗ್ಯ ಇಲಾಖೆ , ಪೌರ ಕಾರ್ಮಿಕರು , ಆಶಾ , ಅಂಗನವಾಡಿ , ಪೊಲೀಸ್ ಇಲಾಖೆ ಸೇರಿ ಪತ್ರಕರ್ತರು ತಮ್ಮ ಜೀವನವನ್ನು ಮರೆತು ಕೊರೊನಾ ವಿರುದ್ಧ ಹೋರಾಡುವವರ ಬೆನ್ನಿಗೆ ನಿಂತು ಜಾಗೃತಿ ಮೂಡಿಸಿದ್ದಾರೆ . ಅಂತವರಿಗೆ ಭಗವಂತ ಒಳ್ಳೆದು ಮಾಡಲಿ ಎಂದು ಶುಭಹಾರೈಸಿದರು . ಭೀಮನಗೌಡ ಪಾಟೀಲ , ನಿಂಗನಗೌಡ ಪಾಟೀಲ , ಅಪ್ಪುಗೌಡ ಪಾಟೀಲ , ಅಭಿಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.