COVID-19 ಸಾಂಕ್ರಾಮಿಕ ರೋಗದ ಮುಂಜಾಗ್ರತಾ ಕ್ರಮವಾಗಿ ಸರಳವಾಗಿ ಹಾಗೂ ಸಂಕ್ಷಿಪ್ತವಾಗಿ ರಾಜ್ಯೋತ್ಸವವನ್ನು ಆಚರಿಸಲಾಯಿತು

ಶ್ರೀ ಹನುಮಾನ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆ ಕೋರವಾರದಲ್ಲಿ ೬೫ನೇ ಕನ್ನಡ ರಾಜ್ಯೋತ್ಸವ ಆಚರಣೆ

ರವಿವಾರ ಬೆಳಿಗ್ಗೆ, ದಿನಾಂಕ ೧ನೇ ನವಂಬರ್ ೨೦೨೦ ರಂದು , ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಶ್ರೀ ಹನುಮಾನ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಯಲ್ಲಿ ೬೫ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.

ಸಂಸ್ಥೆಯ ನಿದೇ೯ಶಕರು ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಐಟಿಬಿಟಿ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲನಗೌಡ ಎಸ್ ಬಿರಾದಾರ ಕನ್ನಡಾಂಬೆಗೆ ವಂದಿಸಿ ಪೂಜೆ ಕಾಯ೯ಕ್ರಮದಲ್ಲಿ ಭಾಗಿಯಾದರು. ಪ್ರಾಚಾರ್ಯರಾದ ಎಸ್. ಜಿ. ಬಿರಾದಾರ, ಮುಖ್ಯೋಪಾಧ್ಯಾಯರಾದ ಎಮ್. ಆರ್. ಚಿಂಚೋಳಿ, ಎಸ್. ವಿ. ಜೋಶಿ, ಪ್ರಾಧ್ಯಾಪಕರಾದ ಎಮ್. ಆರ್. ಶಿರಸಂಗಿಮಠ ಗುರುಗಳು ಪೂಜೆಯನ್ನು ನೆರವೇರಿಸಿದರು. ಇನ್ನುಳಿದ ಪ್ರಾಧ್ಯಾಪಕರುಗಳಾದ ಮೋರಟಗಿ, ಸಂಗಯ್ಯ ಮಠ, ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. COVID-19 ಸಾಂಕ್ರಾಮಿಕ ರೋಗದ ಮುಂಜಾಗ್ರತಾ ಕ್ರಮವಾಗಿ ಸರಳವಾಗಿ ಹಾಗೂ ಸಂಕ್ಷಿಪ್ತವಾಗಿ ರಾಜ್ಯೋತ್ಸವವನ್ನು ಆಚರಿಸಲಾಯಿತು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.