ಡಾ. ಬಿ.ಆರ್.ಅಂಬೇಡ್ಕರ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ವಿಶ್ವವಿದ್ಯಾಲಯ ನಿರ್ಮಾಣ ಕಾರ್ಯದಲ್ಲಿ ಬಾರೀ ದೊಡ್ಡ ಮೊತ್ತದ ಅಕ್ರಮ ನಡೆದಿದೆ – ಅಹಿಂದ ರಕ್ಷಣಾ ವೇದಿಕೆ ಕಾರ್ಯದರ್ಶಿ ಜಿ.ಕೆ.ಜಯರಾಮ್

ಅಂಬೇಡ್ಕರ್ ವಿಶ್ವ ವಿದ್ಯಾಲಯ ನಿರ್ಮಾಣದಲ್ಲಿ ಬಾರೀ ಅವ್ಯವಹಾರ- ಅಹಿಂದ ನಾಯಕರ ಆರೋಪ

ಡಾ. ಬಿ.ಆರ್.ಅಂಬೇಡ್ಕರ್ ಲಂಡನ್ ಸ್ಕೂಲ್ ಆಪ್ ಎಕನಾಮಿಕ್ಸ್ ವಿಶ್ವವಿದ್ಯಾಲಯ ನಿರ್ಮಾಣ ಕಾರ್ಯದಲ್ಲಿ ಬಾರೀ ದೊಡ್ಡ ಮೊತ್ತದ ಆಕ್ರಮ ನಡೆದಿದೆ ಎಂದು ಅಹಿಂದ ರಕ್ಷಣಾ ವೇದಿಕೆ ಕಾರ್ಯದರ್ಶಿ ಜಿ.ಕೆ.ಜಯರಾಮ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರು 350 ರಿಂದ 400 ಕೋಟಿ ರೂಪಾಯಿ ಹಣ ಬಿಡುಗಡೆ ಗೊಳಿಸಲಾಗಿದ್ದು, ಈ ಮಹತ್ವದ ಯೋಜನೆಯನ್ನು ಯಾರಿಗೆ ಗುತ್ತಿಗೆ ನೀಡಲಾಗಿದೆ. ಇಷ್ಟು ದೊಡ್ಡ ಮಟ್ದದ. ಹಣವನ್ನು ನೀಡಿ ನಿರ್ಮಾಣ ಮಾಡಲಾಗಿರುವ ವಿ.ವಿ ಯನ್ನು ಇದುವರೆಗೂ ಉದ್ಘಾಟನೆಗೊಂಡಿಲ್ಲ. ಈ ಬಗ್ಗೆ ದಲಿತ ನಾಯಕರು ಕಣ್ಮುಚ್ಚಿ ಕುಳಿತಿದ್ದು , ಇವರಿಗೆ ಎಷ್ಟು ಹಣ ಸಂದಾಯವಾಗಿದೆ ಎಂದು ತಿಳಿಸಿದರು.
ಇದುವರೆಗೂ ಬೃಹತ್ ಪ್ರಮಾಣದಲ್ಲಿ ನಿರ್ಮಾಣ ಮಾಡಿರುವ ಅಂಬೇಡ್ಕರ್ ಪ್ರತಿಮೆಯನ್ನು ಉದ್ಘಾಟನೆ ಮಾಡಿಲ್ಲ. ಕೂಡಲೇ ಈ ಪುತ್ಥಳಿ ಯನ್ನು ಅನಾವರಣಗೊಳಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ರಾದ ಮುನೀರ್ ಎಸ್ ಬಿ. ಚೌದ್ರಿ, ಸುರೇಶ ನಾಯಕ ಮತ್ತಿತರರು ಹಾಜರಿದ್ದರು.

City Today News

9341997936

Leave a comment

This site uses Akismet to reduce spam. Learn how your comment data is processed.