ಚಿತ್ರದುರ್ಗ ಎಸ್.ಕೆ.ಬಸವರಾಜನ್ ರವರಿಗೆ ಕಾಂಗ್ರೆಸ್‌ ಪಕ್ಷ ಟಿಕೇಟ್ ಕೊಡಬಾರದೆಂದು ವಿನಂತಿ

ಚಿತ್ರದುರ್ಗ ಮಠ ಕರ್ನಾಟಕದ ಅತ್ಯಂತ ಪ್ರಾಚೀನವಾದ ಮಠ ಬಸವಾದಿ ಶರಣರ ಆದರ್ಶಗಳನ್ನು ರಾಜ್ಯಮಟ್ಟ, ರಾಷ್ಟ್ರಮಟ್ಟ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಚಿತ್ರದುರ್ಗ ಮಠವು ಮುರಘಾ ಶ್ರೀಗಳಿಂದ ಜಾಗತೀಕ ಮಟ್ಟದಲ್ಲಿ ಬಸವಾದಿ ಶರಣರ ತತ್ವಗಳು ಜನಮಾನಸಕ್ಕೆ ಮುಟ್ಟಿಸಿದ್ದಾರೆ. ಪೂಜ್ಯ ಚಿತ್ರದುರ್ಗದ ಮುರುಘಾ ಶರಣರು ಸುಮಾರು 40 ವರ್ಷಗಳ ಕಾಲ ದೀನ – ದಲಿತರ ಏಳಿಗೆಗಾಗಿ ಹಗಲಿರುಳು ಎನ್ನದೇ ಶ್ರಮಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮುರುಘಾ ಶ್ರೀಗಳಿಗೆ ಪೋಸ್ಕೋ ಪ್ರಕರಣದಲ್ಲಿ ಸಿಲುಕಿಸಿದ ಎಸ್.ಕೆ.ಬಸವರಾಜನ್ ರವರ ಸದ್ಯಂತರದಿಂದ ಚಿತ್ರದುರ್ಗ ಶ್ರೀಗಳಿಗೆ ಅವಮಾನಿಸಿ ಜೈಲು ಪಾರಾಗುವುದಕ್ಕೆ ಕುಮ್ಮಕ್ಕು ನೀಡಿದ್ದಾರೆ. ಚಿಕ್ಕಮಕ್ಕಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಮಕ್ಕಳಿಗೆ ಕಲಿಸಿ ಶ್ರೀಗಳ ವಿರುದ್ಧ ಕುತಂತ್ರ ಮಾಡಿದ್ದಾರೆ. ಇದಕ್ಕೆ ಬಸವರಾಜನ್‌ ಮುಖ್ಯ ಕೈವಾಡ ಇದೆ ಮುರುಘಾಮಠಕ್ಕೆ ಅವಮಾನ ಮಾಡಿ ಶ್ರೀಗಳಿಗೆ ಅವಮಾನ ಮಾಡಿ ಮುರುಘಾ ಮಠದ ಅನ್ನವನ್ನು ತಿಂದು ಮುರುಘಾಮಠಕ್ಕೆ ದ್ರೋಹ ಬಗೆದಿದ್ದಾರೆ. ಕಾಂಗ್ರೆಸ್‌ ಪಕ್ಷದ ಆಕಾಂಕ್ಷಿಯಾಗಿ 2123ನೇ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ಇವರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್‌ ಪಕ್ಷಕ್ಕೆ ಅವಮಾನವಾಗುತ್ತದೆ ಅಷ್ಟೇ ಅಲ್ಲ ಕಳಂಕ ಬರುತ್ತದೆ. ಇಂತಹವರಿಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಹುದ್ದೆಯನ್ನು ಕೊಡಬಾರದೆಂದು ಈ ರಾಜ್ಯದ ಜನರು ಹಾಗೂ ಕಡುಕ ಲಿಂಗಾಯತ ಧರ್ಮ ಮಹಾಸಭಾ ಆಶಯವಾಗಿದೆ ಎಂದು ಕಿರಣ ಖಂಡ್ರೆ , ಪ್ರಧಾನ ಕಾರ್ಯದರ್ಶಿ, ಲಿಂಗಾಯತ ಮಹಾಸಭಾ ಒಕ್ಕೂಟ, ಬೆಂಗಳೂರು, ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

Leave a comment

This site uses Akismet to reduce spam. Learn how your comment data is processed.