ಕಾನೂನನ್ನು ಉಲ್ಲಂಘಿಸಿ,ದಲಿತ ಹೆಣ್ಣು ಮಗಳಿಗೆ ನೋವುಂಟು ಮಾಡಿ ಮೋಸ ಮಾಡಿರುವ ರೂಪಾ ರವರ ಪತಿ ಪ್ರವೀಣ್ ಮತ್ತು ಕುಟುಂಬದವರ ವಿರುಧ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ

ಬೆಂಗಳೂರು ನಗರ ಜಿಲ್ಲೆ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬೇಗೂರು ಮುಖ್ಯರಸ್ತೆಯ ಭಗವತಿ ಗಾರ್ಮೆಂಟ್ಸ್ ಮಾಲೀಕರಾದ ದೇವೇಂದ್ರ @ ರಾಜು ಹಾಗೂ ರಾಜೇಶ್ವರಿ ಕೋಂ ದೇವೇಂದ್ರ ಮತ್ತು ಪ್ರವೀಣ್‌ರವರು ಬೆಂಗಳೂರು ಸಿಟಿ ಪ್ರಿನ್ಸಿಪಲ್ ಫ್ಯಾಮಿಲಿ ಕೋರ್ಟ್‌ ಎಂ.ಸಿ ನಂ 2249,72022 ನ್ನು ಉಲ್ಲಂಘಿಸಿ ದಲಿತ ಹೆಣ್ಣು ಮಗಳಿಗೆ ನೋವುಂಟು ಮಾಡಿ ಮರುಮದುವೆ ಮಾಡಿ ಕಾನೂನನ್ನು ಉಲ್ಲಂಘಿಸಿರುವ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಿಕಾಗೋಷ್ಠಿಯ ಮುಖಾಂತರ ತಿಳಿಸಿ ಅನುಕೂಲ ಕಲ್ಪಿಸಿಕೊಡಲು ಕೋರಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬೇಗೂರು ಮುಖ್ಯರಸ್ತೆಯ ಭಗವತಿ ಗಾರ್ಮೆಂಟ್ಸ್ ಮಾಲೀಕರಾದ ದೇವೇಂದ್ರ @ ರಾಜು ಹಾಗೂ ರಾಜೇಶ್ವರಿ ಕೋಂ ದೇವೇಂದ್ರ ಮತ್ತು ಪ್ರವೀಣ್‌ರವರು ಬೆಂಗಳೂರು ಸಿಟಿ ಪ್ರಿನ್ಸಿಪಲ್ ಫ್ಯಾಮಿಲಿ ಕೋರ್ಟ್ ಆದೇಶದ ಸಂಖ್ಯೆ ಎಂ.ಸಿ ನಂ. 2249/2022 ಅನ್ನು ಉಲ್ಲಂಘಿಸಿ ದಲಿತ ಹೆಣ್ಣು ಮಗಳಿಗೆ ನೋವುಂಟು ಮಾಡಿ ಮರುಮದುವೆ ಮಾಡಿ ಕಾನೂನನ್ನು ಉಲ್ಲಂಘಿಸಿರುವ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಿಕಾಗೋಷ್ಠಿಯ ಮುಖಾಂತರ ತಿಳಿಸಲು ದಿನಾಂಕ 4/2/2023 ರ ಶನಿವಾರದಂದು ಬೆಳಿಗ್ಗೆ 12:00 ಗಂಟೆಗೆ ಪತ್ರಿಕಾಗೋಷ್ಠಿಯ ಮೂಲಕ ನೊಂದ ರೂಪ ಕೋಂ ಪ್ರವೀಣ್ ರವರಿಗೆ ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟದಿಂದ ಪತ್ರಿಕಾಗೋಷ್ಠಿಯನ್ನು ಮಾಡಿ ರೂಪ ಹಾಗೂ ಅವರ ಪತಿಯಾದ ಪ್ರವೀಣ್ ರವರ ಸಂಸಾರಕ್ಕೆ ಮುಂಚೂಣಿಯನ್ನು ನೀಡದೆ ನಿರಾಕರಿಸಿರುವ ಪ್ರವೀಣ್‌ ರವರ ತಂದೆಯವರಾದ ದೇವೇಂದ್ರ ಹಾಗೂ ಅವರ ಪತ್ನಿ ರಾಜೇಶ್ವರಿ ರವರ ಮೇಲೆ ಕಾನೂನಿನಡಿಯಲ್ಲಿ ದೂರನ್ನು ದಾಖಲಿಸಲು ಅನುಕೂಲ ಕಲ್ಪಿಸಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜೈಭೀಮ್ ಅಖಿಲ ಭಾರತ ದಲಿತ ಕಿಯಾ ಸಮಿತಿಯ B.R.ಮುನಿರಾಜ, ರಾಷ್ಟ್ರೀಯ ಅಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

Leave a comment

This site uses Akismet to reduce spam. Learn how your comment data is processed.