
ಈ ಮೇಲಿನ ವಿಷಯಕ್ಕೆ ಸಂಬಂದಿಸಿದಂತೆ ಇಲಾಖೆಯಿಂದ ಮೊಬೈಲ್ಗಳನ್ನು ನೀಡಿ 4 ವರ್ಷವಾಗಿದ್ದು ಈಗ ಆ ಮೊಬೈಲ್ಗಳು ವರ್ಕ್ ಆಗದ ಕಾರಣ ಯಾವ ಕೆಲಸವನ್ನು ಮಾಡಲು ಆಗುವುದಿಲ್ಲ, ಎಲ್ಲಾ 6 ಸಂಘಟನೆಗಳು ಸೇರಿ ದಿನಾಂಕ 10-7-2023ರಂದು ಸರ್ಕಾರಕ್ಕೆ ವಾಪಾಸ್ಸು ಕೊಡುತ್ತಿದ್ದೇವೆ. ರಾಜ್ಯದ ಎಲ್ಲಾ ಕಾರ್ಯಕರ್ತೆಯರು ಏಕ ಕಾಲಕ್ಕೆ ಸಿ.ಡಿ.ಪಿ.ಒ. ಕಛೇರಿಗೆ ವಾಪಾಸ್ಸು ಕೊಡುವ ಮೂಲಕ ಸರ್ಕಾರಕ್ಕೆ ಕೊಡಲು ತೀರ್ಮಾನಿಸಿದ್ದೇವೆ. ಫೋನ್ ತೆಗೆದುಕೊಂಡು ಬೇರೆ ಫೋನ್ ಕೊಡುವವರೆಗೂ ಇನ್ನು ಮುಂದೆ ಪೋಷನ್ ಟ್ರ್ಯಾಕರ್ನಲ್ಲಿ ಯಾವುದೇ ದಾಖಲಾತಿಗಳನ್ನು ಆಕುವುದಿಲ್ಲ ಎಂದು ತಿಳಿಸುತ್ತೇವೆ.

ಎಲ್ಲಾ ಗೃಹಿಣಿಯರಿಗೆ ನೀಡುವ ಹಾಗೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಅನ್ವಯವಾಗುವುದು ಎಂದು ಬಜೆಟ್ನಲ್ಲಿ ಹೇಳಿದ್ದಾರೆ. ನಮಗೆ ಗೃಹಲಕ್ಷ್ಮಿ ಯೋಜನೆ ಬೇಡ ನಮಗೆ ಗೌರವಧನ ಆದೇಶವನ್ನು ಹೊರಡಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಂಗಳೂರಿನ ಅಧಿಕಾರಿಗೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆ ವತಿಯಿಂದ ಅನೇಕ ಕಾರ್ಯಕರ್ತೆಯರೊಂದಿಗೆ ಉಮಾಮಣಿ ಕೆ.ಎಲ್.-ರಾಜ್ಯಪ್ರಧಾನ ಕಾರ್ಯದರ್ಶಿಗಳು, ರಶ್ಮಿ.ಎನ್- ಅಧ್ಯಕ್ಷರು ಮತ್ತು ಧನಲಕ್ಷ್ಮಿ-ಖಜಾಂಚಿ ಗಳ ನೇತ್ರುತ್ವದಲ್ಲಿ ನೀಡಿದ ಮನವಿಯಲ್ಲಿ ತಿಳಿಸಲಾಯಿತು.
City Today News 9341997936
