ರಾಜ್ಯದ 436 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಇದೇ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದು, ಹಲವಾರು ವರ್ಷಗಳ ಕಾಲ ಸೇವೆಸಲ್ಲಿಸದ್ದರು ರಾಜ್ಯ ಸರ್ಕಾದ ಇತರೇ ಇಲಾಖೆಯ ನೌಕರರಂತೆ ನಮಗೆ ಸೇವಾ ಖಾಯಂ ಸಿಗದೆ ನಿರಂತರವಾಗಿ ಬೇರೆ ಬೇರೆ ಸರ್ಕಾರಗಳಿಂದ ವಂಚನೆಗೆ ಒಳಗಾಗಿ ಶೋಷಣೆಯಿಂದ ಕೂಡಿದ ಉದ್ಯೋಗವನ್ನು ಮಾಡುವಂತಾಗಿದೆ. ಇದರಿಂದ ಮುಕ್ತವಾಗಲು ಸೇವಾಖಾಯಂಗಾಗಿ ಅನಿರ್ದಿಷ್ಟ ಅವಧಿ (ಹನ್ನೆರಡು ತಿಂಗಳ ವೇತನದೊಂದಿಗೆ ಖಾಯಂ ಮಾಡುವವರೆಗೆ) ವರೆಗೆ ಸಾಮೂಹಿಕ ನಾಯಕತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುತ್ತಿದ್ದೇವೆ.
ಈ ಹೋರಾಟವು ದಿನಾಂಕ : 05-09-2023 ರಂದು ಬೆಳಗ್ಗೆ 11-00 ಗಂಟೆಗೆ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಸುಮಾರು 4000 ದಿಂದ 5000 ಜನ ಅತಿಥಿ ಉಪನ್ಯಾಸಕರು ಅನಿರ್ದಿಷ್ಟ ಅವಧಿ(ಖಾಯಂ ಮಾಡಿ ಹನ್ನೆರಡು ತಿಂಗಳ ವೇತನ ಕೊಡುವವರೆಗೆ) ವರೆಗೆ ಅಹೋರಾತ್ತಿ ಧರಣಿ ಸತ್ಯಾಗ್ರಹವನ್ನು ನಡೆಸಲು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಕ್ಕುಗಳ ಹೋರಾಟ ರಾಜ್ಯ ಸಮಿತಿಯ ಸಭೆಯಲ್ಲಿ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ತೀರ್ಮಾನ ಕೈಗೊಂಡಿದ್ದಾರೆ. ಆದ್ದರಿಂದ ಅನಿರ್ದಿಷ್ಟ ಅವಧಿವರೆಗೆ ಅಹೋರಾತ್ರಿ ಧರಣಿ ನಡೆಸುವ ಮೂಲಕ ಕಾನೂನು ಪ್ರಕಾರ ತಮ್ಮ ಹಕ್ಕುಗಳನ್ನು ಪಡೆಯಲು, ಅತಿಥಿ ಎಂಬ ಜೀತ ಪದ್ಧತಿಯಿಂದ ವಿಮುಕ್ತಿ ಹೊಂದಲು ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅತಿಥಿ ಉಪನ್ಯಾಸಕಿಯರು ಭಾಗವಹಿಸುತ್ತಿರುವುದರಿಂದ ರಾಜ್ಯದ ಟಿವಿ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಸುದ್ದಿಯನ್ನು ಪ್ರಕಟಿಸಲು ಪತ್ರಿಕಾ ಗೋಷ್ಟಿ .

ಬೇಡಿಕೆಗಳು :
1. ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಗೊಳಿಸುವುದಕ್ಕೆ ತಕ್ಷಣವೇ ಕ್ಯಾಬಿನೆಟ್ನಲ್ಲಿ ನಿರ್ಣಯ ಮಾಡುವುದು.
ಖಾಯಂಗೊಳಿಸುವವರೆಗೆ ತಕ್ಷಣವೇ ಈ ಕೆಳಕಂಡ ಬೇಡಿಕೆಯನ್ನು ಈಡೇರಿಸುವುದು
2, 12 ತಿಂಗಳ ವೇತನವನ್ನು ಕೊಡುವುದು ಮತ್ತು ತಿಂಗಳಿಗೆ ಒಂದು ರಜಾ ಸೌಲಭ್ಯ ಕಡ್ಡಾಯವಾಗಿ ಒದಗಿಸುವುದು
3, 2022-23 ನೆಯ ಸಾಲಿನಲ್ಲಿ ಆಯ್ಕೆಗೊಂಡ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರಿಗೆ (ಅವೈಜ್ಞಾನಿಕವಾದ ವಿಶ್ವವಿದ್ಯಾನಿಲಯಗಳ ಕ್ಯಾಲೆಂಡರ್ ಆಫ್ ಇವೆಂಟ್ ಪ್ರಕಾರ ಬಿಡುಗಡೆ ಮಾಡಿರುವುದನ್ನು ರದ್ದುಪಡಿಸಿ) ಜುಲೈ, ಆಗಸ್ಟ್, ಸೆಪ್ಟೆಂಬರ್ 2023ನ್ನು ಸೇವಾ ಅವಧಿಯೆಂದು ಪರಿಗಣಿಸಿ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಗೌರವಧನ ಕೊಡುವುದು.
4. ನೇಮಕಾತಿ ಆದೇಶದಲ್ಲಿ ಅತಿಥಿ ಉಪನ್ಯಾಸಕರ ಶೋಷಣೆಗೆ ಕಾರಣವಾಗಿರುವ ಷರತ್ತುಗಳನ್ನು ತೆಗೆದು ಹಾಕುವುದು (ಉದಾಹರಣೆಗೆ ಪ್ರಾಂಶುಪಾಲರು ವಹಿಸುವ ಇತರೇ ಕಾರ್ಯವನ್ನು ಕಡ್ಡಾಯವಾಗಿ ನಿರ್ವಹಿಸುವುದು ಮತ್ತು ವಿಶ್ವವಿದ್ಯಾನಿಲಯದ ಕ್ಯಾಲೆಂಡರ್ ಆಫ್ ಇವೆಂಟ್ ಪ್ರಕಾರ ಬಿಡುಗಡೆಗೊಳಿಸುವುದು ಮೌಲ್ಯಮಾಪನ ಕಾರ್ಯ ಸಂದರ್ಭದ ವೇತನ ಕಡಿತ, ಇನ್ನು ಇತರೆ)
5. ಕಾರ್ಯಭಾರ ಕೊರತೆ, ವರ್ಗಾವಣೆ, ನಿಯೋಜನೆಗಳಿಂದ ಅತಿಥಿ ಉಪನ್ಯಾಸಕರಿಗೆ ತೊಂದರೆ ಉಂಟಾದರೆ ಕಾರ್ಯಭಾರ ಲಭ್ಯವಾಗುವರೆಗೆ ಬಿಡುಗಡೆ ಮಾಡದೇ ಇತರೆ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಂಡು ಸೇವೆಯಲ್ಲಿ ಮುಂದುವರಿಸುವುದು.
6. ಪ್ರತಿ ವರ್ಷ ಶೈಕ್ಷಣಿಕ ವರ್ಷ 5-6 ತಿಂಗಳಿಗೊಮ್ಮೆ ಕೌನ್ಸಲಿಂಗ್ ಮಾಡುವುದನ್ನು ಬಿಟ್ಟು ಒಮ್ಮೆ ಮಾತ್ರ ವ್ಯವಸ್ಥಿತವಾಗಿ ಮಾಡುವುದು ಮತ್ತು ಪದೇ ಪದೇ ದಾಖಲೆಗಳ ಪರಿಶೀಲಿಸುವುದನ್ನು ಬಿಟ್ಟು ಶಾಶ್ವತವಾಗಿ ಒಮ್ಮೆಗೆ ಮಾತ್ರ ನೈಜತೆಯನ್ನು ಪರಿಶೀಲಿಸುವುದು ಎಂದು ಡಾ||ನೂರ್ ಅಹಮ್ಮದ್ ಎಂ.ಬಿ -ರಾಜ್ಯಾಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು
ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಆರ್.ಶಂಕ್ರಾನಾಯ್ಕ ನೆಲ್ಲಿಹಂಕಲು-ಕಾರ್ಯಾಧ್ಯಕ್ಷರು, || ಶರಣಮ್ಮ ಪಾಟೀಲ್ – ಮಹಿಳಾ ಅಧ್ಯಕ್ಷರು ಮತ್ತು ಡಾ|| ಮುನಿಯಪ್ಪ ಮಾಧ್ಯಮ ಪಕ್ತಾರರು ಉಪಸ್ತಿತಿಯಿದ್ದರು.
City Today News 9341997936
