ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಇದ್ದಂತಹ ಮಣಿಪಾಲ್ ಆಸ್ಪತ್ರೆ ಮತ್ತು ಸಕ್ತಾ ವರ್ಲ್ಡ್ ಹೈ ಆಸ್ಪತ್ರೆಯನ್ನು ತೆಗೆದಿದ್ದು, ಮನಃ ಸೇರ್ಪಡಿಸಲು ಕೋರಿ ಮನವಿ.

ಬಾಣಸವಾಡಿ ಪೋಲಿಸ ಠಾಣೆ ಮತ್ತು ಬೆಂಗಳೂರು ನಗರದ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ನೇತೃತ್ವದಲ್ಲಿ ಮನವಿ.

ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಗಳ
ಪ್ರತಿ ತಿಂಗಳು ವೇತನದಲ್ಲಿ ಆರೋಗ್ಯ ಭಾಗ್ಯ ಯೋಜನಗೆ ಸಂಬಂಧಪಟ್ಟಂತೆ ಹಣ ಕಡಿತವಾಗುತ್ತಿದ್ದು ನಮಗೆ ಹಾಗೂ ನಮ್ಮ ಕುಟುಂಬದವರಿಗೆ ಆರೋಗ್ಯ ಸಮಸ್ಯೆಯಾದಾಗ ನಮಗೆ ಹತ್ತಿರದಲ್ಲಿರುವ ಬೆಂಗಳೂರು ನಗರದಲ್ಲಿರುವಂತಹ ಎಚ್.ಎ.ಎಲ್ ರಸ್ತೆಯ ಮಣಿಪಾಲ್ ಆಸ್ಪತ್ರೆ, ಸಕ್ರಾ ಆಸ್ಪತ್ರೆ ಮಾರತಹಳ್ಳಿ,ಹೆಬ್ವಾಳದ ಬ್ಯಾಪಿಸ್ಟ ಆಸ್ಪತ್ರೆ,ಇಂದಿರಾನಗರದ ಚಿನ್ಮಯ ಆಸ್ಪತ್ರೆ,ವಸಂತ ನಗರದ ಮಹಾವೀರ ಜೈನ ಆಸ್ಪತ್ರೆ, ಹಾಗೂ ಇನ್ನೂ ಪ್ರಮುಖ ದೊಡ್ಡ ಆಸ್ಪತ್ರೆಗಳಲ್ಲಿ ಒಂದು ವರ್ಷದ ಹಿಂದಿನಿಂದ ಚಿಕಿತ್ಸೆ ನೀಡುತ್ತಿಲ್ಲ ಚಿಕಿತ್ಸೆ ನೀಡಿ ಎಂದು ಆಡಳಿತ ಮಂಡಳಿಯವರ ಹತ್ತಿರ ಹೋಗಿ ಕೇಳಿದಾಗ ಮಣಿಪಾಲ್ ಆಸ್ಪತ್ರೆ ಆಡಳಿತ ಮಂಡಳಿಯವರು ಮಾನ್ಯರ ಕಛೇರಿಯಿಂದ ಸುಮಾರು 5 ಕೋಟಿ 6 ಕೋಟಿ ರೂ ಗಳ ಹಣವನ್ನು ಪಾವತಿ ಮಾಡದೇ ಬಾಕಿ ಉಳಿಕೊಂಡಿರುವುದಾಗಿ ತಿಳಿಸಿರುತ್ತಾರೆ ಹಾಗೂ ಬೆಂಗಳೂರು ನಗರದ ಆಸ್ಪತ್ರೆಗಳಲ್ಲಿ ಬಾಕಿ ಹಣ ಪಾವತಿ ಆಗಿರುವುದಿಲ್ಲ ಆದ್ದರಿಂದ ಕೂಡಲೇ ನಮ್ಮ ಕುಟುಂಬಗಳಿಗೆ ಆರೋಗ್ಯ ಸಮಸ್ಯೆ ಆದಾಗ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡಿಸಬೇಕು ಎಂದು ಮಾನ್ಯ ಗೃಹ ಮಂತ್ರಿಗಳು,ಮಾನ್ಯ ಕರ್ನಾಟಕ ರಾಜ್ಯಪೋಲಿಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಆಯುಕ್ತರು ಬೆಂಗಳೂರು ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತೇವ ಎಂದು ತಿಳಿಸಿರುತ್ತಾರೆ

City Today News 9341997936

Leave a comment

This site uses Akismet to reduce spam. Learn how your comment data is processed.