ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ ವತಿಯಿಂದ ತುಮಕೂರು ಜಿಲ್ಲಾ ಕ್ಷೇತ್ರಕ್ಕೆ ಸನ್ಮಾನ್ಯ ಶ್ರೀ ಮಾಧುಸ್ವಾಮಿ ಜೆ.ಸಿ. ರವರಿಗೂ ಮತ್ತು ಹಾವೇರಿ ಜಿಲ್ಲಾ ಕ್ಷೇತ್ರಕ್ಕೆ ಶ್ರೀ ಸಂದೀಪ್ ಪಾಟೀಲ್ ರವರಿಗೂ ಎಂ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಡಲು ಮನವಿ

ಮುಂಬರುವ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ ವತಿಯಿಂದ ತುಮಕೂರು ಜಿಲ್ಲಾ ಕ್ಷೇತ್ರಕ್ಕೆ ಸನ್ಮಾನ್ಯ ಶ್ರೀ ಮಾಧುಸ್ವಾಮಿ ಜೆ.ಸಿ. ರವರಿಗೂ ಮತ್ತು ಹಾವೇರಿ ಜಿಲ್ಲಾ ಕ್ಷೇತ್ರಕ್ಕೆ ಶ್ರೀ ಸಂದೀಪ್ ಪಾಟೀಲ್ ರವರಿಗೂ ಎಂ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಕೋರುವ ಬಗ್ಗೆ:

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕದಾದ್ಯಂತ 14 ಜಿಲ್ಲೆಗಳಲ್ಲಿ ಸುಮಾರು 25 ರಿಂದ 30 ಲಕ್ಷ ಮತದಾರರಿರುವ ನಮ್ಮ ಸಮಾಜದ ಆಶಯವೇನೆಂದರೆ,

ತುಮಕೂರು ಲೋಕಸಭಾ ಕ್ಷೇತ್ರವನ್ನು ನಮ್ಮ ಸಮಾಜಕ್ಕೆ ಸೇರಿದ ದಿ। ಶ್ರೀ ಎಸ್. ಮಲ್ಲಿಕಾರ್ಜುನಯ್ಯನವರು ಮತ್ತು ಶ್ರೀ ಜಿ.ಎಸ್‌. ಬಸವರಾಜುರವರು ಪ್ರತಿನಿಧಿಸುತ್ತಿದ್ದರು. ಹಾಲಿ ಸಂಸದರಾದ ಶ್ರೀ ಜಿ.ಎಸ್. ಬಸವರಾಜುರವರು ಅನಾರೋಗ್ಯದ ನಿಮಿತ್ತ ಸ್ಪರ್ಧಿಸಲು ನಿರಾಕರಿಸಿರುತ್ತಾರೆ. ಆದುದರಿಂದ ಸಮಾಜದ ಪ್ರತಿನಿಧಿಯಾದ,

ನಿಕಟ ಪೂರ್ವ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರು, ಒಳ್ಳೆ ಸಂಸದೀಯ ಪಟು ವಾಳ್ಮೆಗಳು, ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಕೆರೆ, ಕಟ್ಟೆಗಳಿಗೆ ನೀರನ್ನು ಹರಿಸಿ ಅಚ್ಚ ಹಸಿರಾಗಿಸಿರುವ ಕೀರ್ತಿ ಪಡೆದವರು, ನಿಷ್ಠಾವಂತ 

ಸಮಾಜ ಸೇವಕರು, ಪಕ್ಷದ ಶಿಸ್ತಿನ ಸಿಪಾಯಿಗಳು, ಜಾತ್ಯಾತೀತರು ಹಾಗು ಜನ ಸಾಮಾನ್ಯರಿಗೆ ಹತ್ತಿರರಾಗಿರುವ ಶ್ರೀ ಜೆ.ಸಿ. ಮಾಧುಸ್ವಾಮಿ ರವರಿಗೆ

ಹಾಗೂ

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟಿನ ಖ್ಯಾತ ವಕೀಲರು, ಯುವ ನಾಯಕರು, ವಾತ್ಮಗಳು, ಉತ್ಸಾಹ ಶೀಲ ತರುಣರು, ಸಂಘಟನಾ ಚತುರರು, ಸಮಾಜ ಸೇವಕರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಹಾವೇರಿ ಜಿಲ್ಲೆಯ ಜನಾನುರಾಗಿಗಳಾಗಿ ಜನ-ಮನದಲ್ಲಿ ಹೆಸರಾಗಿರುವ ಹಾಗೂ ಹೆಸರಾಂತ ಕಾನೂನು ತಜ್ಞರಾದ ಶ್ರೀ ಸಂದೀಪ್ ಪಾಟೀಲ್ ರವರಿಗೂ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲೆ ಮತ್ತು ಹಾವೇರಿ ಜಿಲ್ಲೆಯಿಂದ ಎಂ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಲು ತಾವು ಅವಕಾಶ ಮಾಡಿಕೊಡಲು ಈ ಮೂಲಕ ನೊಳಂಬ ಲಿಂಗಾಯತ ಸಂಘದಿಂದ ಹಾಗೂ ಸಮಾಜ ಬಾಂಧವರ ಪರವಾಗಿ ತಮ್ಮಲ್ಲಿ ಹೃದಯ ಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಎಸ್.ಆರ್. ಪಾಟೀಲ್‌) ಅಧ್ಯಕ್ಷರು ನೊಳಂಬ ಲಿಂಗಾಯತ ಸಂಘ (ರಿ) ಬೆಂಗಳೂರು  ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

Cuty Today News 9341997936

Leave a comment

This site uses Akismet to reduce spam. Learn how your comment data is processed.