
1. ನೀತಿ ಸಂಹಿತೆ: ಘೋಷಣೆ ಆದಂದಿನಿಂದ ದೇಶಾದ್ಯಂತ ರಾಷ್ಟ್ರಪತಿ/ರಾಜ್ಯಪಾಲರ ಆಡಳಿತ ಜಾಲ ಮಾಡಿ ಸಾರ್ವಜನಿಕರ ಸಾವಿರಾರು ಕೋಟಿ ಜನರ ತೆರಿಗೆ ಹಣ ಪ್ರಧಾನಿ ಕೇಂದ್ರ ಸಚಿವರುಗಳು, ಮುಖ್ಯಮಂತ್ರಿ ಸಚಿವರುಗಳ ಅಧಿಕಾರದ ದುರ್ಬಳಕೆ, ಪ್ರವಾಸ, ವಾಸ್ತವ್ಯ,ಭದ್ರತೆ, ಇತರೆ ಭತ್ಯೆಗಳು ಚುನಾವಣೆ ಕಾರ್ಯಕ್ಕೆ ದುಂದು ವೆಚ್ಚವಾಗುವುದನ್ನು ದೇಶಕ್ಕೆ ಉಳಿತಾಯ ಮಾಡಬೇಕು. ಚುನಾವಣೆ ಕಾರ್ಯ ಮುಗಿದ ನಂತರ ರಾಷ್ಟ್ರಪತಿ ಆಡಳಿತ ರದ್ದುಗೊಳಿಸಿ ಹೊಸ ಸರ್ಕಾರ ರಚನೆ ಆಗಬೇಕು.
2. ಮಾಜಿ MLA, MLC KPSC ನಿವೃತ್ತ ಅಧ್ಯಕರು ಮತ್ತು ಸದಸ್ಯರು….ಗಳಿಗೆ ಕೊಡುತ್ತಿರುವ ನಿವೃತ್ತಿ ವೇತನ, ವೈದ್ಯಕೀಯ ಸೌಲಭ್ಯ ಮುಂತಾದ ಇತರೆ ಸೌಲಭ್ಯಗಳನ್ನು ನಿಲ್ಲಿಸಬೇಕು. ಕಾರಣ ಯಾವ ನಿವೃತ್ತ ರಾಜಕಾರಣಿಗಳು ಬಡವರ ತೆರಿಗೆ. ಹಣದಿಂದ ಜೀವಿಸುವಷ್ಟು ಬಡವರಾಗಿಲ್ಲ.
3. ಕಾರಣ ಚುನಾವಣಾ ಆಯೋಗ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ನಿಗಧಿ ಪಡಿಸಿದ್ದರೂ ಸಹ ವಾಮ ಮಾರ್ಗದಿಂದ ಯವುದೇ ಚುನಾವಣೆಗಳಲ್ಲಿ ಚುನಾವಣಾ ಆಯೋಗ ನಿಗಧಿಪಡಿಸಿದ್ದಕ್ಕಿಂತ 100-150 ಪಟ್ಟು ಹೆಚ್ಚು ಖರ್ಚು ಮಾಡಿ ಚುನಾವಣೆ ಮುಗಿದ ನಂತರ ಚುನಾವಣಾ ಆಯೋಗ ನಿಗಧಿಪಡಿಸಿದ ವೆಚ್ಚಕ್ಕೆ ಸರಿಯಾಗಿ ಸುಳ್ಳು ಲೆಕ್ಕ ಕೊಡುತ್ತಾರೆ. ಚುನಾವಣಾ ಆಯೋಗ ಒಪ್ಪಿಕೊಳ್ಳುತ್ತದೆ.
4. ಸಭೆ ಸಮಾರಂಭ, ರ್ಯಾಲಿಗಳನ್ನು ನಡೆಸಲು ಅನುಮತಿ ಕೊಡಬಾರದು, ಇದರಿಂದ ಜಾತಿ ಬಲ, ಹಣಬಲ ತೋಳ್ಳಲ ಮುಂತಾದವುಗಳಿಂದ ವೃಥಾ ಪರ್ಷಣೆಗಳು ತಪ್ಪುತ್ತವೆ. ಇದರಿಂದ ಸಾರ್ವಜನಿಕರು ನೆಮ್ಮದಿಯಿಂದಿರುತ್ತಾರೆ. ಯಾವುದೇ ರೀತಿಯಿಂದಲೂ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ.
5. ಲೋಕಸಭೆ/ವಿದಾನಸಭೆ ಚುನಾವಣಾ ಕ್ಷೇತ್ರಗಳ ಮೀಸಲಾತಿಯ ಅವಧಿಯನ್ನು ಕನಿಷ್ಠ ಎರಡು ಅವಧಿಗೆ(10ವರ್ಷ) ನಿಗಧಿಗೊಳಿಸಬೇಕು.
6. ಚುನಾವಣಾ ಆಯೋಗವೇ ಚುನಾವಣೆಗೆ ನಿಂತ ಅಭ್ಯರ್ಥಿಗಳಿಂದ ನಿಗಧಿತ ಶುಲ್ಕ ವಸೂಲ್ಯಾಡಿ ಸರ್ವಪಕ್ಷಗಳ ಅಭ್ಯರ್ಥಿಗಳು ದೃಶ್ಯಮಾಧ್ಯಮದ ಮೂಲಕ ಅವರವರ ಪಕ್ಷದ ಕಾಠ್ಯಕ್ರಮಗಳನ್ನು ಪ್ರಚಾರಪಡಿಸಿ, ಮತಕೇಳಲು ಸಂವಾದ ಕಾರ್ಯಕ್ರಮಗಳನ್ನು ಚುನಾವಣಾ ಆಯೋಗವೇ ವ್ಯವಸ್ಥೆ ಮಾಡುವ ಮೂಲಕ ಎಲ್ಲ ಅಭ್ಯರ್ಥಿಗಳಿಗೂ ಸರ್ವ ಸಮಾನ ಅವಕಾಶ ಕಲ್ಪಿಸಿಕೊಡಬೇಕು ಎಂದು ಕರ್ನಾಟಕ ಸ್ವಾಭಿಮಾನಿ ರೈತರ, ಕಾರ್ಮಿಕರ ಪಕ್ಷ (ರಿ)ದ ವತಿಯಿಂದ ಮನವಿ ಎಂದು ಅಧ್ಯಕ್ಷರು-ಜಿ.ಎಸ್. ನಾಗರಾಜ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಭರತ್ ರಾಜ್, ವಕೀಲರು ಮತ್ತು ವಸಂತ್, ಸಂಚಾಲಕರು ಉಪಸ್ಥಿತರಿದ್ದರು.
City Today News 9341997936
