
ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ 9-4-2024 ಮಂಗಳವಾರ ಬೆಳಗ್ಗೆ ರಾಯರ ಬೃಂದಾವನಕ್ಕೆ ಅರ್ಚಕರಾದ ಕೃಷ್ಣಾಚಾರ್ , ರಾಮಾಚಾರ್ ಇವರಿಂದ ತೈಲಾಭ್ಯಂಜನ , ಫಲಪಂಚಾಮೃತ ಅಭಿಷೇಕ ನವರತ್ನ ಕವಚದ ಅಲಂಕಾರ ಹಾಗೂ ಪಲ್ಲಕ್ಕಿ ಉತ್ಸವ ಗಜ ವಾಹನ ಉತ್ಸವ ರಥೋತ್ಸವ ದೊಂದಿಗೆ ಮಂಗಳಾರತಿಯು ನೆರವೇರಿತು , ತದನಂತರದಲ್ಲಿ ಸಾಯಂಕಾಲ 6:30ಕ್ಕೆ ಹೊಸ ವರ್ಷದ “ಪಂಚಾಂಗ ಶ್ರವಣ” ವನ್ನು ವಿದ್ವಾನ್- ಅಗ್ನಿಹೋತ್ರಿ ವೇಣು ಗೋಪಾಲಾಚಾರ್ಯರು ನಡೆಸಿ ಕೊಟ್ಟೂರು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು ಈ ಸಂದರ್ಭದಲ್ಲಿ ನೂರಾರು ಭಕ್ತರು ಎಲ್ಲಾ ಕಾರ್ಯಕ್ರಮದ ಶ್ರೀ ಗುರು ರಾಯರ ಸೇವೆಯಲ್ಲಿ ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.
City Today News 9341997936
