ಹೊಸ ವರ್ಷದ ಯುಗಾದಿ ಹಬ್ಬದ ಪ್ರಯುಕ್ತ ರಾಯರ ಬೃಂದಾವನಕ್ಕೆ ವಿಶೇಷ “ರತ್ನ ಕವಚದ ಅಲಂಕಾರ” ಉತ್ಸಗಳು ಮತ್ತು ವಿದ್ವಾನ್ -ಅಗ್ನಿಹೋತ್ರಿ ವೇಣುಗೋಪಾಲ ಆಚಾರ್ಯ ರಿಂದ “ಪಂಚಾಂಗ ಶ್ರವಣ”

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ 9-4-2024 ಮಂಗಳವಾರ ಬೆಳಗ್ಗೆ ರಾಯರ ಬೃಂದಾವನಕ್ಕೆ ಅರ್ಚಕರಾದ  ಕೃಷ್ಣಾಚಾರ್ , ರಾಮಾಚಾರ್ ಇವರಿಂದ ತೈಲಾಭ್ಯಂಜನ , ಫಲಪಂಚಾಮೃತ ಅಭಿಷೇಕ ನವರತ್ನ ಕವಚದ ಅಲಂಕಾರ ಹಾಗೂ ಪಲ್ಲಕ್ಕಿ ಉತ್ಸವ ಗಜ ವಾಹನ ಉತ್ಸವ ರಥೋತ್ಸವ ದೊಂದಿಗೆ ಮಂಗಳಾರತಿಯು ನೆರವೇರಿತು , ತದನಂತರದಲ್ಲಿ ಸಾಯಂಕಾಲ 6:30ಕ್ಕೆ ಹೊಸ ವರ್ಷದ “ಪಂಚಾಂಗ ಶ್ರವಣ” ವನ್ನು ವಿದ್ವಾನ್- ಅಗ್ನಿಹೋತ್ರಿ ವೇಣು ಗೋಪಾಲಾಚಾರ್ಯರು ನಡೆಸಿ ಕೊಟ್ಟೂರು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು ಈ ಸಂದರ್ಭದಲ್ಲಿ ನೂರಾರು ಭಕ್ತರು ಎಲ್ಲಾ ಕಾರ್ಯಕ್ರಮದ ಶ್ರೀ ಗುರು ರಾಯರ ಸೇವೆಯಲ್ಲಿ  ಭಾಗವಹಿಸಿ ಶ್ರೀ  ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

Leave a comment

This site uses Akismet to reduce spam. Learn how your comment data is processed.