
ಸ್ವತಂತ್ರ ಭಾರತ ದೇಶದ ಸತ್ಪಜೆಗಳಾದ ನಾವು, ನಾಡು-ನುಡಿ, ನೆಲ-ಜಲ, ದೇಶ, ಭಾಷೆ, ಸಂಸ್ಕೃತಿ, ಸಂಪತ್ತುಗಳ ವಿಚಾರದಲ್ಲಿ ಆರಂಭ ಕಾಲದಿಂದಲೂ ಅಮಾಯಕರಾಗಿ ಯಾಮಾರುತ್ತಾ, ಮರುಳಾಗುತ್ತಾ, ಎಡವುತ್ತಾ ಬಂದಿರುವುದು ದೇಶದ ದುರ್ದೈವದ ಸಂಗತಿ. ಅದರ ಫಲವಾಗಿ ಸವಾಲಕ್ಷ ದುಷ್ಟ ಶಕ್ತಿಗಳ ಕುಟಿಲ, ಕುತಂತ್ರ ದುರ್ಮಾರ್ಗಗಳಿಗೆ ಮುಪ್ಪಾಲು ದೇಶವನ್ನು ಹಾಗೂ ದೇಶದ ಸಂಪತ್ತುಗಳನ್ನು ಕಳೆದುಕೊಂಡದ್ದಾಗೋಗಿದೆ.
ಉಳಿದದ್ದನ್ನಾದರೂ ಭದ್ರಪಡಿಸಿ ಕಳೆದುಕೊಂಡದ್ದನ್ನೆಲ್ಲಾ ಮತ್ತೆ ಗಳಿಸಿ ದೇಶದ ಉತ್ತಮ ಅಳ್ವಿಕೆ, ಆಡಳಿತದ ಜೊತೆಗೆ ಸನಾತನ ಧರ್ಮಗಳನ್ನು ಮೆರೆಯುತ್ತ ದೇಶವನ್ನು ವಿಶ್ವಗುರುವನ್ನಾಗಿ ಮಾಡಲು ಹೊರಟಿರುವ ಶ್ರೀ ನರೇಂದ್ರ ಮೋದಿಜಿರವರಿಗೆ ಶಕ್ತಿ ತುಂಬಲು ಹಾಗೂ ಅವರನ್ನು ಬಲಪಡಿಸಿ ಮತ್ತೆ ಪ್ರಧಾನಿಯನ್ನಾಗಿ ಮಾಡಲು ನಮ್ಮ ಅಮಾಯಕತ್ವ ಉತ್ತಮ ತತ್ವಗಳನ್ನು ಬದಿಗಿಟ್ಟು, ನಾಡಿನ ಹಾಗೂ ದೇಶದ ಪ್ರಜೆಗಳು ಮತ್ತು ಮತದಾರರಿಗೆ ಎಡವದೇ, ಮೈ ಮರೆಯದೇ ಬಿಜೆಪಿ ಮತ್ತು ಜೆಡಿಎಸ್ ಮಿತ್ರ ಪಕ್ಷಗಳಿಗೆ ಮತ ಹಾಕುವಂತೆ ಎಚ್ಚರಿಕೆಯ ಸಂದೇಶ ರವಾನಿಸಲು ತಮ್ಮಲ್ಲಿ ಸವಿನಯ ಮನವಿ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಬಿಜೆಪಿ, ಜೆಡಿಎಸ್ ಮಿತ್ರಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಪರವಾಗಿ ಕೃಷ್ಣರಾಜಪ್ಪ ತಿಳಿಸಿದರು. ಗೋಷ್ಠಿ ಯಲ್ಲಿ ರವೀಂದ್ರ ನಾಯ್ಡು, ರೂಪ ಕುಮಾರ್, ದನಶೇಖರ್ ಮತ್ತು ಮುನಿರಾಜು ಉಪಸ್ಥಿತರಿದ್ದರು.
City Today News 9341997936
