
ಶ್ರೀ ಗುರುರಾಯರ ಸನ್ನಿಧಿಯಲ್ಲಿ “ಗರಳಪುರಿ ವನಿತೋತ್ಸವ” ಮತ್ತು “ದೇವ ದರ್ಶನ” ನಾಟಕ ರಾಯರ ಪೂರ್ವಾಶ್ರಮದ ವಂಶಿಕರಿಂದ ಜಯನಗರ 5ನೇ ಬಡಾವಣೆಯ ನಂಜನಗೂಡುಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಾಚಾರ್ಯರ ನೇತೃತ್ವದಲ್ಲಿ “ಗರಳಪುರಿ ವನಿತೋತ್ಸವ” ಎಂಬ ವಿಶೇಷವಾದ ಶೀರ್ಷಿಕೆಯ ಅಡಿಯಲ್ಲಿ ಶ್ರೀ ಶ್ರೀ ಸುಶಮೀಂದ್ರ ಸೇವಾ ಪ್ರತಿಷ್ಠಾನದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ವಂಶಿಕರಾದ ಔರಸ, ದೌಹಿತ್ರ ಸಂತತಿಯ 150ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯರು ಮತ್ತು ಕಿರಿಯರು ಸೇರಿ “ಆಧ್ಯಾತ್ಮಿಕ- ಸಾಂಸ್ಕೃತಿಕ-ಕಾರ್ಯಕ್ರಮವಾದ, ಕೋಲಾಟ ನೃತ್ಯ “ದಾಸವಾಣಿ”, “ರಂಗೋಲಿ ಸ್ಪರ್ಧೆ” ಆಶುಭಾಷಣ ಸ್ಪರ್ಧೆ””ದೇವ ದರ್ಶನ” ಎಂಬ ಭಾರತದ 6 ಪುಣ್ಯಕ್ಷೇತ್ರಗಳ ಮಹಿಮೆಯನ್ನು ಅತ್ಯಂತ ಸುಂದರವಾಗಿ ಚಿಕ್ಕ ಮಕ್ಕಳಿಂದಲೂ ರೂಪಕದ ಮೂಲಕ ಹೊಸ ಪ್ರಯತ್ನದೊಂದಿಗೆ ಕಾರ್ಯಕ್ರಮಗಳು ವಿಶೇಷವಾಗಿ ನೆರವೇರಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ ರಾಜಾ ಶ್ರೀ ಬಂಡಿಆಚಾರ್ಯರು, ವಿದ್ಯಾವಾಚಸ್ಪತಿ ಡಾ||ಅರಳುಮಲ್ಲಿಗೆ ಪಾರ್ಥಸಾರಥಿ, ಶ್ರೀಮಠದಹಿರಿಯ ವ್ಯವಸ್ಥಾಪಕ ರಾಜಾ ಕೆ. ವಾದಿಂದ್ರಾಚಾರ್ , ಶ್ರೀ ಕೃಷ್ಣ ಗುಂಡಾಚಾರ್ಯರು ಮತ್ತು ಶ್ರೀ ಶ್ರೀ ಸುಶಮಿಂದ್ರ ಸೇವಾ ಪ್ರತಿಷ್ಠಾನ ಸದಸ್ಯರು, ಹಲವಾರು ಗಣ್ಯರು, ಶ್ರೀಮಠದ ಸಿಬ್ಬಂದಿಗಳು ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
City Today News 9341997936
