“ಲೋಕ-ಕಲ್ಯಾಣಕ್ಕಾಗಿ ಪ್ರಾರ್ಥನೆ” ಮಂತ್ರಾಲಯ ಶ್ರೀಸುಬುಧೇಂದ್ರ ಶ್ರೀಗಳಿಂದ  ಶ್ರೀಮನ್ ಮೂಲರಾಮಚಂದ್ರ ದೇವರ ಸಂಸ್ಥಾನ ಪೂಜೆ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂತ್ರಾಲಯದ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಈ ದಿನ ತಮ್ಮ ಅಮೃತ ಹಸ್ತದಿಂದ “ಲೋಕಕಲ್ಯಾಣಕ್ಕಾಗಿ”ಶ್ರೀ ಶ್ರೀಮನ್  ಮೂಲ ರಾಮಚಂದ್ರ ದೇವರ ಪೂಜೆಯೊಂದಿಗೆ ಪ್ರಾರ್ಥನೆ ಸಲ್ಲಿಸಿ ನಂತರ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಪಾದಕ್ಕೆ ಪಾದ ಪೂಜೆ  ಮತ್ತು ರಾಯರ ಬೃಂದಾವನಕ್ಕೆ ಮಹಾಮಂಗಳಾರತಿಯನ್ನು ನೆರವೇರಿಸಿದರು,ಈ ಸಂದರ್ಭದಲ್ಲಿ ಶ್ರೀಪಾದರ ಪೂರ್ವಾಶ್ರಮದ ತಂದೆಯವರಾದ  ಪಂಡಿತ ಕೇಸರಿ ರಾಜಾ ಎಸ್ ಗಿರಿ ಆಚಾರ್ಯರು ಮತ್ತು ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ , ವಿದ್ವಾನ್ ಡಾಕ್ಟರ್ ಎನ್ ವಾದಿರಾಜ ಆಚಾರ್ ಉಪಸ್ಥಿತರಿದ್ದರು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು. ಹಾಗೂ  ಶ್ರೀ ಮಠದ ಸಿಬ್ಬಂದಿಗಳು ಮತ್ತು  ಭಕ್ತಾದಿಗಳು ಪೂಜಾ ವೈಭವ  ಕಾರ್ಯಕ್ರಮದಲ್ಲಿ ಭಾಗವಹಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀಗಳಿಂದ ಫಲ ಮಂತ್ರಾಕ್ಷತೆ ಯನ್ನು ಸ್ವೀಕರಿಸಿ  ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

Leave a comment

This site uses Akismet to reduce spam. Learn how your comment data is processed.