ಕರ್ನಾಟಕ ಬಂಜಾರ ತಾಂಡಾಗಳ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದು, ಇದಕ್ಕಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ಅಂದಾಜು ರೂ.500.00 ಕೋಟಿಗಳನ್ನು ನೀಡಬೇಕು

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ಶ್ರೀ ಜಯದೇವನಾಯ್ಕ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿರವರಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಧನ್ಯವಾದಗಳು.

> ಕರ್ನಾಟಕ ಬಂಜಾರ ತಾಂಡಾಗಳ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದು, ಇದಕ್ಕಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ಅಂದಾಜು ರೂ.500.00 ಕೋಟಿಗಳನ್ನು ನೀಡಬೇಕೆಂದು ಮುಖ್ಯಮಂತ್ರಿ ರವರಿಗೆ ಒತ್ತಾಯಿಸಲಾಗಿದೆ.

ಬಂಜಾರ(ಲಂಬಾಣಿ) ಜನಾಂಗದ ಒಬ್ಬರ/ವಿಧಾನಸಭಾ ಸದಸ್ಯರಿದ್ದು ಅವರಿಗೆ ಮಂತ್ರಿ ಪದವಿ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿ ರವರಿಗೆ ಮನವಿ ಮಾಡಿಕೊಂಡಿರುತ್ತೇವೆ.

> ಬೆಂಗಳೂರಿನ ಬಂಜಾರ ಭವನದ ಉದ್ಘಾಟನಾ ಕಾರ್ಯಕ್ರಮದಂದು ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವರು ಘೋಷಿಸಿದಂತೆ ಬಂಜಾರ ಭವನ ಮುಂದುವರೆದ ಕಾಮಗಾರಿಗೆ ರೂ.8.00 ಕೋಟಿ ಹಣ ಕೂಡಲೇ ಬಿಡುಗಡೆಗೊಳಿಸಲು ಕೋರುತ್ತೇವೆ.

ಈ ಎಲ್ಲಾ ನಮ್ಮ ಬೇಡಿಕೆಗಳನ್ನು ಪೂರೈಸಲು ಕರ್ನಾಟಕದ ಬಂಜಾರ ಸಮುದಾಯ ಹಾಗೂ ಮೇಲ್ಕಂಡ ನಮ್ಮ ಸಂಘವು ಆಗ್ರಹಿಸುತ್ತದೆ ಎಂದು ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ(ರಿ) ಬೆಂಗಳೂರು ಇವರ ವತಿಯಿಂದ ಎನ್.ಆರ್.ನಾಯಕ್-ಅಧ್ಯಕ್ಷರು,ಹೆಚ್.ಬಿ.ಸಿದ್ಯಾನಾಯಕ್ -ಪ್ರಧಾನ ಕಾರ್ಯದರ್ಶಿ ಹಾಗೂ ಸಂಘದ ಮುಖಂಡರು ಉಪಸ್ಥಿತರಿದ್ದ ಪತ್ರಿಕಾ ಗೋಷ್ಠಿಯಲ್ಲಿ ಪಕಟಿಸಲಾಯಿತು.

City Today News 9341997936

Leave a comment

This site uses Akismet to reduce spam. Learn how your comment data is processed.