
“ನವೀಕರಿಸಬಹುದಾದ ಇಂಧನ ಮತ್ತು ವಿದ್ಯುದೀಕರಣದಲ್ಲಿ ಕರ್ನಾಟಕದ ನಾಯಕತ್ವ: ಸುಸ್ಥಿರ ಮತ್ತು ಕೈಗಾರಿಕಾ ಬೆಳವಣಿಗೆಗೆ ಪ್ರಮುಖ ಚಾಲಕರು”
ಬೆಂಗಳೂರು, 14 ಆಗಸ್ಟ್ 2024: ಸಿಐಐ ಕರ್ನಾಟಕ, ಇಂದು ಬೆಂಗಳೂರಿನಲ್ಲಿ “ಡ್ರೈವಿಂಗ್ ಸಸ್ಟೇನಬಿಲಿಟಿ: ರಿನ್ಯೂಯಬಲ್ಸ್, ಗ್ರೀನ್ ಹೈಡ್ರೋಜನ್ ಮತ್ತು ಇಲೆಕ್ಟ್ರಿಕ್ ಮೊಬಿಲಿಟಿ” ಎಂಬ ವಾರ್ಷಿಕ ಇಂಧನ ಪರಿವರ್ತನಾ ಸಮ್ಮೇಳನವನ್ನು ಆಯೋಜಿಸಿದೆ. ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಜಲಸಂಪನ್ಮೂಲ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಶ್ರೀ ಗೌರವ್ ಗುಪ್ತಾ ಹೀಗೆ ನುಡಿದರು: “ಕರ್ನಾಟಕವು ನವೀಕರಿಸಬಹುದಾದ ಇಂಧನದ ಕ್ಷೇತ್ರದಲ್ಲಿ ಮಾರ್ಗದರ್ಶಿಯಾಗಿದೆ; ನಮ್ಮಲ್ಲಿ 65% ವಿದ್ಯುತ್ ವಿದ್ಯುತ್ ಸಾಮರ್ಥ್ಯ ನವೀಕರಿಸಬಹುದಾದ ಮೂಲಗಳಿಂದಲೇ ಬರುತ್ತಿದೆ. ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ಹೂಡಿಕೆಯ ಕೇಂದ್ರವಾಗಿ ನಾವು 3 MMTPA ಗುರಿಯೊಂದಿಗೆ ಹಸಿರು ಹೈಡ್ರೋಜನ್ ಉತ್ಪಾದನೆಯಲ್ಲಿ ಪ್ರವರ್ತಕರಾಗಿದ್ದೇವೆ, ಮತ್ತು 1.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ವಿದ್ಯುತ್ ಚಲನಶೀಲತೆಯನ್ನು ಪ್ರೋತ್ಸಾಹಿಸುತ್ತಿದ್ದೇವೆ. ಸುಸ್ಥಿರ ಮತ್ತು ನವೀನ ವಿದ್ಯುತ್ ಪರಿಹಾರಗಳ ಬಗ್ಗೆ ನಮಗೆ ಬದ್ಧತೆ ಇದೆ. ಆದ್ದರಿಂದಲೇ, ಹಸಿರು ಹೈಡ್ರೋಜನ್ ಉತ್ಪಾದನೆಯ ವೆಚ್ಚವನ್ನು ಪ್ರತಿ ಕೆಜಿಗೆ 5 ಡಾಲರಿನಿಂದ 1 ಡಾಲರಿಗೆ ಇಳಿಸುವುದು ನಮ್ಮ ಗುರಿಯಾಗಿದೆ.
ಭಾರತ ಸರ್ಕಾರದ ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಲಲಿತ್ ಬೋಹ್ರಾ: “ವಿದ್ಯುತ್ ಬೇಡಿಕೆ 8-10% ನಷ್ಟು ಬೆಳೆಯುತ್ತಿರುವುದರಿಂದ ಕಡಿಮೆ ದರದಲ್ಲಿ ವಿದ್ಯುತನ್ನು ಒದಗಿಸುವುದು ಅತ್ಯಗತ್ಯ. ನವೀಕರಿಸಬಹುದಾದ ಇಂಧನ ಸ್ಥಾಪನೆಗಳಲ್ಲಿ ಭಾರತವು ಜಾಗತಿಕವಾಗಿ 4 ನೇ ಸ್ಥಾನದಲ್ಲಿದೆ. ಸೌರವಿದ್ಯುತ್ಯಿಂದ 85GW ಮತ್ತು ಗಾಳಿಯಿಂದ 46GW ವಿದ್ಯುತನ್ನು ಉತ್ಪಾದಿಸುವ ಗುರಿಯನ್ನು ಈಗಾಗಲೆ ಸಾಧಿಸಿಯಾಗಿದೆ. ಸರ್ಕಾರವು ಅಂತರ-ರಾಜ್ಯ ಪ್ರಸರಣ ಶುಲ್ಕವನ್ನು ಮನ್ನಾ ಮಾಡಿದೆ ಮತ್ತು ಮೊದಲ ಬಾರಿಗೆ, ಡಿಸ್ಟ್ರಿಬ್ಯೂಟೆಡ್ ರಿನ್ಯೂಯಬಲ್ ಪರ್ಚೇಸ್ ಆಬ್ಲಿಗೇಷನ್ಸ್ (ಆರ್.ಪಿ.ಒ) ಅನ್ನು ಪರಿಚಯಿಸಿದೆ. ಪಳೆಯುಳಿಕೆ ಇಂಧನಗಳಿಲ್ಲದ 200GW ಮೈಲಿಗಲ್ಲನ್ನು ಮತ್ತು 2030 ರ ವೇಳೆಗೆ 500GW ಗುರಿಯನ್ನು, ಜೊತೆಗೆ 55GW ಸೌರ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಇದು, ಸುಸ್ಥಿರ ಮತ್ತು ವಿದ್ಯುತ್-ಸುರಕ್ಷಿತ ಭವಿಷ್ಯದ ಬಗ್ಗೆ ಕರ್ನಾಟಕ ಸರ್ಕಾರಕ್ಕಿರುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.”
“ನಮ್ಮ ಜೀವನದಲ್ಲಿ ವಿದ್ಯುತ್ ಬಹಳ ನಿರ್ಣಾಯಕವಾದ ಪಾತ್ರವನ್ನು ವಹಿಸುತ್ತದೆ; ನಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶವನ್ನು ನೀಡುತ್ತದೆ ಎಂದು ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಮತ್ತು ಕರ್ನಾಟಕ ಸರ್ಕಾರದ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕ ಎಂಎಸ್ ಗುಂಜನ್ ಕೃಷ್ಣ, ಐಎಎಸ್: “ವಿದ್ಯುತ್ಯ ಪರಿವರ್ತನೆ ಎರಡು ನಿರ್ಣಾಯಕ ಅಂಶಗಳನ್ನು ಹೊಂದಿದೆ. ನವೀಕರಿಸಬಹುದಾದ ಮೂಲಗಳ ಕಡೆಗೆ ಚಲಿಸುವುದು ಮತ್ತು ನವೀಕರಿಸಬಹುದಾದ ವಿದ್ಯುತ್ಯ 50% ಸ್ಥಾಪಿತ ಸಾಮರ್ಥ್ಯದ ಡೀಕಾರ್ಬೊನೈಸೇಶನ್, ಮತ್ತು 2070 ರ ವೇಳೆಗೆ ನಿವ್ವಳ ಶೂನ್ಯವನ್ನು ಸಾಧಿಸುವ ಗುರಿಯನ್ನು ಸಾಧಿಸುವುದು. ನಮ್ಮ ಗುರಿಗಳನ್ನು ಸಾಧಿಸುವುದು ವಿದ್ಯುತ್ಯ ಪರಿವರ್ತನೆಯನ್ನು ಬೆಂಬಲಿಸುವ ದೃಢವಾದ ನೀತಿಗಳ, ನವೀಕರಿಸಬಹುದಾದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು, ಇವಿ ಸಾರಿಗೆಯನ್ನು ಉತ್ತೇಜಿಸುವುದು, ಹಸಿರು ಜಲಜನಕದ ಮೂಲಕ ಕೈಗಾರಿಕಾ ತಾಪನ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು, ಮತ್ತು ಹಸಿರು ಕಟ್ಟಡಗಳು ಮತ್ತು ಉತ್ಪಾದನಾ ಪ್ರಕ್ರಿಯೆಗಳನ್ನು ಉತ್ತೇಜಿಸುವುದು… ಇವುಗಳ ಮೇಲೆ ಅವಲಂಬಿತವಾಗಿರುತ್ತದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನದ ಪಾತ್ರ ಬಹು ಮಹತ್ತ್ವದ್ದು. ನಮಗೆ ಇನ್ನಷ್ಟು ಸ್ಮಾರ್ಟ್ ಮತ್ತು ಹಸಿರು ಗ್ರಿಡ್ಗಳು, ಸೂಕ್ಷ್ಮ ವಿತರಣಾ ವ್ಯವಸ್ಥೆಗಳು ಮತ್ತು ನ್ಯಾಯಯುತ ಪರಿವರ್ತನೆಗಳ ಅಗತ್ಯವಿದೆ. ಈ ಉದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕರ್ನಾಟಕದ ಕೈಗಾರಿಕಾ ನೀತಿಯು ಉತ್ಪಾದನೆಯಲ್ಲಿ ಹಸಿರು ಪ್ರಕ್ರಿಯೆಗಳಿಗೆ ಒತ್ತು ನೀಡುತ್ತಿದೆ.”
ಸಿಐಐ ಕರ್ನಾಟಕದಲ್ಲಿ, ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲು ನಾವು ನಿರಂತರವಾಗಿ ಪ್ರಯತ್ನಿಸುತ್ತೇವೆ. ಆದಾಗ್ಯೂ, ಈ ಗುರಿಯನ್ನು ಸಾಧಿಸಲು, ನಾವು ನಮ್ಮ ಕಾಲದ ಅತ್ಯಂತ ತುರ್ತಾದ ವಿಷಯಗಳಲ್ಲಿ ಒಂದನ್ನು ತಿಳಿಸಬೇಕಾಗಿದೆ: ಹವಾಮಾನ ಬದಲಾವಣೆ ಮತ್ತು ವಿದ್ಯುತ್ ಭದ್ರತೆ. ಸುಸ್ಥಿರ ಇಂಧನ ಭವಿಷ್ಯವನ್ನು ರಚಿಸಲು ನಾವು: ನವೀಕರಿಸಬಹುದಾದ, ಹಸಿರು ಹೈಡ್ರೋಜನ್, ವಿದ್ಯುತ್ ಚಲನಶೀಲತೆ ಮತ್ತು ದೃಢವಾದ ಗ್ರಿಡ್ ನೆಟ್ವರ್ಕ್ನ ಸಮರ್ಥ ಮತ್ತು ವಿವೇಚನಾಶೀಲ ಬಳಕೆಯ ಬಲವಾದ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ಇವು ತಡೆರಹಿತ ಪರಿವರ್ತನೆಗೆ ಪೂರ್ವಾಪೇಕ್ಷಿತಗಳಾಗಿರುತ್ತವೆ. ಉದ್ಯಮದ ನಾಯಕರು ಮತ್ತು ವಿಷನರಿಗಳ ನಡುವಿನ ಸಹಯೋಗ ಮತ್ತು ಚರ್ಚೆಯ ಮೂಲಕ ಮಾತ್ರ ಇದು ಸಾಧ್ಯ. ಇಂಧನ ಪರಿವರ್ತನೆಯ ಕುರಿತಾದ ಗಂಭೀರ ಸಂವಾದ ಕರ್ನಾಟಕವನ್ನು, ದೇಶದ ನಿವ್ವಳ ಶೂನ್ಯ ಪ್ರಯಾಣದಲ್ಲಿ ಪ್ರಮುಖ ಭಾಗಿಯನ್ನಾಗಿ ಮಾಡುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ,” ಎಂದು ಸಿಐಐ ಕರ್ನಾಟಕ ಸ್ಟೇಟ್ ಕೌನ್ಸಿಲ್ 2024-25 ರ ಅಧ್ಯಕ್ಷ ಮತ್ತು ಭಾರತ ಮತ್ತು ದಕ್ಷಿಣ ಏಷ್ಯಾ, ಹಿಟಾಚಿ ಎನರ್ಜಿ ಎಂಡಿ ಮತ್ತು ಸಿಇಒ ಶ್ರೀ ಎನ್ ವೇಣು ಹೇಳಿದರು.
ಎಂಎಸ್ಎಂಇ ಗಳಲ್ಲಿ ವಿದ್ಯುತ್ ಪರಿವರ್ತನೆ ಕುರಿತು ಸಿಐಐ ಕರ್ನಾಟಕದಲ್ಲಿ ಒಂದು ಶ್ವೇತಪತ್ರವನ್ನು ಬಿಡುಗಡೆ ಮಾಡಲಾಯಿತು. ಸುಸ್ಥಿರ ಆರ್ಥಿಕ ಬೆಳವಣಿಗೆಗಾಗಿ ಪಳೆಯುಳಿಕೆ ಇಂಧನಗಳಿಂದ ನವೀಕರಿಸಬಹುದಾದ ಇಂಧನ ಮೂಲಗಳಿಗೆ ಬದಲಾಗುವುದರ ಬಗ್ಗೆ ಇದು ಒತ್ತಿಹೇಳುತ್ತದೆ. ಕರ್ನಾಟಕದ ಆರ್ಥಿಕತೆಗೆ ಬಹ್ಯ್ ಮುಖ್ಯವಾದ ಎಂಎಸ್ಎಂಇಗಳು ಈ ಪರಿವರ್ತನೆಯಲ್ಲಿ ಅವಕಾಶಗಳು ಮತ್ತು ಸವಾಲುಗಳು ಎರಡನ್ನೂ ಎದುರಿಸುತ್ತಿವೆ. ಪ್ರಮುಖ ಚಾಲಕ ಶಕ್ತಿಗಳಲ್ಲಿ ಬೆಂಬಲ ನೀತಿಗಳು, ಆರ್ಥಿಕ ಪ್ರೋತ್ಸಾಹಗಳು, ತಾಂತ್ರಿಕ ಪ್ರಗತಿಗಳು ಮತ್ತು ಪರಿಸರ ಪರಿಗಣನೆಗಳು ಒಳಗೊಂಡಿವೆ. ನವೀಕರಿಸಬಹುದಾದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ಇಂಧನ ದಕ್ಷತೆಯನ್ನು ಸುಧಾರಿಸುವುದು ಮತ್ತು ಹಸಿರು ಫೈನಾನ್ಸ್ ಸೌಲಭ್ಯ… ಇವುಗಳಲ್ಲಿ ಅವಕಾಶಗಳಿವೆ. ಸವಾಲುಗಳಲ್ಲಿ: ಹೆಚ್ಚಿನ ಆರಂಭಿಕ ವೆಚ್ಚಗಳು, ಸೀಮಿತ ಹಣಕಾಸು ಮತ್ತು ತಾಂತ್ರಿಕ ಪರಿಣತಿಯ ಅಂತರ ಗಳು ಸೇರಿವೆ. ಕರ್ನಾಟಕದ ಸುಸ್ಥಿರತೆಯ ಗುರಿಗಳಿಗೆ ಕೊಡುಗೆ ನೀಡಲು ಮತ್ತು ಸ್ಪರ್ಧಾತ್ಮಕತೆಯನ್ನು ಸುಧಾರಿಸಬೇಕಾದರೆ ಉನ್ನತ ನೀತಿ ಬೆಂಬಲ, ನಾವೀನ್ಯತೆ ಪಾಲುದಾರಿಕೆಗಳು ಮತ್ತು ಹಣಕಾಸಿನ ಉತ್ಪನ್ನಗಳ ಮೂಲಕ ಇವುಗಳನ್ನು ಪರಿಹರಿಸಬೇಕು. ಇದೇ ಎಂಎಸ್ಎಂಇ ಗಳ ಮುಂದಿರುವ ನಿರ್ಣಾಯಕ ಸವಾಲು.
“ಇಂಧನ ಪರಿವರ್ತನೆ ಎಂದರೆ ನಿವ್ವಳ ಶೂನ್ಯ ಸಾಧನೆಯೇ. ಪ್ರಗತಿಗೆ ಇದು ಅನಿವಾರ್ಯ ಮತ್ತು ನವೀಕರಿಸಬಹುದಾದ ಇಂಧನ ಉದ್ಯಮಕ್ಕೆ ಸರಿಯಾದ ನೀತಿ ಬೆಂಬಲ ಮತ್ತು ಪ್ರಚೋದನೆಯನ್ನು ನೀಡುವ ಮೂಲಕ ಭಾರತ ಸರ್ಕಾರವು ಇದನ್ನು ಮುಂದಕ್ಕೆ ತಳ್ಳಲು ಉತ್ಸುಕವಾಗಿದೆ. ಆದರೆ, ಪ್ರಸ್ತುತ ಪೀಳಿಗೆಯಲ್ಲಿ ಹಿಂದುಳಿದಿರುವ ಪ್ರಸರಣ ಮತ್ತು ಸ್ಥಳಾಂತರಿಸುವ ಜಾಲವನ್ನು ಒಳಗೊಂಡಂತೆ ಶುದ್ಧ ಇಂಧನವನ್ನು ಬೆಂಬಲಿಸುವ ಮೂಲಸೌಕರ್ಯಗಳ ಬಗ್ಗೆ ನಾವು ಗಮನಹರಿಸಬೇಕಾಗಿದೆ,” ಎಂದು ಸಿಐಐ ಕರ್ನಾಟಕ ಇಂಧನ ಪರಿವರ್ತನಾ ಸಮಿತಿ 2024-25 ರ ಸಹ ಸಂಚಾಲಕ ಮತ್ತು ಅಯನಾ ಪವರ್ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ನಿಂಬರಗಿ ಹೇಳಿದರು.
“ಜಾಗತಿಕವಾಗಿ, ಭಾರತವು 200 GW ಗಿಂತ ಹೆಚ್ಚು ಸ್ಥಾಪಿಸಲಾದ ನವೀಕರಿಸಬಹುದಾದ ಇಂಧನ (ಆರ್ಇ) ಸ್ಥಾಪಿತ ಸಾಮರ್ಥ್ಯದಲ್ಲಿ 4 ನೇ ಸ್ಥಾನದಲ್ಲಿದೆ” ಎಂದು ಕರ್ನಾಟಕ ಸರ್ಕಾರದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (ಕೆ.ಆರ್.ಇ.ಡಿ.ಎಲ್) ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಹೇಳಿದರು. “ಕರ್ನಾಟಕವು ಆರ್ಇ ಸ್ಥಾಪನೆಯಲ್ಲಿ ಅಗ್ರ 5 ರಾಜ್ಯಗಳಲ್ಲಿ ಒಂದಾಗಿದೆ. ಸೌರ ಮತ್ತು ಪವನ ವಿದ್ಯುತ್ ಎರಡರಲ್ಲೂ 3 ನೇ ಸ್ಥಾನದಲ್ಲಿದೆ. ರಾಜ್ಯವು ಆರ್ಇ ಸಾಮರ್ಥ್ಯಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಇದಕ್ಕೆ ಅನುಕೂಲಕರ ನೀತಿ ಪರಿಸರ ನೆರವಾಗಿದೆ. ಇಂಧನ ಸಂರಕ್ಷಣೆ (ಇಸಿ) ಮತ್ತು ಇಂಧನ ದಕ್ಷತೆ ( ಇಇ) ನೀತಿಯು 744 ದಶಲಕ್ಷ kWh ವಿದ್ಯುಚ್ಛಕ್ತಿಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ, 454 MW ಪಳೆಯುಳಿಕೆ ಇಂಧನ ಆಧಾರಿತ ಉತ್ಪಾದನಾ ಸಾಮರ್ಥ್ಯದ ಸೇರ್ಪಡೆಯನ್ನು ತಪ್ಪಿಸುತ್ತದೆ ಮತ್ತು 610,080 ಟನ್ ಗಳಷ್ಟು ಇಂಗಾಲಾಮ್ಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. 2024-25 ಬಜೆಟ್ ನಲ್ಲಿ, ಕರ್ನಾಟಕ ಸರ್ಕಾರವು 40,000 ಆಫ್-ಗ್ರಿಡ್ ಸೋಲಾರ್ ಪಂಪ್ಗಳಷ್ಟನ್ನು ಕಡಿತಗೊಳಿಸುವುದಾಗಿ, ನವೀಕರಿಸಬಹುದಾದ ವಿದ್ಯುತ್ಯನ್ನು ಉತ್ತೇಜಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ರಾಜ್ಯ ಸಬ್ಸಿಡಿ ಪಾಲನ್ನು 30% ರಿಂದ 50% ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ.
“ವಿದ್ಯುತ್ ಪರಿವರ್ತನೆಗೆ ಉತ್ಪಾದನೆ, ಪ್ರಸರಣ, ಸಂಗ್ರಹಣೆ ಮತ್ತು ಬಳಕೆಯನ್ನು ಒಳಗೊಳ್ಳುವ ಸಮಗ್ರ ವಿಧಾನದ ಅಗತ್ಯವಿದೆ. ಈ ರೂಪಾಂತರದ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಬೇಕಾಗುವ ತಂತ್ರಜ್ಞಾನ ಮತ್ತು ಡಿಜಿಟಲೀಕರಣ ಆವಿಷ್ಕಾರಗಳಿಗೆ ಸಹಯೋಗದ ಅಗತ್ಯವಿದೆ,” ಎಂದು ಸಿಐಐ ಕರ್ನಾಟಕ ಎನರ್ಜಿ ಟ್ರಾನ್ಸಿಶನ್ ಪ್ಯಾನೆಲ್ 2024-25 ರ ಸಂಚಾಲಕ ಮತ್ತು ತಂತ್ರಜ್ಞಾನ ಅಧಿಕಾರಿ, ಹಿಟಾಚಿ ಎನರ್ಜಿ ಶ್ರೀ ಅಕಿಲುರ್ ರೆಹಮಾನ್ ಹೇಳಿದರು.
ನವೀಕರಿಸಬಹುದಾದ ಇಂಧನ ಉತ್ಪಾದನೆ, ದಕ್ಷ ಎನರ್ಜಿ ಇವ್ಯಾಕ್ಯುಯೇಷನ್ ಮತ್ತು ಪ್ರಸರಣಕ್ಕಾಗಿ ಇಂಧನ ಪರಿವರ್ತನೆ ಗ್ರಿಡ್, ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು ನವೀಕರಿಸಬಹುದಾದವುಗಳ ಸಮಗ್ರತೆ ಮತ್ತು ವಿದ್ಯುದ್ದೀಕರಣ ಮತ್ತು ಡಿಜಿಟಲೀಕರಣದ ಪಾತ್ರ ಸೇರಿದಂತೆ ಈ ಗುರಿಗಳನ್ನು ಸಾಧಿಸುವಲ್ಲಿ ನಿರ್ಣಾಯಕವಾಗುವ ವಿಷಯಗಳ ಬಗ್ಗೆ ಸಮ್ಮೇಳನವು ಚರ್ಚಿಸಿತು. ಹಿಟಾಚಿ ಎನರ್ಜಿ, ಅಯನಾ ಪವರ್; ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ; ಎಲ್ಗಿ ಎಕ್ವಿಪ್ಮೆಂಟ್ಸ್ ಲಿ., ಓ2 ಪವರ್; ಡೆಕ್ಸ್ಲರ್ ಎನರ್ಜಿ ಸೇರಿದಂತೆ ಪ್ರಮುಖ ಕೈಗಾರಿಕೆಗಳು ಮತ್ತು ಸಂಸ್ಥೆಗಳು ತಮ್ಮ ಒಳನೋಟಗಳನ್ನು ಹಂಚಿಕೊಂಡವು ಮತ್ತು ಪ್ರದರ್ಶಿಸಿಸವು. ಇದರಲ್ಲಿ 100 ಕ್ಕೂ ಹೆಚ್ಚು ಉದ್ಯಮದ ಸಿಎಕ್ಸ್ಒ ಗಳು ಮತ್ತು ಎಲ್ಲ ವಲಯಗಳ ಹಿತಾಸಕ್ತಿದಾರರು ಭಾಗವಹಿಸಿದ್ದರು.
City Today News 9341997936
