ಜಯನಗರ ಶ್ರೀ ಗುರುರಾಯರ ಮಠದಿಂದ “ಮಂತ್ರಾಲಯ ಯಾತ್ರೆ-ಭಕ್ತರಿಗೆ ಶ್ರೀಗಳಿಂದ ಅನುಗ್ರಹ ಸಂದೇಶ ಮತ್ತು ಫಲ ಮಂತ್ರಾಕ್ಷತೆ

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಆರಾಧನೆಗೆ ವಿಶೇಷ ಸೇವೆ ಸಲ್ಲಿಸಿದ ಭಕ್ತಾದಿಗಳಿಗೆ  ಮಂತ್ರಾಲಯ ಕ್ಷೇತ್ರ ರಾಯರ ಸನ್ನಿಧಿಗೆ ಪ್ರಯಾಣವನ್ನು ಬೆಳೆಸಿ ದೇವಿ ಮಂಚಾಲಮ್ಮನ ದರ್ಶನ, ಶ್ರೀ ಗುರುರಾಯರ ದರ್ಶನ, ಶ್ರೀ ಮೂಲ ರಾಮದೇವರ ಪೂಜೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆ, ನಂತರ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಸಂದೇಶದೊಂದಿಗೆ  ಭಕ್ತರು ಫಲ ಮಂತ್ರಾಕ್ಷತೆ  ಸ್ವೀಕರಿಸಿ ಸಂಜೆ ಮಹಾ ರಥೋತ್ಸವದಲ್ಲಿ ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು. ಭಕ್ತರಿಗೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಾಚಾರ್ಯರ, ಶ್ರೀ ನಂದಕಿಶೋರಾಚಾರ್ಯರ ನೇತೃತ್ವದಲ್ಲಿ ಸಿಬ್ಬಂದಿಗಳ ಸಹಕಾರದೊಂದಿಗೆ ನೆರವೇರಿತು.

City Today News 9341997936

Leave a comment

This site uses Akismet to reduce spam. Learn how your comment data is processed.