ಜಯನಗರ ರಾಯರ ಮಠದಲ್ಲಿ 108 ದಂಪತಿಗಳಿಂದ “ಸಾಮೂಹಿಕ ಶ್ರೀ ಅನಂತಪದ್ಮನಾಭ ವ್ರತ ಪೂಜೆ”

ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರಾಚಾರ್ಯರ  ನೇತೃತ್ವದಲ್ಲಿ “ಶ್ರೀ ಅನಂತಪದ್ಮನಾಭ ವ್ರತ  ಪೂಜೆ”ಯನ್ನು ಸ್ವರ್ಣ ಸಿಂಹಾಸನದಲ್ಲಿ ಕಳಶವನ್ನು ಕೂರಿಸಿ, ಅರ್ಚನೆಯೊಂದಿಗೆ ಅರ್ಚಕರಾದ ರಾಮಚಂದ್ರಾಚಾರ್ ಮತ್ತು ಕೃಷ್ಣಾಚಾರ್ ಇವರಿಂದ ಪೂಜೆಯನ್ನು ನೆರವೇರಿಸಲಾಯಿತು ಎಂದು ನಂದಕಿಶೋರ್ ಆಚಾರ್ಯರು ತಿಳಿಸಿದರು, ಈ ಸಂದರ್ಭದಲ್ಲಿ ವಿಶೇಷ ಉತ್ಸವಗಳೊಂದಿಗೆ 108 ದಂಪತಿಗಳಿಂದ ಸಾಮೂಹಿಕವಾಗಿ ಶ್ರೀ ಅನಂತಪದ್ಮನಾಭ ವ್ರತ ಪೂಜೆಯನ್ನು ಪ್ರತ್ಯೇಕ ಪ್ರತ್ಯೇಕ ಕಲಶವನ್ನು ಇರಿಸಿ  108 ದಂಪತಿಗಳು ಭಕ್ತಿಯಿಂದ ವ್ರತ ಪೂಜೆಯಲ್ಲಿ ಪಾಲ್ಗೊಂಡು ತೀರ್ಥಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು .

City Today News 9341997936

Leave a comment

This site uses Akismet to reduce spam. Learn how your comment data is processed.