“ಲೋಕ ಕಲ್ಯಾಣಕ್ಕಾಗಿ ಲಕ್ಷ ದೀಪೋತ್ಸವ ” ಗುರು ರಾಯರ ಸನ್ನಿಧಿಯಲ್ಲಿ

ಬೆಂಗಳೂರಿನ ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಕಾರ್ತಿಕ ಪೌರ್ಣಮಿ ಮತ್ತು ‘ಲೋಕ ಕಲ್ಯಾಣಕ್ಕಾಗಿ” ಲಕ್ಷ ದೀಪೋತ್ಸವದ ಕಾರ್ಯಕ್ರಮವು ವಿಶೇಷವಾಗಿ ನೆರವೇರಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು, ಈ ಸಂದರ್ಭದಲ್ಲಿ ಸನ್ನಿಧಿಗೆ ಆಗಮಿಸಿದ ಭಕ್ತರಿಗೆ ಮತ್ತು ಸೇವಾ ಕರ್ತೃಗಳಿಗೆ ಸಂಕಲ್ಪವನ್ನು ಅರ್ಚಕರಿಂದ ಮಾಡಿಸಲಾಯಿತು ತದನಂತರ ದೀಪಗಳನ್ನು ರಾಯ ಸನ್ನಿಧಿಯ ಪ್ರಕಾರದ ಸುತ್ತಲೂ ಮತ್ತು ಹೊರಭಾಗದಲ್ಲಿಯೂ ದೀಪಗಳನ್ನು ಪ್ರಜ್ವಲಿಸಿ ಚೊಕ್ಕ ಸುಡುವ ಮೂಲಕ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು ಭಕ್ತಾದಿಗಳು ಭಕ್ತಿಯಿಂದ “ಲೋಕಕಲ್ಯಾಣಕ್ಕಾಗಿ” ರಾಯರ ಮುಂದೆ ಪ್ರಾರ್ಥನೆಯನ್ನು ಸಲ್ಲಿಸಿ ದೀಪಗಳನ್ನು ಪ್ರಜ್ವಲಿಸಿ ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
City Today News 9341997936
