ಅಮಿತ್ ಶಾ ರವರು ನಮ್ಮ ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ।। ಬಿ ಆರ್ ಅಂಬೇಡ್ಕರ್ ರವರ ಕುರಿತು ವಿವಾದಾತ್ಮಕ ಹೇಳಿಕೆ

ಇತ್ತೀಚಿಗೆ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ನಮ್ಮ ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ।। ಬಿ ಆರ್ ಅಂಬೇಡ್ಕರ್ ರವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಮತ್ತು ಹಿಂದುಳಿದವರ ವಿಚಾರ ಸಮಿತಿ(ರಿ) ರಾಜ್ಯಾದಂತ ಉಗ್ರ ಹೋರಾಟವನ್ನು ನಡೆಸುತ್ತಿದ್ದು ಈ ಮೂಲಕ ಅಮಿತ್ ಶಾ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ.

ಇದಲ್ಲದೆ,
1). ದೇಶದಲ್ಲಿ ಯಾವುದೇ ಹುದ್ದೆಯಲ್ಲಿರುವ ವ್ಯಕ್ತಿ ಬಾಬಾ ಸಾಹೇಬ್ ಡಾ।। ಬಿ ಆರ್ ಅಂಬೇಡ್ಕರ್, ಭಗವಾನ್ ಬುದ್ಧ, ಬಸವಣ್ಣ ರವರ ಹೆಸರುಗಳನ್ನು ದುರುಪಯೋಗಪಡಿಸಕೊಂಡರೆ ಪೋಲಿಸ್ ಇಲಾಖೆ ಸ್ವಯಂ ಕೇಸ್ ದಾಖಲಿಸಿಕೊಳ್ಳಬೇಕು ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.

2)ಬುದ್ಧ ಬಸವ ಅಂಬೇಡ್ಕರ್ ರವರ ಭಾವಚಿತ್ರ ಹಾಗೂ ಪುತ್ತಳಿ ನಿರ್ಮಿಸುವುದಕ್ಕೆ ಅನುಮತಿ ಪಡೆಯಬೇಕೆಂಬ ನಿರ್ಧಾರ ಸರ್ಕಾರ ಕೈಗೊಂಡಿದ್ದು ಇದನ್ನು ನಾವು ಖಂಡಿಸುತ್ತೇವೆ, ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಮಹನೀಯರ ಪುತ್ತಳಿಗಳನ್ನು ನಿರ್ಮಿಸುವುದಕ್ಕೆ ಯಾವುದೇ ಅನುಮತಿ ಬೇಡವಾಗಿದ್ದರಿಂದ ಈ ಕೂಡಲೇ ಆದೇಶವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸುತ್ತಾ.

ಈ ಮೇಲ್ಕಂಡ ಎರಡು ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಿ ನಮ್ಮ ಹೋರಾಟಕ್ಕೆ ಸ್ಪಂದಿಸಬೇಕೆಂದು ಮಾನ್ಯ ರಾಜ್ಯಪಾಲರ ಮೂಲಕ ಮನವಿ ಪತ್ರವನ್ನು ನೀಡುತ್ತಿದ್ದೇವೆ ಎಂದು ಡಾ||. ಜಿ ಎನ್ ಸಿದ್ದಲಿಂಗಯ್ಯ
ರಾಜ್ಯಾಧ್ಯಕ್ಷರು ಕರ್ನಾಟಕ ದಲಿತ ಮತ್ತು ಹಿಂದುಳಿದವರ ವಿಚಾರ ಸಮಿತಿ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.