ಮಂತ್ರಾಲಯದ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳಿಂದ”ಶ್ರೀಗುರುರಾಘವೇಂದ್ರರ ಉತ್ಸವ” “ಉದ್ಘಾಟನೆ”

“ಶ್ರೀಗುರುರಾಘವೇಂದ್ರರ ಉತ್ಸವ”
ಮಂತ್ರಾಲಯದ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳಿಂದ “ಉದ್ಘಾಟನೆ” ಜಯನಗರ ಶಾಲಿನಿ ಮೈದಾನದಲ್ಲಿ ಸಹಸ್ರಾರು ಭಕ್ತ ಜನ ಸಾಗರ ಭಕ್ತರಿಗೆ ಮಂತ್ರಾಲಯ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ”

ಬೆಂಗಳೂರಿನ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹತ್ತಿರದಲ್ಲಿರುವ ಶಾಲಿನಿ ಮೈದಾನದಲ್ಲಿ ಶ್ರೀ ಗುರುರಾಘವೇಂದ್ರರ ಉತ್ಸವ ವೈಭವದ ರೂವಾರಿಯಾದ ಖ್ಯಾತ ಚಲನಚಿತ್ರ ನಿರ್ದೇಶಕರಾದ  ಡಾ|| ಮಧುಸೂದನ್ ಹವಾಲ್ದಾರ್  ಹಾಗೂ ಸಿರಿ ಕನ್ನಡ ಟಿವಿ ಚಾನೆಲ್ ಮುಖ್ಯಸ್ಥರಾದ ಶ್ರೀ ಸಂಜಯ್ ಸಿಂಧ್ಯಾ ಮತ್ತು ಸಿ ಆರ್ ಮುರಳಿ ಇವರುಗಳ ತಂಡದಿಂದ ಶ್ರೀ ರಾಘವೇಂದ್ರರ ಉತ್ಸವದ ವಿಶೇಷ ಅತ್ಯಂತ ಸುಂದರ ವೈಭವದಿಂದ ಈ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು. ವಿಶೇಷವಾಗಿ ಮಂತ್ರಾಲಯ ಕ್ಷೇತ್ರದ ಮರು ನಿರ್ಮಾಣವನ್ನೇ ಈ ಮೈದಾನದಲ್ಲಿ ಶ್ರೀ ರಾಘವೇಂದ್ರ ಉತ್ಸವಕ್ಕಾಗಿ ಮಾಡಲಾಗಿತ್ತು. ಮುಖ್ಯಪ್ರಾಣ ದೇವರ ಗುಡಿ, ರಾಯರು ಬೃಂದಾವನ , ಸುವರ್ಣದ ಗೋಪುರ, ರಾಯರ ಜೀವನ ಚರಿತ್ರೆ ಮತ್ತು ಮಂತ್ರಾಲಯ ಶ್ರೀಗಳ ಜೀವನ ಚರಿತ್ರೆ ಹಾಗೂ ಶ್ರೀಗಳಿಂದ ಅನುಗ್ರಹ ಸಂದೇಶ ಗಣ್ಯರಿಗೆ  ನಟ ನಟಿಯರಿಗೆ ರಾಜಕಾರಣಿಗಳಿಗೆ ಮತ್ತು ಭಕ್ತರಿಗೆ ಶ್ರೀ ರಾಘವೇಂದ್ರರ ಅನುಗ್ರಹ ಪ್ರಶಸ್ತಿಯನ್ನು ಆಯೋಜಿಸಲಾಗಿತ್ತು. ಈ ಒಂದು ಕಾರ್ಯಕ್ರಮಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರನ್ನು ಭವ್ಯ ಮೆರವಣಿಯೊಂದಿಗೆ ಸ್ವಾಗತಿಸಿ ತದನಂತರ  ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ಅವರ ಅಮೃತ ಹಸ್ತದಿಂದ ಈ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಯರ ಬೃಂದಾವನಕ್ಕೆ ಪುಷ್ಪಾರ್ಚನೆ ಮಹಾಮಂಗಳಾರತಿಯೊಂದಿಗೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ, ಭಕ್ತರಿಗೆ ಅನುಗ್ರಹ ಸಂದೇಶವನ್ನು ನೀಡುತ್ತಾ ಶ್ರೀ ರಾಘವೇಂದ್ರ ಸ್ವಾಮಿಗಳವರು ಪ್ರತಿಯೊಬ್ಬ ಭಕ್ತರಿಗೂ ಪೂಜ್ಯ ಗುರುಗಳು ಗುರು ರಾಯರನ್ನು ಯಾರು ಭಕ್ತಿಭಾವದಿಂದ ನಿಷ್ಕಲ್ಮಶದಿಂದ ಪ್ರಾರ್ಥಿಸುತ್ತಾರೋ ಅಂತಹ ಭಕ್ತರಿಗೆ ಶೀಘ್ರವಾಗಿ  ಫಲವನ್ನು ಕೊಡುವಂತಹ ಗುರುಗಳು ನಮ್ಮ ನಿಮ್ಮ ರಾಯರು ಕಲಿಯುಗದ ಕಾಮಧೇನು ಕಲ್ಪವೃಕ್ಷ ಗುರು ರಾಘವೇಂದ್ರರು. ಆದ್ದರಿಂದ ಪ್ರತಿಯೊಬ್ಬ ಭಕ್ತರ ಮನಸ್ಸಿಗೆ ಹತ್ತಿರವಾಗುವ ಗುರುಗಳು ರಾಘವೇಂದ್ರರು ಇಂತಹ ರಾಘವೇಂದ್ರರ ಉತ್ಸವವನ್ನು ಅತ್ಯಂತ ವೈಭವವಾಗಿ ಆಚರಿಸಿ “ಮನೆಯೇ ಮಂತ್ರಾಲಯ ಮನಸೇ ದೇವಾಲಯ” ಎಂಬ ಮಾತಿನಂತೆ ಮಂತ್ರಾಲಯ ಕ್ಷೇತ್ರವನ್ನು ಮರು ನಿರ್ಮಾಣವಾಗಿ ಬೆಂಗಳೂರಿನ ಮಹಾನಗರದಲ್ಲಿ ಮಾಡಲಾಗಿದ್ದು ನೋಡಿ ಬಹಳ ಸಂತೋಷವನ್ನು ವ್ಯಕ್ತಪಡಿಸುತ್ತಾ ಪಂಡಿತರಿಗೆ, ಹಿರಿಯರಿಗೆ, ಗಣ್ಯರಿಗೆ ಮತ್ತು ಕಲಾವಿದರಿಗೆ ಭಕ್ತರಿಗೂ ಅನುಗ್ರಹ ಸಂದೇಶವನ್ನು ನೀಡಿ ಫಲ ಮಂತ್ರಾಕ್ಷತೆ ಶೇಷವಸ್ತ್ರ ಕೊಟ್ಟು ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಉಚ್ಚ ನ್ಯಾಯಾಧೀಶರಾದ ಶ್ರೀಯುತ ವಿ, ಶ್ರೀಶಾನಂದರವರು ಹಾಗೂ ಡಾ|| ಮಧುಸೂದನ್ ಹವಾಲ್ದಾರ್, ಸಿರಿ ಚಾನೆಲ್ ಮುಖ್ಯಸ್ಥರಾದ ಶ್ರೀಯುತ ಸಂಜಯ್ ಸಿಂದ್ಯಾ , ಆಡಿಟರ್ ಸಿ ಆರ್ ಮುರಳಿ , ಸುಬ್ಬನರಸಿಂಹ, ಸಿ ಕೆ ರಾಮಮೂರ್ತಿ, ವಿದ್ವಾನ್ ಅರಳು ಮಲ್ಲಿಗೆ ಪಾರ್ಥಸಾರಥಿ, ಡಾ|| ವ್ಯಾಸನಕೆರೆ ಪ್ರಭಂಜನಾಚಾರ್, ಡಿ ಪಿ ಅನಂತ, ಚಿತ್ರನಟರಾದ ಡಾಲಿ ಧನಂಜಯ, ಆಶಿಕಾ ರಂಗನಾಥ್, ವಿಜಯ ಕೃಷ್ಣ ಅರ್ಚನಾ ಉಡುಪ, ರಾಯಚೂರು ಶೇಷಗಿರಿದಾಸ್, ಮಂಜುಳಾ ಗುರುರಾಜ್, ಅನಂತ ಕುಲಕರ್ಣಿ, ವರದೇಂದ್ರ ಗಂಗಾಗೇಡ್, ಆರ್. ಕೆ. ವಾದಿಂದ್ರಾಚಾರ್ , ಅಪ್ರಮೇಯ ಆಚಾರ್ ನಂದಕಿಶೋರಾಚಾರ್ , ಬಂಡಿ ಶಾಮಾಚಾರ್, ಅಗ್ನಿಹೋತ್ರಿ ವೇಣುಗೋಪಾಲಾಚಾರ್ , ಹಾಗೂ ಹಲವಾರು ಗಣ್ಯರಿಗೆ ಭಕ್ತರಿಗೆ ಫಲ ಮಂತ್ರಾಕ್ಷತೆ ಕೊಟ್ಟು ಶ್ರೀಪಾದರು ಅನುಗ್ರಹಿಸಿದರು. ಈ ವಿಶೇಷವಾದ ಉತ್ಸವಕ್ಕೆ  ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸಹಕಾರ ಪರಮಪೂಜ್ಯ ಶ್ರೀಪಾದಂಗಳವರ ಆಶೀರ್ವಾದ ಅನುಗ್ರಹದೊಂದಿಗೆ ಈ ಉತ್ಸವದ ಕಾರ್ಯಕ್ರಮವು ಶ್ರೀಯುತ ಡಾ|| ಮಧುಸೂದನ್ ಹವಾಲ್ದಾರ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು, ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು ಗುರು ರಾಯರ ದರ್ಶನ ಶ್ರೀಪಾದಂಗಳವರ ಅನುಗ್ರಹವನ್ನು ಪಡೆದುಕೊಂಡು ಕೃತಾರ್ಥರಾದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಸಹಸ್ರಾರು ಭಕ್ತರಿಗೂ ಕೂಡ ಮಂತ್ರಾಲಯದ ಮಂತ್ರಾಕ್ಷತೆ ಮಂತ್ರಾಲಯದ ಪರಿಮಳ ಪ್ರಸಾದ ಸ್ವೀಕರಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

18 BRANCHES OF VASAN EYE CARE HOSPITALSSIGNED MOU WITH KSRTC

Vasan Eye Care Hospitals is having 18 Branches in Bangalore and across Karnataka.

KSRTC has undertaken a significant initiative to support the health and well-being of its employees and their dependent family members through the introduction of a cashless health scheme KSRTC Arogya scheme. This initiative represents KSRTC’s continued commitment to the welfare and well-being of its employees. Vasan Healthcare extends its sincere thanks to all their healthcare partners for their cooperation and support in making this initiative a reality.

Vasan Healthcare pleased to officially announce the launch of the KSRTC Arogya scheme on January 6th, 2025. From this date onwards, KSRTC employees can avail themselves of cashless benefits at empaneled hospitals.
Further, it is brought to your kind notice that the Medi Assist Insurance TPA Pvt. Ltd. has been appointed as the Third-Party Administrator (TPA) for the KSRTC Aarogya Scheme. The IHX platform will be used by empaneled hospitals to submit requests and claims.

Vasan Healthcare provide premium cataract services, advanced vitreo-retina care, the latest diagnostic and treatment modalities for glaucoma, cornea, and ocular surface disorders. Our offerings also include refractive services (for spectacle independence), pediatric ophthalmology and squint management, oculoplasty services, neuro-ophthalmology, uveitis management, a full-fledged optical dispensing unit, pharmacy services, and an ocular trauma unit.

MOU, signed between Government of Karnataka KSRTC with Vasan eye care was received by A.Sundaramurugesan Director Operations, Vasan Healthcare Private Limited at Vidhana Soudha today, 06-01-2025, with the Honourable Chief Minister of Karnataka, Mr. Siddaramaiah.

City Today News 9341997936

ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕೆ ಎಸ್ ಆರ್ ಟಿ ಸಿ ಆರೋಗ್ಯ ಯೋಜನೆಯು ಇಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವರಾದ ಶ್ರೀರಾಮಲಿಂಗ ರೆಡ್ಡಿ, ಶ್ರೀ ವಿ ಅನ್ಬು ಕುಮಾರ್ ಐಎಎಸ್ ಕೆ ಎಸ್ ಆರ್ ಟಿ ಸಿ ಯ ಮ್ಯಾನೇಜಿಂಗ್ ಡೈರೆಕ್ಟರ್ ರವರಿಂದ ಅಧಿಕೃತವಾಗಿ ಚಾಲನೆ

ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ
ಕೆ ಎಸ್ ಆರ್ ಟಿ ಸಿ ಆರೋಗ್ಯ ಯೋಜನೆಯು ಇಂದು ದಿನಾಂಕ 6 ಜನವರಿ 2025 ರಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವರಾದ ಶ್ರೀರಾಮಲಿಂಗ ರೆಡ್ಡಿ, ಶ್ರೀ ವಿ ಅನ್ಬು ಕುಮಾರ್ ಐಎಎಸ್
ಕೆ ಎಸ್ ಆರ್ ಟಿ ಸಿ ಯ ಮ್ಯಾನೇಜಿಂಗ್ ಡೈರೆಕ್ಟರ್ ರವರು ಅಧಿಕೃತವಾಗಿ ಚಾಲನೆ ನೀಡಿದರು

ಇದು ಕೆ ಎಸ್ ಆರ್ ಟಿ ಸಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯಾಗಿದೆ.
ಪ್ರಸ್ತುತವಾಗಿ ಕೆ ಎಸ್ ಆರ್ ಟಿ ಸಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 33,000 ಕ್ಕೂ ಹೆಚ್ಚಿನ ಉದ್ಯೋಗಿಗಳಿಗೆ ಮತ್ತು ಅವರ ಅವಲಂಬಿತರಿಗೆ ಈ ಸೌಲಭ್ಯವು ದೊರೆಯಲಿದ್ದು.

ಇದರ ಅಂಗವಾಗಿ ರಾಜ್ಯದ್ಯಂತ 220ಕ್ಕೂ ಹೆಚ್ಚು ಪ್ರಮುಖ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ ಇದರ ಅಂಗವಾಗಿ ಇಂದು ವಿಧಾನಸೌಧದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಸಾರಿಗೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ರವರು ಚಾಲನೆ ನೀಡಿದರು
ವಾಸನ್ ಕಣ್ಣಿನ ಆಸ್ಪತ್ರೆಯು ಕರ್ನಾಟಕದ್ಯಂತ 17 ಶಾಖೆಗಳನ್ನು ಹೊಂದಿದ್ದು ಬೆಂಗಳೂರಿನಲ್ಲಿ ಒಂಬತ್ತು ಶಾಖೆ ಮತ್ತು ಬೆಂಗಳೂರಿನ ಹೊರತುಪಡಿಸಿ ಒಂಬತ್ತು ಶಾಖೆಗಳು ಪ್ರಸ್ತುತದಲ್ಲಿ ಕಾರ್ಯನಿರ್ವಹಿಸುತ್ತಿದೆ ಕೆ ಎಸ್ ಆರ್ ಟಿ ಸಿ ಯ ಆರೋಗ್ಯ ಯೋಜನೆಯು ನಮ್ಮ ಕರ್ನಾಟಕದ ಅತ್ಯಂತ ಕಾರ್ಯನಿರ್ವಹಿಸುತ್ತಿರುವ ವಾಸನ್ ಕಣ್ಣಿನ ಆಸ್ಪತ್ರೆಯಲ್ಲಿ ಈ ನಗದು ರಹಿತ ಸೌಲಭ್ಯವು ಲಭ್ಯವಿದೆ.

City Today News 9341997936

ಉತ್ತರಕಾಂಡ ಹರಿದ್ವಾರದಲ್ಲಿ ನಡೆಯಲಿರುವ ಐವತ್ತನೇ ಜೂನಿಯರ್ ಕರ್ನಾಟಕ ರಾಜ್ಯ ಬಾಲಕರ ಕಬ್ಬಡಿ ತಂಡ

ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕ್ಲಾಸಿಕ್ ನ್ಯಾಷನಲ್ ಕಬಡ್ಡಿ ಕ್ಲಬ್ ವತಿಯಿಂದ ಉತ್ತರಕಾಂಡ ಹರಿದ್ವಾರದಲ್ಲಿ ನಡೆಯಲಿರುವ ಐವತ್ತನೇ ಜೂನಿಯರ್ ಕರ್ನಾಟಕ ರಾಜ್ಯ ಬಾಲಕರ ಕಬ್ಬಡಿ ತಂಡದ ಶಿಬಿರಕ್ಕೆ ಗಣ್ಯರು ಶುಭ ಹಾರೈಸಿದ ಕ್ಷಣ ಸಮಾಜ ಸೇವಕರಾದ ಸುರೇಶ್ ಗೌಡ್ರು ಡಾಕ್ಟರ್ ಅಂಬರೀಶ್ ಜಿ ರಾಜ್ಯ ಕಬ್ಬಡಿ ತಂಡದ ಅಧ್ಯಕ್ಷ ಬಿ ಸಿ ಸುರೇಶ್ ಠಾಣಾಧಿಕಾರಿ ಅಜಯ್ ಸಾರಥಿ ಮತ್ತಿತರು ಹಾಜರಿದ್ದರು.

City Today News 9341997936

ಮಂತ್ರಾಲಯ ಶ್ರೀಗಳಿಂದ ಶ್ರೀಮನ್ ಮೂಲ ರಾಮಚಂದ್ರ ದೇವರ ಸಂಸ್ಥಾನ ಪೂಜೆ

ಬೆಂಗಳೂರಿನ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು  ತಮ್ಮ ಅಮೃತ ಹಸ್ತದಿಂದ ಅಮೃತ ಹಸ್ತ ಪೂಜೆಯನ್ನು ನಡೆವೆರೆಸಿ ಭಕ್ತರಿಗೆ ಫಲಮಂತ್ರಾಂಶತೆ ಕೊಟ್ಟು ಅನುಗ್ರಹಿಸಿದರು

ಈ ಸಂದರ್ಭದಲ್ಲಿ ವಿಶೇಷವಾಗಿ ಜಯನಗರ ಶಾಸಕರಾದ ಸಿ.ಕೆ. ರಾಮಮೂರ್ತಿ, ಬಸವನಗುಡಿ ಶಾಸಕರಾದ ರವಿ ಸುಬ್ರಮಣ್ಯ ಹಾಗೂ ಹಿಂದೂ ನಾಯಕರು ಮತ್ತು ಹೋರಾಟಗಾರರಾದ ಶ್ರೀ ತೇಜಸ್ ಗೌಡರವರು ಭೇಟಿಯಾಗಿ, ಗುರುಗಳ ಆಶೀರ್ವಾದವನ್ನು ಪಡೆದಿದ್ದಾರೆ.    ಹಾಗೂ ಶ್ರೀ ಲಕ್ಷ್ಮೀನಾರಾಯಣ ರವರು ಶ್ರೀಗಳಿಂದ ಫಲಮಂತ್ರಾಂಶತೆ ಸ್ವೀಕರಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರು ಮತ್ತು ಶ್ರೀ ನಂದಕಿಶೋರ್ ಆಚಾರ್ಯರು ಉಪಸ್ಥಿತರಿದ್ದರು.

City Today News 9341997936